ಶಿವಮೊಗ್ಗ: ವಿಐಎಸ್ ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಯಾವುದೇ ಮಾರ್ಗ ಮುಚ್ಚಿಲ್ಲವೆಂದು ಸಂಸದ ಬಿ.ವೈ. ರಾಘವೇಂದ್ರ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಐಎಸ್ ಎಲ್ ಆರಂಭಿಸಲು ಪ್ರಯತ್ನಿಸಲಾಗಿದೆ ಸವಾಲೆದುರಾಗಿದೆ.ನಿನ್ನೆ ಸಿಎಂ ಜೊತೆ ಮಾತನಾಡಿ ವಿಐಎಸ್ ಎಲ್ ಉಳಿಸುವ ಕುರಿತು ಪ್ರಸ್ತಾಪಿಸಿರುವೆ. ಸಂಸ್ಥೆಯನ್ನ ಉಳಿಸಿಕೊಂಡು ಹೋಗಲು ತಯಾರಿದೆ. ಕಾರ್ಮಿಕ ಮುಖಂಡರ ಜೊತೆ ಸಭೆ ಕರೆಯಲಾಗಿದೆ.
ಹೊಸ ಪ್ರಯತ್ನವಿಲ್ಲ. ಉಳಿದ ದಿನಗಳಲ್ಲಿ ಹೇಗೆ ಹೋರಾಟ ಮಾಡಲಾಗುವುದು ಯೋಚಿಸಲಾಗುತ್ತಿದೆ. ವಿಐಎಸ್ ಎಲ್ ಕ್ವಾಟ್ರಸ್ ಉಳಿಸಿಕೊಳ್ಳಲು ದೆಹಲಿಗೆ ಡೆಲಿಗೇಷನ್ ಹೋಗಿದ್ದಾರೆ. ಅವರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಸರ್ಕಾರದಿಂದ ಲೇ ವಾಪಾಸ್ ಪಡೆದು ನಡೆಸುವ ಪ್ರಯತ್ನ ಗಳಿವೆ ಯಾವುದೂ ಮುಚ್ಚಿಲ್ಲವೆಂದ ಸಂಸದರು ಒಂದು ವಾರದ ನಂತರ ಯಾವುದು ಸೂಕ್ತವೆಂದು ತಿಳಿದು ಮುಂದು ವರೆಯಲಾಗುವುದು ಎಂದರು.
ನೂರು ವರ್ಷದ ಕಾರ್ಖಾನೆ ಮುಚ್ಚುವ ಹಂತಕ್ಕೆ ತಲುಪಿರುವ ಬಗ್ಗೆ ಸಾರ್ವಜನಿಕರ ಆಕ್ರೋಶ ಸಹಜ. ಪ್ರತಿಭಟನೆ, ಘೇರಾವ್ ಇವೆಲ್ಲಾವೂ ಸಹಜ. ಆದರೆ ಅದನ್ನ ಯಾವ ರೀತಿಯಲ್ಲಿ ಉಳಿಸಿಕೊಳ್ಳಬಹುದು ಎಂದು ಯೋಚಿಸಲಾಗುತ್ತಿದೆ ಎಂದರು.
ಶರಾವತಿ ಮುಳುಗಡೆ ಸಂತ್ರಸ್ತರಿಗೆ 9500 ಎಕರೆ ಜಮೀನನ್ನ ಉಳುಸಲು ಕೇಂದ್ರಕ್ಕೆ ಕಳುಹಿಸಲು ಒಪ್ಪಿಗೆ ನೀಡಲಾಗಿದೆ. ಕೇಂದ್ರಕ್ಕೆ ಹೋದ ಮೇಲೆ ವಾಪಾಸ್ ಬರಬಾರದು ಎಂದರು.
ಜಿಲ್ಲಾ ಬಿಜೆಇ ಅಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಅಶೋಕ್ ನಾಯ್ಕ್, ಎಸ್ ಎಸ್ ಜ್ಯೋತಿ ಪ್ರಕಾಶ್ ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.