ಚಿಕ್ಕಮಗಳೂರು: ಶ್ರೀಗಂಧದ ಮರಗಳನ್ನು ಕಳವು ಮಾಡುತ್ತಿದ್ದ ಓರ್ವ ಆರೋಪಿಯನ್ನು ಅರಣ್ಯ ಸಿಬ್ಬಂದಿ ಬಂಧಿಸಿ 20 ಕೆ.ಜಿ.ಯಷ್ಟು ಗಂಧವನ್ನು ವಶಪಡಿಸಿಕೊಂಡಿದ್ದಾರೆ. 3 ಮಂದಿ ತಪ್ಪಿಸಿಕೊಂಡಿದ್ದಾರೆ.
ತಾಲೂಕಿನ ಕಮೇನಹಳ್ಳಿ ಅರಣ್ಯ ಪ್ರದೇಶದಲ್ಲಿ ರಾತ್ರಿ ಬೀಡು ಬಿಟ್ಟಿದ್ದ ಸಿಬ್ಬಂಧಿ ಶ್ರೀಗಂಧ ಮರಗಳ ಕಡಿದು ಗಂಧ ತೆಗೆಯುವ ವೇಳೆ ಕಾರ್ಯಾಚರಣೆ ನಡೆಸಿದ್ದು, ತಮಿಳುನಾಡು ಮೂಲದ ರಮೇಶ ಎಂಬಾತನನ್ನು ಬಂಧಿಸಿದ್ದಾರೆ.
ಇನ್ನೂ 3 ಜನ ಶ್ರೀಗಂಧ ಚೋರರು ಅರಣ್ಯದಲ್ಲಿ ತಪ್ಪಿಸಿಕೊಂಡಿದ್ದಾರೆ. ತಮಿಳುನಾಡು, ಆಂಧ್ರ ಪ್ರದೇಶ ಮೂಲದ ಶ್ರೀಗಂಧ ಕಳ್ಳ ಸಾಗಣೆ ತಂಡವು ಚುರ್ಚೆ ಗುಡ್ಡ, ಕಾಮೇನಹಳ್ಳಿ ಅರಣ್ಯ ಪ್ರದೇಶದ ಶ್ರೀಗಂಧ ಮರಗಳ ಮೇಲೆ ಕಣ್ಣು ಹಾಕಿ ವ್ಯವಸ್ಥಿತ ಶ್ರೀಗಂಧ ಕಳ್ಳಸಾಗಣೆ ಯಲ್ಲಿ ತೊಡಗಿವೆ ಎಂದು ಹೇಳಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸ್ವಾತಿ, ಸಿಬ್ಬಂದಿಗಳಾದ ವಸಂತ, ನಂದೀಶ್, ಸುನಿಲ್, ಮೊಹಮ್ಮದ್ ಭಾಗವಹಿಸಿದ್ದರು.