ಶಿವಮೊಗ್ಗ: ಮೆಗ್ಗಾನ್ ಒಬಿಜಿ ವಾರ್ಡ್ ಗೆ ಲೋಕಾಯುಕ್ತ ಬಿ.ಎಸ್‌ ಪಾಟೀಲ್ ಭೇಟಿ

ಶಿವಮೊಗ್ಗ: ಮೆಗ್ಗಾನ್ ಒಬಿಜಿ ವಾರ್ಡ್ ಗೆ ಲೋಕಾಯುಕ್ತ ಬಿ.ಎಸ್‌ಪಾಟೀಲ್ ವಿಸಿಟ್ ಮಾಡಿ ಕಟ್ಟಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದರ ಬಗ್ಗೆಯೂ ಸುಮೋಟೋ ಪ್ರಕರಣ ದಾಖಲಾಗಿದೆ.

ಶಿಥಿಲ ಕಟ್ಟಡದಲ್ಲಿ ಅವ್ಯವಸ್ಥೆಯನ್ನ ಕಂಡು ಅಸಮಾಧಾನ ವ್ಯಕ್ತಪಡಿಸಿದರು. ವಾರ್ಡ್ ನಲ್ಲಿ ದಿನಾಲು 46 ಹೆರಿಗೆ ಆಗುತ್ತಿದೆ. ಹೆರಿಗೆ ಆದ ಬಾಣಂತಿಯರನ್ನ ಲೋಕಾಯುಕ್ತರು ಮಾತನಾಡಿಸಿದರು. ಈ ವೇಳೆ ಲೋಕಾಯುಕ್ತರ ಕಾಲಿಗೆ ಮಹಿಳೆ ಬಿದ್ದು ನಮಸ್ಕರಿಸಿದರು. ನಮ್ಮ ಮಗುವನ್ನ ಕಾಪಾಡುವಂತೆ ಮನವಿ ಮಾಡಿದರು.

ದಾಕ್ಷಾಯಿಣಿ ಎಂಬುವರಿಗೆ ಎರಡು ಮಕ್ಕಳು ಇದ್ದು, ಮಕ್ಕಳು ಪ್ರೀ ಮೆಚ್ಯೂರ್ ಬೇಬಿಗಳಾಗಿವೆ.ಅವುಗಳು ಎದೆಹಾಲು ಕುಡಿಯುತ್ತಿಲ್ಲ. ದಿನ ಕುಡಿಸಿ ಎಂದು ವೈದ್ಯರು ಹೇಳುತ್ತಾರೆ. ವೈದರು ಎಷ್ಟು ಕುಡಿಸಲು ಹೇಳುತ್ತಿಲ್ಲವೆಂಬುದು ಆರೋಪವಾಗಿದೆ.

ಆದರೆ ವೈದ್ಯರು ಈ ಬಗ್ಗೆ ನಿಧಾನವಾಗಿ ಒಂದೊಂದು ಚಮಚ ಹಾಲುಣಿಸಲು ಸೂಚಿಸಲಾಗಿದೆ. ತರೀಕೆರೆಯಿಂದ ಬಂದಿದ್ದಾರೆ ಇವರು. ಇವರಿಗೆ ಸೂಕ್ತ ಸೂಚನೆಯನ್ನ ನೀಡಲಾಗಿದೆ ಎಂದು ವೈದ್ಯರು ಲೋಕಾಯುಕ್ತರಿಗೆ ತಿಳಿಸಿದರು. ಮುಂದಿನ ಬಾರಿ ಬರುವ ಒಳಗೆ ಮೆಗ್ಗಾನ್ ಆಸ್ಪತ್ರೆ ವೈದ್ಯರ ಹಾಜರಾತಿಯ ಬಗ್ಗೆಯೂ ಲೋಕಾಯುಕ್ತರು ಹಾಜರಾತಿಯನ್ನ‌ ಹಾಜರಿ ಪಡಿಸಲು ಲೋಕಾಯುಕ್ತರು ತಿಳಿಸಿದರು.

ಕಟ್ಟಡದ ಶಿಥಿಲತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಲೋಕಾಯುಕ್ತರು ಈ ಕುರಿತು ಆರೋಗ್ಯ ಇಲಾಖೆ ಪಿಡಬ್ಲೂಡಿಗೆ ಸೂಚಿಸಲಾಗಿದ್ದು ಈ ಕಟ್ಟಡವನ್ನ ಸರಿಪಡಿಸಿಕೊಳ್ಳಬೇಕು ಎಂದು ಸೂಚಿಸಿದರು. ಈ ಕುರಿತು ಸುಮೋಟೋ ಪ್ರಕರಣ ದಾಖಲಾಗಿದೆ‌ ಎಂದರು.

ಎನ್ ಆರ್ ಸಿ ಯಲ್ಲಿ ಕೆಲಸ ಮಾಡುತ್ತಿರುವ 95 ಜನ ನರ್ಸ್ ಗೆ ಕಳೆದ ಮೂರು ತಿಂಗಳಿಂದ ಸಂಬಳವಾಗಿಲ್ಲ. ಈ ಬಗ್ಗೆ ಕ್ರಮಕ್ಕೆ ಲೋಕಾಯುಕ್ತರು ಭರವಸೆ ನೀಡಿದರು.ಮುಂದಿನ ಬಾರಿ ಮೆಗ್ಗಾನ್ ಆಸ್ಪತ್ರೆಗೆ ವಿಸಿಟ್ ಮಾಡುವುದಾಗಿ ಭರವಸೆ ನೀಡಿದ್ದಾರೆ.

Ashika S

Recent Posts

ಪಡೀಲಿನಲ್ಲಿ ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯಕ್ಕೆ ಅಮಾಯಕ ವ್ಯಕ್ತಿ ಬಲಿ !

ಕಾರು ಚಲಾಯಿಸುತ್ತಿದ್ದ ಮಹಿಳೆಯ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿ ರಸ್ತೆ ಬದಿ ಬೈಕ್ ನಿಲ್ಲಿಸಿ ಮೊಬೈಲಿನಲ್ಲಿ ಮಾತನಾಡುತ್ತಿದ್ದ ಅಮಾಯಕ ವ್ಯಕ್ತಿಯೊಬ್ಬರು ಪ್ರಾಣ…

17 seconds ago

ಮಾಜಿ ಸಚಿವ ಹೆಚ್​.ಡಿ ರೇವಣ್ಣಗೆ ಬಿಗ್ ರಿಲೀಫ್

ಮಾಜಿ ಸಚಿವ ಹೆಚ್​.ಡಿ ರೇವಣ್ಣ ಅವರಿಗೆ 42ನೇ ಎಸಿಎಂಎಂ ಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಮಧ್ಯಂತರ ಜಾಮೀನು ಪಡೆದು ಹೊರಗಿದ್ದ…

21 mins ago

ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದ ರೈತನಿಗೆ ವಂಚಿಸಿದ ಅಪರಿಚಿತ

ಜಿಲ್ಲೆಯ ಹನೂರು ಪಟ್ಟಣದ ಎಟಿಎಂ ನಲ್ಲಿ ಹಣ ತೆಗೆದುಕೊಡಿ ಎಂದು ಕೇಳಿದ ರೈತನಿಗೆ ಕೀಡಿಗೇಡಿಯೋರ್ವ ವಂಚಿಸಿ ಹಣ ಲಪಾಟಿಸಿರುವ ಘಟನೆ…

23 mins ago

ಅಕ್ರಮ ಕಲ್ಲುಕೋರೆ : ಬಿಜೆಪಿ ಯುವ ಮುಖಂಡನ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ

ಅಕ್ರಮ ಕಲ್ಲುಕೋರೆ ದಾಳಿ ನೆಪದಲ್ಲಿ ಬಿಜೆಪಿ ಯುವ ಮುಖಂಡನ ಬಂಧಸಿದ ಹಿನ್ನಲೆ, ಬೆಳ್ತಂಗಡಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ…

24 mins ago

ನಿರ್ಮಾಪಕ ನನಗೆ ಬೆದರಿಕೆ ಹಾಕುತ್ತಿದ್ದಾರೆ : ʻಹೆಡ್‌ಬುಷ್‌́ ನಟಿ ಗಂಭೀರ ಆರೋಪ

ಪಂಜಾಬಿ ಬ್ಯೂಟಿ ಪಾಯಲ್‌ ರಜಪೂತ್‌ ಅವರು ನಿರ್ಮಾಪಕರ ವಿರುದ್ಧ ಹೆಡ್‌ಬುಷ್‌ ನಟಿ ಬೆದರಿಕೆ ಹಾಕುತ್ತಿದ್ದಾರೆಂದು ಹೆಡ್‌ಬುಷ್‌ ನಟಿ ಆರೋಪಿಸುತ್ತಿದ್ದಾರೆ. RX…

2 hours ago

ಟಿಪ್ಪರ್- ಬೈಕ್ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ…

2 hours ago