ಮೂಡಿಗೆರೆ: ತಾನು ೩ ಬಾರಿ ಶಾಸಕನಾಗಿದ್ದೇನೆ. ಹುದ್ದೆಯಲ್ಲಿದ್ದಾಗಲೇ ೩ ಅಪಘಾತ, ಪ್ರಾಣಾಪಾಯ ಸಂಕಷ್ಟದಿಂದ ಪಾರಾಗಿದ್ದೇನೆಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಿಳಿಸಿದರು.
ಅವರು ಸೋಮವಾರ ಸಂಜೆ ಪಟ್ಟಣದ ಹೊಯ್ಸಳ ಕ್ರೀಡಾಂಗಣದ ಹೇಮಾದ್ರಿ ವೇದಿಕೆಯಲ್ಲಿ ತಾಲೂಕು ಆಡಳಿತ ಮತ್ತು ಮೂಡಿಗೆರೆ ಉತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಉತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾನು ಪ್ರಥಮ ಬಾರಿ ಬೆಂಗಳೂರಿಗೆ ತೆರಳುತ್ತಿದ್ದಾಗ ತನ್ನ ಕಾರು ಲಾರಿಗೆ ಅಪಘಾತಗೊಂಡಿತು. ೨ ನೇ ಬಾರಿ ಕೋವಿಡ್ ಆವರಿಸಿ ಉಳಿದಿದ್ದೇ ಪವಾಡ. ೩ನೇ ಬಾರಿ ಕಾಡಾನೆಯಿಂದ ಬಲಿಯಾದ ಮಹಿಳೆಯನ್ನು ನೋಡಲು ತೆರಳಿದ್ದಾಗ ತನ್ನ ಮೇಲೆ ಗ್ರಾಮಸ್ಥರು ಅಟ್ಟಾಡಿಸಿ ಹಲ್ಲೆ ನಡೆಸಿದರು. ಅಂದು ಜೀವ ಉಳಿದಿದ್ದೇ ಹೆಚ್ಚು. ಆದರೂ ತಾನು ಯಾರ ಮೇಲೂ ದೂರು ಡಲಿಲ್ಲ. ತನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಜನತೆಯ ಒಳಿತಿಗಾಗಿ ತಾನು ಎಂತಹ ನೋವು ಬೇಕಾದರೂ ಅನುಭವಿಸಲು ಸಿದ್ಧ ಎಂದು ಹೇಳಿದರು.
ಉತ್ಸವದ ಕಾರ್ಯಾಧ್ಯಕ್ಷ ಜೆ.ಎಸ್.ರಘು ಮಾತನಾಡಿ, ನಾವು ಎಲ್ಲಿ ಹೋದರೂ ಮೊದಲು ತಮ್ಮ ತಾಯಿ ನೆಲವನ್ನೇ ಜನರು ಪ್ರಶ್ನಿಸುತ್ತಾರೆ. ನಮ್ಮ ಹುಟ್ಟೂರು ಮೂಡಿಗೆರೆಯಲ್ಲಿನ ಪ್ರಕೃತಿ, ಅತಿಥಿ ಸತ್ಕಾರ, ಭಾಷೆ, ಸಂಸ್ಕೃತಿಯನ್ನು ಬೇರೆ ಜಿಲ್ಲೆಯ ಜನರು ಕೊಂಡಾಡುತ್ತಾರೆ. ಇದರಿಂದ ನಮ್ಮ ಮನಸ್ಸಿನಲ್ಲಾಗುವ ಪುಳಕ ಅವಿಸ್ಮರಣೀಯ. ಇಂತಹ ನೆಲದಲ್ಲಿ ಹುಟ್ಟಿರುವ ನಾವು ತಾಯಿ ನೆಲದ ರುಣ ತೀರಿಸಬೇಕೆಂದು ಹೇಳಿದರು.
ಚಲನಚಿತ್ರ ನಟ ಗುರುನಂದನ್ ಗೋಣಿಬೀಡು, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಹಳಸೆ ಶಿವಣ್ಣ, ಲೋಕವಳ್ಳಿ ರಮೇಶ್, ಮಂಚೇಗೌಡ, ಪ್ರಸನ್ನ ಗೌಡಹಳ್ಳಿ, ಡಿ.ಕೆ.ಲಕ್ಷ್ಮಣ್ಗೌಡ, ಪ.ಪಂ. ಸದಸ್ಯರು ಸೇರಿದಂತೆ ಮತ್ತಿತರರಿದ್ದರು.
ಎವರೆಸ್ಟ್ ಮ್ಯಾನ್ ಎಂದೇ ಹೆಸರಾಗಿರುವ ನೇಪಾಳದ ಕಮಿ ರೀಟಾ ಶೆರ್ಪಾ 29ನೇ ಬಾರಿ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್…
ಮದುವೆಗೆ ಹೋಗಿ ತಡರಾತ್ರಿ ಮರಳಿ ಬರುತ್ತಿದ್ದ ಸಂದರ್ಭ ಕಾರು ಪಲ್ಟಿಯಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಾವಗಡ -ತುಮಕೂರು…
ದಕ್ಷಿಣಕನ್ನಡ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಳೆ ಆರಂಭವಾಗಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಗೆ ವರುಣ ತಂಪೇರಗಿದ್ದಾನೆ. ಈ ನಡುವೆ ಸಿಡಿಲು…
ಕಲುಷಿತ ನೀರು ಸೇವಿಸಿ 25ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ
ಕರ್ನಾಟಕ ಭೂ ಸುಧಾರಣಾ ಕಾಯಿದೆಯಡಿಯಲ್ಲಿ ಭೂ ನ್ಯಾಯಮಂಡಳಿಗಳಿಂದ ಮಂಜೂರಾಗಿರುವ ಜಮೀನುಗಳನ್ನು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ಕೆಲ ಜಮೀನುಗಳ…
ಪುಷ್ಪಾ-2 ರಿಲೀಸ್ ಕ್ರೇಜ್ನಲ್ಲಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ಗೆ ಆಂಧ್ರ ಪ್ರದೇಶ ಪೊಲೀಸರು ಬಿಗ್ ಶಾಕ್ ನೀಡಿದ್ದು, ಅಲ್ಲು ಅರ್ಜುನ್…