ಚಿಕ್ಕಮಗಳೂರು: ನಿಗದಿತ ಗುರಿ ಸಾಧಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ವಿ.ಸೋಮಣ್ಣ

ಚಿಕ್ಕಮಗಳೂರು,: ವಿವಿಧ ವಸತಿ ಯೋಜನೆಗಳಡಿ ಯಲ್ಲಿ ನಿಗಧಿತ ಗುರಿ ಸಾಧಿಸದಿರುವ ಅಧಿಕಾರಿಗಳನ್ನು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಖಾತೆ ಸಚಿವ ವಿ.ಸೋಮಣ್ಣ ಅವರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಪಂಚಾಯಿತಿ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಏರ್ಪಡಿಸಿದ್ದ ವಿವಿಧ ವಸತಿ ಯೋಜನೆಗಳ ಪ್ರಗತಿಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಒಂದು ಹಂತದಲ್ಲಿ ಅಧಿಕಾರಿಗಳನ್ನು ಗೌಡ, ಪರಶು, ಬಿಳಿ ಗಿರಿ ಎಂದು ಏಕವಚನದಲ್ಲೇ ಸಂಬೋಧಿಸಿ ಚಳಿ ಬಿಡಿಸಿದರು.

ಉಳಿದಿರುವುದು ಇನ್ನು ಮೂರೇ ತಿಂಗಳು ಈ ಅವಧಿಯಲ್ಲಿ ವಸತಿ ಯೋಜನೆ ಪೂರ್ಣಗೊಳಿಸಬೇಕಿದೆ. ಯೋಜನೆ ಮುಗಿಸಲು ಎಷ್ಟು ಹಣ ಬೇಕು ಅದನ್ನು ಬಿಡುಗಡೆ ಮಾಡಲು ಸಿದ್ದ. ಅಧಿಕಾರಿಗಳು ಶ್ರದ್ಧೆಯಿಂದ ಕಾರ್ಯನಿರ್ವಹಿಸಿದರೆ ಕಾಲಮಿತಿಯೊಳಗೆ ಗುರಿ ಸಾಧಿಸಲು ಸಾಧ್ಯವಿದೆ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಕೊಳಚೆ ನಿರ್ಮೂಲನಾ ಮಂಡಳಿ ಯಿಂದ ನಗರಕ್ಕೆ ೮೦೦ ಮನೆ ಮಂ ಜೂರಾಗಿವೆ. ಅದರಲ್ಲಿ ೧೨೦ ಮನೆ ಕೆಲಸ ಮಾತ್ರ ಪ್ರಾರಂಭಿಸಲಾಗಿದೆ, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ೧೫೧೧ ಜಿ ಪ್ಲಸ್ ೨ ಮನೆಗಳ ನಿರ್ಮಾಣಕ್ಕೆ ಟೆಂಡರ್ ಆಗಿದೆ. ಇದರಲ್ಲಿ ೬೦೦ ಮನೆಗಳನ್ನು ೨೦೨೨ ಕ್ಕೆ, ಉಳಿಕೆ ಮನೆಗಳನ್ನು ೨೦೨೪ ಕ್ಕೆ ಮುಗಿಸ ಬೇಕಿರುವ ಕರಾರಿದೆ. ಆದರೆ, ಈವರೆಗೆ ಶೇ.೨೫ ರಷ್ಟು ಮನೆ ಪೂರ್ಣಗೊಂಡಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

ಜೊತೆಗೆ ಡೊಂಗ್ರಿ ಗರೇಶಿಯಾ ಸಮುದಾಯದ ೬೯ ಮನೆಗಳು ಮಂಜೂರಾಗಿದ್ದರೂ ಇನ್ನೂ ಕಾಮಗಾರಿಯೇ ಆರಂಭವಾಗಿಲ್ಲ. ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರನ್ನು ಬಿ ವರ್ಗದಿಂದ ಸಿ ವರ್ಗಕ್ಕೆ ಸೇರಿಸಲಾಗಿದೆ ಇದನ್ನು ಸರಿಪಡಿಸಬೇಕು. ಅಜ್ಜನಹಟ್ಟಿ ನಿವೇಶನ ರಹಿತರ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ ಅವರು ಇಲ್ಲಿ ಗುತ್ತಿಗೆದಾರರೆ ಸಮಸ್ಯೆಯಾಗಿದ್ದಾರೆ ಇದಕ್ಕೆ ಒಂದು ಆದೇಶ ಮಾಡಿ ಎಂದರು.

ಸಮಸ್ಯೆಗಳನ್ನು ಆಲಿಸಿದ ಸಚಿವ ಸೋಮಣ್ಣ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಏಕವಚನದಲ್ಲೇ ಕರೆದು ಇಷ್ಟು ದಿನ ಕತ್ತೆ ಮೇಯಿಸುತ್ತಿದ್ದೀರೇನ್ರಿ ಎಂದು ಪ್ರಶ್ನಿಸಿದರು. ಅಧಿಕಾರಿಗಳ ಸಮಜಾಯಿಷಿ ಒಪ್ಪದ ಸಚಿವರು ಗುತ್ತಿಗೆದಾರ ಶ್ರೀಕಾಂತ್ ಬಂಡಿ ಅವರನ್ನು ಎಲ್ಲಿದ್ದರೂ ಕರೆ ದುಕೊಂಡು ನಾಳೆಯೇ ಬೆಂಗಳೂರಿಗೆ ಬರಬೇಕು ಎಂದು ತಾಕೀತು ಮಾಡಿದರು.

ರಾಜ್ಯದಲ್ಲಿ ೧ ಲಕ್ಷ ನಿವೇಶನ ಹಂಚಿಕೆಮಾಡಿದೇವೆ. ಮೂರು ವಸತಿ ಯೋಜನೆಗಳನ್ನು ಒಂದೇ ಸೂರಿನಡಿ ಸೇರಿಸಿ ಆಸರೆ ಎಂದು ನಾಮಕರಣ ಮಾಡಿದ್ದೇವೆ. ಗ್ರಾಮೀಣ ಭಾಗದಲಿದ್ದ್ಲ ೩೭ ಸಾವಿರ ಆದಾಯ ಮಿತಿಯನ್ನು ೧.೨೦ ಲಕ್ಷಕ್ಕೆ, ನಗರದಲ್ಲಿ ೩ ಲಕ್ಷಕ್ಕೆ ಹೆಚಿಸಿದ್ದೇವೆ ಎಂದು ಸರಕಾರದ ಸಾಧನೆ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೦ ವರ್ಷದಲ್ಲಿ ಒಂದೇ ಒಂದು ನಿವೇಶನ ನೀಡಿಲ್ಲ. ಸರಕಾರಿ ಜಾಗವೆಲ್ಲ ಡೀಮ್ಡ್ ಆಗಿದೆ. ೪/೧ ನೊಟಿಫಿಕೇಶನ್ ಆಗಿದೆ ಬಡವರಿಗೆ ನಿವೇಶನ ನೀಡಲು ಜಾಗವೇ ಇಲ್ಲ ಎಂದಾಗ ಶೃಂಗೇರಿ ತಾ.ಪಂ. ಅಧ್ಯಕ್ಷರು ಇದಕ್ಕೆ ದನಿಗೂಡಿಸಿದರು. ಎಕರೆಗೆ ೨೫ ಲಕ್ಷದಂತೆ ಭೂಮಿ ಖರೀದಿ ಮಾಡಲು ೪ ಕೋಟಿ ಅನುದಾನ ಬಿಡುಗಡೆ ಮಾಡುತ್ತೇನೆ. ಭೂಮಿ ಎಲ್ಲಿದೆ ಹುಡುಕಿ ಎಂದು ಸಚಿವರು ಹೇಳಿದರು.

ಜಿ.ಪಂ. ಸಿಇಒ ಜಿ.ಪ್ರಭು ಮಾತನಾಡಿ ಜಿಲ್ಲೆಯಲ್ಲಿ ನಿವೇಶನ ನೀಡಲು ೧೦೯ ಎಕರೆ ಲಭ್ಯವಿದೆ. ಅದರಲ್ಲಿ ೭೯ ಎಕರೆ ಅಭಿವೃದ್ಧಿಪಡಿಸಲಾಗಿದೆ ಎಂದರು. ಶಾಸಕ ಬೆಳ್ಳಿ ಪ್ರಕಾಶ್, ಎಡಿಸಿ ಬಿ.ಆರ್.ರೂಪ ಮತ್ತಿತರೆ ಅಧಿಕಾರಿಗಳು ಇದ್ದರು.

Gayathri SG

Recent Posts

ರೇವಣ್ಣ ಲೈಂಗಿಕ ಹಗರಣ: ಮಹಿಳಾ ಕಾಂಗ್ರೆಸ್ ನಿಂದ ಪೊರಕೆ ಹಿಡಿದು ಪ್ರತಿಭಟನೆ

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್…

5 mins ago

ಎಸ್ಎಸ್​ಎಲ್​ಸಿ ಫಲಿತಾಂಶ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಇಂದು 2023-24 ನೇ ಸಾಲಿನ SSLC ಪರೀಕ್ಷೆ ಫಲಿತಾಂಶ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ…

18 mins ago

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ : ಇಬ್ಬರು ಮಹಿಳೆಯರಿಗೆ ಗಾಯ

ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ…

21 mins ago

ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ : ಡೆತ್‌ನೋಟು ಪತ್ತೆ

ತನ್ನ ಮಕ್ಕಳಿಬ್ಬರನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.ಸಾವಿಗೆ ಮುನ್ನ ವಿಡಿಯೊ ಮೆಸೇಜ್‌ ಮಾಡಿರುವ ಮಹಿಳೆ, ಪತಿಯ ಕಿರುಕುಳದಿಂದ…

32 mins ago

ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ; ಇಲ್ಲಿ ಫಲಿತಾಂಶ ವೀಕ್ಷಿಸಿ

2023-24ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶವು ಇಂದು ಪ್ರಕಟಗೊಂಡಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ…

39 mins ago

ಪ್ರಸಕ್ತ ಸಾಲಿನಿಂದ 3 ವರ್ಷ ಪದವಿ : ಉನ್ನತ ಶಿಕ್ಷಣ ಇಲಾಖೆ

ರಾಜ್ಯ ಶಿಕ್ಷಣ ಆಯೋಗದ ಮಧ್ಯಂತರ ವರದಿ ಅನುಷ್ಠಾನಕ್ಕೆ ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಆಯೋಗದ ಶಿಫಾರಿಸಿನಂತೆ 2024-25ನೇ ಸಾಲಿನ…

56 mins ago