ಶಿವಮೊಗ್ಗ: ಶಿವಮೊಗ್ಗದಲ್ಲಿ ನಿಷೇಧಿತ ಸಂಘಟನೆಯ ಪಿಎಫ್ಐ ಕಾರ್ಯಕರ್ತರ ಮನೆಗಳ ಮೇಲೆ ಹಾಗೂ ಎಸ್ ಡಿಪಿ ಸ್ಥಳೀಯ ಕಚೇರಿಯ ಮೇಲೆ ಪೊಲೀಸರಿಂದ ದಾಳಿ ನಡೆದಿದೆ. ಐದು ಕಡೆ ದಾಳಿ ನಡೆದಿರುವುದು ತಿಳಿದು ಬಂದಿದೆ.
ಪಿಎಫ್ಐ ಸಂಘಟನೆಯನ್ನ ಬ್ಯಾನ್ ಆಗಿದ್ದರೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ವಿವಿಧೆಡೆ ಪಿಎ ಕಂದಾಯ ಅಧಿಕಾರಿ ಮತ್ತು ಪೊಲೀಸ್ ನೇತೃತ್ವದಲ್ಲಿ ದಾಳಿ ನಡೆದಿದೆ. ಸರ್ಚ್ ವಾರೆಂಟ್ ಹಿಡಿದು ಬಂದ ಅಧಿಕಾರಿಗಳು ಗಾಂಧಿ ಬಜಾರ್ ನಲ್ಲಿರುವ ಪಿಎಫ್ಐ ಕಾರ್ಯಕರ್ತ ಉಮರ್ ಫಾರುಕ್, ಹಾಗೂ ಬೈಪಾಸ್ ನಲ್ಲಿರುವ ಎಸ್ ಡಿಪಿಐ ಕಚೇರಿಯ ಮೇಲೆ ದಾಳಿ ನೆಡೆದಿದೆ.
ಉಮರ್ ಫಾರೂಕ್ ಮನೆಯನ್ನ ಪೊಲೀಸರು ಬೀಗ ಹಾಕಿಕೊಂಡು ಹೋಗಿದ್ದಾರೆ. ಕುಂಸಿ ಠಾಣೆ ಪಿಐ ಹರೀಶ್ ಪಟೇಲ್ ಮತ್ತು ಸ್ಮಾರ್ಟ್ ಸಿಟಿ ಎಂಡಿ ಚಿದಾನಂದ ವಠಾರೆಯಿಂದ ದಳಿ ನಡೆದಿದೆ. ಎಸ್ ಡಿಪಿಐ ಕಚೇರಿ ಯನ್ನೂ ಸಹ ಕೋಟೆ ಪಿಐ ಚಂದ್ರಶೇಖರ್ ಮತ್ತು ತಹಶೀಲ್ದಾರ್ ಡಾ.ನಾಗರಾಜ್ ದಾಳಿ ನಡೆಸಿ ಕಚೇರಿಗೆಬೀಗ ಜಡೆದಿದ್ದಾರೆ.
ಟಿಪ್ಪುನಗರ ಏಳನೇ ತಿರುವಿನಲ್ಲಿರುವ ಎಸ್ ಡಿಪಿಐ ಜಿಲ್ಲಾ ಮಾಜಿಅಧ್ಯಕ್ಷ ಸಲೀಂ ಖಾನ್ ಮನೆಗೆ ತೆರಳಿರುವ ವಿನೋಬ ನಗರ ಪಿಐ ಮತ್ತು ಕಂದಾಯ ಇಲಾಖೆಯವರು ಅವರ ತಂದೆಯವರ ಬಳಿ ಮಾಹಿತಿ ಪಡೆದಿದ್ದಾರೆ. ಸಲೀಂ ಖಾನ್ ಮನೆಯಲ್ಲಿ ಇಲ್ಲದಿರುವುದು ಕಂಡು ಬಂದಿದೆ.
ಸಂಘಟನೆಯನ್ನ ಬ್ಯಾನ್ ಮಾಡಿರುವ ಹಿನ್ಬಲೆಯಲ್ಲಿ ತಿಳುವಳಿಕೆ ಪತ್ರ ನೀಡುತ್ತಿರುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆ. ಗೋಪಾಳ ಪ್ರೆಸ್ ಕಾಲೋನಿ ಪಿಎಫ್ಐನ ಅಧ್ಯಕ್ಷ ಒಬೆದುಲ್ಲಾ ಮನೆಯ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಐ ಅಭಯ್ ಪ್ರಕಾಶ್ ಮತ್ತು ಸೂಡಾ ಆಯುಕ್ತ ಕೊಟ್ರೇಶ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಒಬೆದುಲ್ಲಾರವರು ಸಹ ಮನೆಯಲ್ಲಿ ಇಲ್ಲದಿರುವುದು ತಿಳಿದುಬಂದಿದೆ.
ಬೈಪಾಸ್ ನಲ್ಲಿರುವ ಗುಂಡಿ ಬಡಾವಣೆಯಲ್ಲಿ ಪಿಎಫ್ಐನ ಮಾಜಿ ಅಧ್ಯಕ್ಷ ರಿಜ್ವಾನ ಮನೆಯ ಮೇಲೆ ಶೋಧಾ ಕಾರ್ಯ ನಡೆದಿದೆ ಇಲ್ಲೂ ಸಹ ಆರೋಪಿತರು ಮನೆಯಲ್ಲಿ ಇಲ್ಲದಿರುವುದು ಕಂಡು ಬಂದಿದೆ. ಸಿಮ್ಸ್ ಸಿಎಒ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ದೊಡ್ಡಪೇಟೆ ಠಾಣೆ ಪಿಐ ಅಂಜನ್ ಕುಮಾರ್ ದಾಳಿಯಲ್ಲಿ ಭಾಗಿಯಾಗಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ಸಿನಿಮಾಗಳು.…
ಹಣ್ಣುಗಳ ರಾಜನೆಂದು ಕರೆಯಲಾಗುವ, ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ದೊಡ್ಡಣಗುಡ್ಡೆಯ ಶಿವಳ್ಳಿ ಮಾದರಿ ತೋಟಗಾರಿಕಾ…
ಕನ್ನಡ ಚಿತ್ರರಂಗದ ಸರ್ವಕಾಲಿಕ ಸೂಪರ್ ಹಿಟ್ ಚಿತ್ರ ಉಪೇಂದ್ರ ನಿರ್ದೇಶನದ “A” ಸಿನಿಮಾ ಇಂದು ರೀ ರಿಲೀಸ್ ಆಗಿದೆ. ಬೆಂಗಳೂರಿನ…
ಚಾರ್ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…
ಭಾರತದ ಎಂಡಿಎಚ್ ಹಾಗೂ ಎವರೆಸ್ಟ್ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…
ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…