News Karnataka Kannada
Tuesday, April 30 2024
ಶಿವಮೊಗ್ಗ

ರಾಜ್ಯದಲ್ಲಿ ಸೂತ್ರದಾರ ಸರ್ಕಾರ ನಡೆಯುತ್ತಿದ್ದೆ

Kodimata Shree
Photo Credit :

ಶಿವಮೊಗ್ಗ : ನಾನು ಈ ಹಿಂದೆ ಕರ್ನಾಟಕದಲ್ಲಿ ಸೂತ್ರಧಾರಿ ಸರ್ಕಾರ ನಡೆಯುತ್ತದೆ ಎಂದು ಹೇಳಿದ್ದೆ. ಆದರಂತೆ ಈಗ ರಾಜ್ಯದಲ್ಲಿ ಸೂತ್ರಧಾರಿ ಸರ್ಕಾರ ನಡೆಯುತ್ತಿದೆ, ಇದು ಮುಂದುವರಿಯುತ್ತದೆ ಎಂದು ಅರಸಿಕೆರೆ ತಾಲೂಕಿನ ಹಾರನಹಳ್ಳಿಯ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾ ಸ್ವಾಮಿಗಳು ನುಡಿದರು.

ನಗರಕ್ಕೆ ಸಮೀಪದ ಕುಂಚೇನಹಳ್ಳಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ನಾನು ಹೇಳಿದಂತೆ ರಾಜ್ಯದಲ್ಲಿ ಯಡಿಯೂರಪ್ಪನವರು ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ. ಹೊಸದಾಗಿ ಅಧಿಕಾರಕ್ಕೆ ಬಂದವರು ಸೂತ್ರಧಾರಿ ಆಗಿರುತ್ತಾರೆ. ವಿವೇಕದಿಂದ ರಾಜ್ಯ ನಡೆಸುತ್ತಾರೆ. ಈ ಸೂತ್ರಧಾರಿ ಆಡಳಿತ ಮುಂದುವರಿಯುತ್ತದೆ ಎಂದು ಭವಿಷ್ಯ ನುಡಿದರು.

ಇನ್ನೂ ಕಾದಿದೆ ಘನಘೋರ ಆಪತ್ತು : ಕೋಡಿ ಸ್ವಾಮೀಜಿಯಿಂದ ಭಾರೀ ಎಚ್ಚರಿಕೆ

ಈಗ ಮುಖ್ಯಮಂತ್ರಿ ಆಗಿರುವ ಬಸವರಾಜ ಬೊಮ್ಮಾಯಿ ಅವರು ಬುದ್ಧಿವಂತರಿದ್ದಾರೆ. ಉತ್ತಮ ರೀತಿಯಲ್ಲಿ, ವಿವೇಕದಿಂದ ರಾಜ್ಯ ಮುನ್ನಡೆಸುತ್ತಾರೆ. ಸದ್ಯಕ್ಕೆ ಈ ಸರ್ಕಾರಕ್ಕೆ ತೊಂದರೆ ಇಲ್ಲ. ಮುಂದೆ ನಾಲ್ಕೈದು ವರ್ಷಗಳಲ್ಲಿ ಈ ರೋಗ ರುಜಿನದಿಂದ ಮುಕ್ತಿ ಸಿಗಲಿದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು