ಶಿವಮೊಗ್ಗ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಡಾ.ಲಕ್ಷ್ಮೀಪ್ರಸಾದ್ ರೊಂದಿಗೆ ಇಂದು ಮೀಡಿಯಾ ಹೌಸ್ ನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆ ಸಂವಾದ ಕಾರ್ಯಕ್ರಮವನ್ನ ಹಮ್ನಿಕೊಂಡಿತ್ತು.
ಮೊದಲಿಗೆ ಎಸ್ಪಿ ಲಕ್ದ್ಮೀಪ್ರಸಾದ್ ಗಣಪತಿಯ ತಯಾರಿಗಳ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಈಗಾಗಲೇ ಶಿವಮೊಗ್ಗದ ಮೂರು ಕಡೆ ಗಣಪತಿ ಶಾಂತಿ ಸಭೆ ಸಭೆ ನಡೆಸಲಾಗಿದೆ. ಸಾಗರ ಭದ್ರಾವತಿ ಶಿವಮೊಗ್ಗದಲ್ಲಿ ಶಾಂತಿ ಸಭೆ ನಡೆಸಲಾಗಿದೆ. ಮುಂಜಾಗೃತ ಕ್ರಮ ವಹಿಸಲಾಗಿದೆ.
ಈಗ ನಮಗೆ ಈಗ ಸಮಸ್ಯೆ ಇರುವುದು ಫ್ಲೆಕ್ಸ್, ಬ್ಯಾನರ್ ಮತ್ತು ಬಂಟಿಂಗ್ಸ್ ನಲ್ಲಿ ನಮಗೆ ಸಮಸ್ಯೆ ಇದೆ. ಸ್ಥಳದ ಸ್ಪರ್ಧೆ ಉದ್ಭವಿಸುವುದರಿಂದ ಸ್ಥಳಗಳು ಸೂಕ್ಷ್ಮತೆಯಾಗಿವೆ. ಸಾಋವಜನಿಕರು ಅರಿತುಕೊಳ್ಳಬೇಕು. ಇದೇ ಸ್ಥಳದಲ್ಲಿ ಹಾಕಬೇಕು ಎಂಬ ವಿಷಯದ ಬಗ್ಗೆ ಸಾರ್ವಜನಿಕರು ಅರಿಯಬೇಕಿದೆ.
ಬ್ಯಾನರ್ ಫ್ಲೆಕ್ಸ್ ವಿಚಾರದಲ್ಲಿ ಪೊಲೀಸರ ಮಾತಕೇಳುವಂತೆ ಗಣಪತಿ ಸಮಿತಿಯವರಿಗೆ ವಿನಂತಿಸಿದ್ದಾರೆ. . ಮೆರವಣಿಗೆಯಲ್ಲಿ ಅನ್ಯಕೋಮಿನ ವಿರುದ್ಧ ಘೋಷಣೆ ಕೂಗುದ್ರೂ ಬೀಳುತ್ತೆ ಕೇಸ್ ಎಂದು ಖಡಕ್ ಎಚ್ಚರಿಕೆ ನೀಡಿದರು.
ಸಂಭ್ರಮ ಆಚರಣೆ ಮಾಡಬೇಕು. ನಮಗೆ ಪವರ್ ಡಿಪ್ಲಾಯಿಂಗ್ ನಮ್ಮ ಮುಂದೆ ಇರುವ ವಿಷಯವಾಗಿದೆ. ನಿನ್ಬೆ ನಡೆದ ದಾಳಿಯನ್ನ ಬಹಿರಂಗ ಪಡಿಸಲು ಆಗೊದಲ್ಲ. ಆದರೆ ಮಹತ್ವದ ದಾಖಲೆ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.