ಚಿಕ್ಕಮಗಳೂರು: ಸಣ್ಣ ಬೆಳೆಗಾರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಅವರ ತಾಯಿ ಪಾರ್ವತಮ್ಮ ಲಕ್ಷ್ಮಣಗೌಡ (೭೫) ಅವರು ಬೆಳಗ್ಗೆ ನಿಧನರಾದರು.
ವಯೋ ಸಹಜ ಅನಾರೋಗ್ಯದ ಕಾರಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಓರ್ವ ಪುತ್ರಿ ಹಾಗೂ ಮೂವರು ಪುತ್ರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಇಂದು ಮಧ್ಯಾಹ್ನ ಮಲ್ಲಂದೂರಿನ ಮೇಲು ಹೊಲದಗದ್ದೆಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮಾಜಿ ಸಚಿವರುಗಳಾದ ಸಿ.ಟಿ.ರವಿ, ಬಿ.ಬಿ.ನಿಂಗಯ್ಯ, ಕೆಸಿಸಿಸಿ ವಕ್ತಾರಎಚ್.ಎಚ್.ದೇವರಾಜ್, ಒಕ್ಕಲಿಗ ಸಂಘದ ನಿರ್ದೇಶಕ ಪೂರ್ಣೇಶ್, ಮಾಜಿ ನಿರ್ದೇಶಕ ಬ್ಯಾರವಳ್ಳಿ ನಾಗರಾಜ್ಇತರರುಅಂತಿಮದರ್ಶನ ಪಡೆದರು.