News Karnataka Kannada
Tuesday, April 30 2024
ಶಿವಮೊಗ್ಗ

ಶಿವಮೊಗ್ಗ: ವಿಐಎಸ್ ಎಲ್ ಕಾರ್ಖಾನೆ ಆರಂಭಿಸಲು ಪ್ರಯತ್ನಿಸಲಾಗಿದೆ- ಬಿ.ವೈ. ರಾಘವೇಂದ್ರ

ಎದುರಾಳಿ ಪಕ್ಷದ ಅಭ್ಯರ್ಥಿ ಯಾರೆಂದು ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
Photo Credit : By Author

ಶಿವಮೊಗ್ಗ: ವಿಐಎಸ್ ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಯಾವುದೇ ಮಾರ್ಗ ಮುಚ್ಚಿಲ್ಲವೆಂದು ಸಂಸದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಐಎಸ್ ಎಲ್ ಆರಂಭಿಸಲು ಪ್ರಯತ್ನಿಸಲಾಗಿದೆ ಸವಾಲೆದುರಾಗಿದೆ.‌ನಿನ್ನೆ ಸಿಎಂ ಜೊತೆ ಮಾತನಾಡಿ ವಿಐಎಸ್ ಎಲ್ ಉಳಿಸುವ ಕುರಿತು ಪ್ರಸ್ತಾಪಿಸಿರುವೆ. ಸಂಸ್ಥೆಯನ್ನ ಉಳಿಸಿಕೊಂಡು ಹೋಗಲು ತಯಾರಿದೆ. ಕಾರ್ಮಿಕ ಮುಖಂಡರ ಜೊತೆ ಸಭೆ ಕರೆಯಲಾಗಿದೆ.

ಹೊಸ ಪ್ರಯತ್ನವಿಲ್ಲ. ಉಳಿದ ದಿನಗಳಲ್ಲಿ ಹೇಗೆ ಹೋರಾಟ ಮಾಡಲಾಗುವುದು ಯೋಚಿಸಲಾಗುತ್ತಿದೆ. ವಿಐಎಸ್ ಎಲ್ ಕ್ವಾಟ್ರಸ್ ಉಳಿಸಿಕೊಳ್ಳಲು ದೆಹಲಿಗೆ ಡೆಲಿಗೇಷನ್ ಹೋಗಿದ್ದಾರೆ. ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಲೇ ವಾಪಾಸ್ ಪಡೆದು ನಡೆಸುವ ಪ್ರಯತ್ನ ಗಳಿವೆ ಯಾವುದೂ ಮುಚ್ಚಿಲ್ಲವೆಂದ ಸಂಸದರು ಒಂದು ವಾರದ ನಂತರ ಯಾವುದು ಸೂಕ್ತವೆಂದು ತಿಳಿದು ಮುಂದು ವರೆಯಲಾಗುವುದು ಎಂದರು.

ನೂರು ವರ್ಷದ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿರುವ ಬಗ್ಗೆ ಸಾರ್ವಜನಿಕರ ಆಕ್ರೋಶ ಸಹಜ. ಪ್ರತಿಭಟನೆ, ಘೇರಾವ್ ಇವೆಲ್ಲಾವೂ ಸಹಜ. ಆದರೆ ಅದನ್ನ ಯಾವ ರೀತಿಯಲ್ಲಿ ಉಳಿಸಿಕೊಳ್ಳಬಹುದು ಎಂದು ಯೋಚಿಸಲಾಗುತ್ತಿದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರಿಗೆ 9500 ಎಕರೆ ಜಮೀನನ್ನ ಉಳುಸಲು ಕೇಂದ್ರಕ್ಕೆ ಕಳುಹಿಸಲು ಒಪ್ಪಿಗೆ ನೀಡಲಾಗಿದೆ. ಕೇಂದ್ರಕ್ಕೆ ಹೋದ ಮೇಲೆ ವಾಪಾಸ್ ಬರಬಾರದು ಎಂದರು.

ಜಿಲ್ಲಾ ಬಿಜೆಇ ಅಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಅಶೋಕ್ ನಾಯ್ಕ್, ಎಸ್ ಎಸ್ ಜ್ಯೋತಿ ಪ್ರಕಾಶ್ ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.‌

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು