ಶಿವಮೊಗ್ಗ: ಶಿವಮೊಗ್ಗದ ಆಲ್ಕೋಳ ಬಳಿ ಕಿಟಕಿ ಮುರಿದು ಸರ್ಕಾರಿ ವೀಕ್ಷಣಾಲಯದಲ್ಲಿದ್ದ ಮೂವರು ಮಕ್ಕಳು ಪರಾರಿಯಾಗಿರುವ ಘಟನೆ ನಡೆದಿದೆ.
ಫೆ.27 ರ ರಾತ್ರಿ 8.30 ರ ಸುಮಾರಿಗೆ 15 ರಿಂದ 17 ವರ್ಷದ ಶಿವಮೊಗ್ಗ, ಭದ್ರಾವತಿ, ಹಾಗೂ ಸಾಗರ ಮೂಲದ ಮೂವರು ಮಕ್ಕಳು, ವೀಕ್ಷಣಾಲಯದಲ್ಲಿನ ಶೌಚಾಲಯದಲ್ಲಿದ್ದ ಕಬ್ಬಿಣದ ಕಿಟಕಿ ಮುರಿದು ಪರಾರಿಯಾಗಿದ್ದಾರೆ.
ವೀಕ್ಷಣಾಲಯದ ಸಿಬ್ಬಂದಿ ಬಸ್ ಸ್ಟ್ಯಾಂಡ್, ರೈಲ್ವೇ ನಿಲ್ದಾಣ ಸೇರಿದಂತೆ ಹಲವೆಡೆ ಶೋಧ ಕಾರ್ಯ ನಡೆಸಿದ್ದಾರೆ. ಆದರೂ ಮಕ್ಕಳು ಪತ್ತೆಯಾಗದ ಹಿನ್ನೆಲೆ ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಕ್ಕಳು ಎಸ್ಕೇಪ್ ಆಗಿರುವುದರಿಂದಾಗಿ ಶಿವಮೊಗ್ಗದ ಸರ್ಕಾರಿ ವೀಕ್ಷಣಾಲಯದ ಅವ್ಯವಸ್ಥೆ ಬಹಿರಂಗವಾಗಿದೆ. ಮಕ್ಕಳನ್ನು ಸೂಕ್ತ ರೀತಿಯಿಂದ ನೋಡಿಕೊಳ್ಳಬೇಕಾದ ಘಟಕದಿಂದಲೇ ನಿರ್ಲಕ್ಷ್ಯ ವಹಿಸಿರುವುದು ಅಚ್ಚರಿಗೆ ಕಾರಣವಾಗಿದೆ.