ಶಿವಮೊಗ್ಗ: ಅಭಿವೃದ್ಧಿ ಬಗ್ಗೆ ಟೀಕಿಸುವ ವಿರೋಧಿಗಳಿಗೆ ಸಂಸದ ಬಿ ವೈ.ರಾಘವೇಂದ್ರ ಖಡಕ್ ಉತ್ತರ ನೀಡಿದ್ದಾರೆ. ಇಷ್ಟು ಹೊತ್ತಿಗೆ ವಿಮಾನ ನಿಲ್ದಾಣ ಹಾರಾಡಬೇಕಿತ್ತು ಸಂಸದರ ವಿಮಾನ ಯಾಕೆ ಹಾರಾಡುತ್ತಿಲ್ಲ. ಇಷ್ಟುಹೊತ್ತಿಗೆ ಬೆಂಗಳೂರು ಹೈವೆ ಆರಂಭವಾಗಬೇಕಿತ್ತು ಇನ್ನೂ ಕುಂಠಿತವಾಗುತ್ತಿದೆ ಎಂಬ ವ್ಯಂಗ್ಯ ಮಾತಿಗೆ ಬಿ.ವೈ.ಆರ್ ತಮ್ಮದೇ ಆದ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಸಂಸದ ವಿಮಾನ ನಿಲ್ದಾಣಕ್ಕೆ ನಾಮಕರಣಕ್ಕಿಂತ ಉದ್ಘಾಟನೆ ಮಾಡಲಿದ್ದೇವೆ. ಪರವಾನಗಿ ಒಪ್ಪಿಗೆ ಪಡೆಯುವ ಅವಕಾಶವಿದೆ. ವಿಮಾನ ನಿಲ್ದಾಣ ಸಂಪೂರ್ಣವಾಗಿ ಮುಗಿದಿದೆ ಎಂದು ತಿಳಿಸಿದರು.
ವಿಮಾನ ನಿಲ್ದಾಣದ ಇಂಟಿರಿಯರ್ ರನ್ ವೇ ಎಟಿಆರ್ ಟವರ್ ಕಾಮಗಾರಿ ಮುಗಿದಿದೆ. ವಿಮಾನ ಹಾರಾಕ್ಕೆ 50 ನಮೂನೆಯ ಪರವಾನಿಗೆ ಬೇಕು. ಹಾಗಾಗಿ ತಡವಾಗಿದೆ. ಇವೆಲ್ಲದಕ್ಕಿಂತಲೂ ಪರಿಸರ ಅನುಮೋದನೆ ಪಡೆಯಬೇಕಿತ್ತು. ಸಂಸತ್ ಅಧಿವೇಶನ ವೇಳೆ ಡಿಜಿ ಸಿಎ ಮತ್ತು ಪರಿಸರ ಸಮಿತಿಯ ಅಧ್ಯಕ್ಷರನ್ನ ಒಟ್ಟಿಗೆ ಕೂರಿಸಿ ನಮ್ಮ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಪರಿಸರ ಒಪ್ಪಿಗೆ ಪಡೆಯಲಾಗಿದೆ ಎಂದರು.
ಎಲ್ಲಾ ಏರ್ ವೇಸ್ ನ್ನ ಕಂಪನಿಯನ್ನ ಭೇಟಿ ಮಾಡಿದ್ದೇವೆ. ಶಿವಮೊಗ್ಗದಲ್ಲಿ ಭವಿಷ್ಯವಿದೆ ಎಂದು ಹೇಳಲಾಗಿದೆ. ಇದರಿಂದ ನಾಲ್ಕು ಕಂಪನಿಗಳು ವಿಮಾನ ಹಾರಿಸಲು ಮುಂದು ಬಂದಿವೆ. ಈ ತಿಂಗಳ ಕೊನೆಯಲ್ಲಿ ಒಪ್ಪಿಗೆ ಪಡೆಯಬೇಕಿದ್ದ 50 ನಮೂನೆಯ ಪರವಾನಗಿಗೆ ಒಪ್ಪಿಗೆ ಸಿಗಲಿದೆ ಎಂದರು.
ವಿಮಾನ ಹಾರಾಟವಿಲ್ಲದೆ ವಿಮಾನ ಉದ್ಘಾಟನೆಯನ್ನ ಇವತ್ತೇ ಆರಂಭಿಸಬಹುದು ಆದರೆ ಇದು ಸರಿ ಕಾಣೋದಿಲ್ಲ. ಹಾಗಾಗಿ ನೈಟ್ ಲ್ಯಾಂಡಿಂಗ್ ಗೆ ಸಹ ಒಪ್ಪಿಗೆ ಸಿಗಬೇಕಿದೆ. ಇದು ತಡವಾದರೂ ನಡೆಯಿತ್ತೆ. ಆದರೆ ಯಾವ ಯಾವ ಒಪ್ಪಿಗೆ ಪಡೆಯಬೇಕೋ ಅದೆಲ್ಲವುದರ ಒಪ್ಪಿಗೆ ಪಡೆದು ಉದ್ಘಾಟಿಸಲು ಚಿಙತಿಸಲಾಗುತ್ತಿದೆ ಎಂದರು.
ರಸ್ತೆ ಅಭಿವೃದ್ಧಿ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಕುಂಠಿತವಾಗುತ್ತಿಲ್ಲ. ಸರಿಯಾದ ರೀತಿಯಲ್ಲಿಯೇ ಸಾಗುತ್ತಿದೆ. ತರಿಕೆರೆಯಿಂದ ಶಿವಮೊಗ್ಗದ ವರೆಗೆ ಸ್ಟೇಜ್ 4ರಲ್ಲಿ ಕಾಮಗಾರಿ ನಡೆಯಬೇಕಿದೆ. ಈಗಾಗಲೇ ಸ್ಟೇಜ್ 1,2,3ರ ಕಾಮಗಾರಿ ಮುಗಿದಿದೆ. ಸ್ಟೇಜ್ 4 ಇತ್ತೀಚೆಗೆ ಟೆಂಡರ್ ಕರೆಯಲಾಗಿದೆ. ಈಗಾಗಲೇ ಭೂಮಿ ವಶಪಡೆದುಕೊಳ್ಳುವ ಪ್ರಕ್ರಿಯೆ ಮುಗಿದಿದೆ. ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ಈ ಕಾಮಗಾರಿ ಮುಗಿಯಲಿದೆ. ಚಿತ್ರದುರ್ಗ ರಸ್ತೆಯ ಕಾಮಗಾರಿ ಮುಗಿದಿದೆ ಎಂದರು.
ಕೇಂದ್ರದ ಗತಿಶಕ್ತಿ ಯೋಜನೆಯಲ್ಲಿ ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಹೈವೆ ನಿರ್ಮಿಸಲಾಗುತ್ತಿದೆ. ಹಾಗಾಗಿ ಚಿತ್ರದುರ್ಗದ ಮೂಲಕ ಮಂತ್ರಾಲಯದ ರಸ್ತೆ ಸಾಗುವುದರಿಂದ ಹೊರರಾಜ್ಯಕ್ಕೂ ಶಿವಮೊಗ್ಗಕ್ಕೆ ಸಾಧಿಸಲಾಗುತ್ತಿದೆ ಎಂದರು. ಇದರ ಜೊತೆಗೆ ಶಿವಮೊಗ್ಗದ ಮೂಲಕ ತೀರ್ಥಹಳ್ಳಿಯಿಂದ ಕೋರ್ಟ್ ಕನೆಕ್ಟಿವಿಟಿಯಲ್ಲಿ ಮಂಗಳೂರಿಗೆ ಸಂಪರ್ಕ ಸಾಧಿಸಲಾಗುತ್ತಿದೆ. ಇದೇ ಯೋಜನೆಯಲ್ಲಿ ಶಿವಮೊಗ್ಗದ ರಿಂಗ್ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ ಎಂದರು.
ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿಯನ್ನ ಭೇಟಿ ಮಾಡಿದ್ದೇನೆ. ಒಂದು ವಾರದಲ್ಲಿ ಲಯನ್ ಸಫಸರಿಯಿಂದ ತಾಳಗುಪ್ಪದ ವರೆಗೆ ರಸ್ತೆ ಅಗಲೀಕರಣಕ್ಕೆ 750 ಕೋಟಿ ರೂ ಡಿಪಿಆರ್ ತಯಾರಿಯಾಗಲಿದೆ. ಇದರ ಒಪ್ಪಿಗೆಯನ್ನೂ ಪಡೆಯಲಾಗಿದೆ. ರಾಜ್ಯದಲ್ಲಿ 6500 ಕಿಮಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು.