News Karnataka Kannada
Thursday, May 02 2024
ಶಿವಮೊಗ್ಗ

ಪಠ್ಯ ಪುಸ್ತಕ ವಾಪಾಸ್ಸು ಪಡೆಯುವ ತನಕ ಹೋರಾಟ ಮುಂದುವರೆಯಲಿದೆ: ಬಿ.ಕೆ. ಹರಿಪ್ರಸಾದ್‌

Bk Hariprasad
Photo Credit :

ತೀರ್ಥಹಳ್ಳಿ: ಪುಂಡು ಪೋಕರಿಗಳೆಲ್ಲ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಲ್ಲಿ ಸೇರಿಕೊಂಡರೆ ಸಮಾಜದಲ್ಲಿ ಅಶಾಂತಿ ಉಂಟಾಗುವುದು ಸಹಜ. ಪಠ್ಯ ಪುಸ್ತಕ ವಾಪಾಸ್ಸು ಪಡೆಯುವ ತನಕ ಹೋರಾಟ ಮುಂದುವರೆಯಲಿದೆ ಎಂದು ರಾಜ್ಯಸಭಾ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಠ್ಯ ಪುಸ್ತಕಗಳು ಈ ದೇಶದ ನೆಲ ಜಲದ ಮಹಾನ್‌ ಸಾಧಕರ ಜೀವನವನ್ನು ಕಟ್ಟಿಕೊಡುವ ಮೂಲಕ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತವೆ. ಪಠ್ಯ ಪುಸ್ತಕವನ್ನು ಸಮರ್ಥರಾದ ಶಿಕ್ಷಣ ತಜ್ಞರು, ಸಮಾಜಪರ ಚಿಂತಕರು ರೂಪಿಸಬೇಕು.

ರೋಹಿತ್‌ ಚಕ್ರತೀರ್ಥ ಯಾವ ಶಿಕ್ಷಣ ತಜ್ಞನೂ ಅಲ್ಲ ಈತ ನಾಗಪುರ ಯೂನಿವರ್ಸಿಟಿ ಕೊಡುಗೆ ಅಷ್ಟೇ. ಅವರಿಗೆ ಯಾವತ್ತೂ ಈ ದೇಶದ ಸಂವಿಧಾನ ಬಹುಸಂಸ್ಕೃತಿಯ, ಜೀವನ ಪದ್ಧತಿಯ ವಿವಿಧತೆಯಲ್ಲಿ ಏಕತೆ ಎಂಬ ತತ್ವದಲ್ಲಿ ನಂಬಿಕೆಯೇ ಇಲ್ಲ. ಅದು ಪದೇ ಪದೇ ಸಾಭೀತಾಗಿದೆ. ಪಠ್ಯ ಪುಸ್ತಕ ಪರಿಷ್ಕರಣೆಯಲ್ಲೂ ಕೂಡ ಸಮಾಜ ವಿರೋಧಿ ಧೋರಣೆಯನ್ನು ಮುಂದುವರೆಸಲಾಗಿದೆ ಎಂದರು.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು