News Karnataka Kannada
Monday, April 29 2024
ಶಿವಮೊಗ್ಗ

ಶಿವಮೊಗ್ಗ: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ದಾಳಿ, ಓರ್ವನ ಬಂಧನ

ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಎರಡು ಲಾರಿ ಹಾಗೂ ಸಾವಿರಾರು ರೂಪಾಯಿ ಮೌಲ್ಯದ ಮರಳನ್ನು ಹಾಗೂ ನಾಲ್ಕು ಮಂದಿ ಆರೋಪಿಗಳನ್ನು ಬಂಟ್ವಾಳ ‌ನಗರ ಠಾಣಾ ಎಸ್.ಐ.ರಾಮಕೃಷ್ಣ ನೇತ್ರತ್ವದ ಪೋಲೀಸ್ ತಂಡ ವಶಕ್ಕೆ ಪಡೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
Photo Credit : Pixabay

ಶಿವಮೊಗ್ಗ: ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ವಿನೋಬ ನಗರ ಪೊಲೀಸರು ದಾಳಿ ನಡೆಸಿ ಎರಡು ಡೊಮೆಸ್ಟಿಕ್ ಗ್ಯಾಸ್ ಸಿಲಿಂಡರ್, ಎರಡು 3 ಕೆಜಿಯ ಸಿಲಿಂಡರ್, ರೀಫಿಲ್ಲಿಂಗ್ ರಾಡು ಪೈಪ್ ಗಳನ್ನ ವಶಪಡಿಸಿಕೊಳ್ಳಲಾಗಿದೆ ಓರ್ವನನ್ನ‌ ಬಂಧಿಸಲಾಗಿದೆ.

ವಿನೋಬ ನಗರದ 5 ನೇ ತಿರುವಿನಲ್ಲಿ ಬಸವೇಶ್ವರ ಎಂಟರ್ ಪ್ರೈಸಸ್ ನಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕವಾಗಿ ಗ್ಯಾಸ್ ರೀಫಿಲಿಂಗ್ ಮಾಡುತ್ತಿದ್ದ ಜಾಗದ ಮೇಲೆ ಪಿಐ ರವಿಕುಮಾರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಸಣ್ಣ ಪೈಪ್ ಮೂಲಕ ದೊಡ್ಡ ಸಿಲಿಂಡರ್ ನಿಂದ ಚಿಕ್ಕ ಸಿಲಿಂಡರ್ ಗೆ ಗ್ಯಾಸ್ ತುಂಬಿಸಲಾಗುತ್ತಿತ್ತು.

ದಾಳಿ ನಡೆದ ವೇಳೆ ಸಾರ್ವಜನಿಕರು ಪರಾರಿಯಾಗಿದ್ದಾರೆ. ಕಾಶಿಪುರದ ಲಕ್ಕಪ್ಪ ಬಡಾವಣೆಯ ನಿವಾಸಿ ಹಾಗೂ‌ಎಂಟರ್ ಪ್ರೈಸಸ್ ನ ಮಾಲೀಕ ಶಶಿಕುಮಾರ್ ಎಂಬುವರನ್ನ‌ ಬಂಧಿಸಲಾಗಿದೆ. ಎಂಟರ್ ಪ್ರೈಸಸ್ ಹಳೆಯ ಗ್ಯಾಸ್ ಸ್ಟೋವ್ ಗಳನ್ನು ರಿಪೇರಿ ಮಾಡುವ ಮತ್ತು ಬಿಡಿ ಭಾಗಗಳನ್ನು ಮಾರಾಟ ಮಾಡುವ ಅಂಗಡಿಯಾಗಿದೆ.

ಅಂಗಡಿಯಲ್ಲಿ, ಗ್ಯಾಸ್ ರೀ ಫಿಲಿಂಗ್ ಗೆ ಬಳಸಿದ 02 ದೊಡ್ಡ ಸಿಲಿಂಡರ್ ಗಳಿದ್ದು ಅದರಲ್ಲಿ ಹೆಚ್ ಪಿ ಕಂಪನಿಯ 16.1 ಕೆ ಜಿ ಸಾಮರ್ಥ್ಯದ ತುಂಬಿದ ಸಿಲಿಂಡರ್, ಇನ್ನೊಂದು ಬಾರತ್ ಗ್ಯಾಸ್ ಕಂಪನಿಯ 15.7 ಕೆ ಜಿ ಸಾಮರ್ಥ್ಯದ ಅರ್ಧ ತುಂಬಿದ ಸಿಲಿಂಡರ್, 03 ಕೆ ಜಿ ಸಾಮರ್ಥ್ಯದ 02 ಖಾಲಿ ಸಿಲಿಂಡರ್, ಒಂದು ಎಲೆಕ್ಟ್ರಾನಿಕ್ ತಕ್ಕಡಿ, ಒಂದು ರೀ ಫಿಲಿಂಗ್ ರಾಡ್ ಹಾಗೂ ರೆಗ್ಯುಲೇಟರ್ ಇರುವ ರೀ ಫಿಲಿಂಗ್ ಪೈಪ್ ದೊರೆತಿರುತ್ತೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು