ಕಾರವಾರ: ನವೆಂಬರ್ 8ರ ಮಂಗಳವಾರ ಚಂದ್ರಗ್ರಹಣ ಸಂಭವಿಸಲಿರುವ ಹಿನ್ನೆಲೆಯಲ್ಲಿ ಮಂಜಗುಣಿಯ ತಿರುಪತಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನ.7ರ ಸೋಮವಾರ ವನ ಭೋಜನ ಮತ್ತು ಲಕ್ಷ ದೀಪೋತ್ಸವ ನಡೆಯಲಿದೆ ಎಂದು ಪ್ರಧಾನ ಅರ್ಚಕ ವಿದ್ವಾನ್ ಶ್ರೀನಿವಾಸ ಭಟ್ ತಿಳಿಸಿದರು.
ವಾರ್ಷಿಕ ಸಂಪ್ರದಾಯದಂತೆ ವನಭೋಜನ ಮತ್ತು ಲಕ್ಷ ದೀಪೋತ್ಸವ ನಡೆಯಲಿದೆ. ಈ ಬಾರಿ ಸೋಮವಾರ ತ್ರಿಪುರಾಖ್ಯಾ ದೀಪೋತ್ಸವ ನಡೆಯಲಿದ್ದು, ಬೆಳಿಗ್ಗೆ ದೇವಿಯು ವನಕ್ಕೆ ತೆರಳಲಿದ್ದು, ಮಧ್ಯಾಹ್ನ ವನಭೋಜನ, ಸಂಜೆ ಲಕ್ಷದೀಪೋತ್ಸವ, ಪಕ್ಷೋತ್ಸವ ನಡೆಯಲಿದೆ.
ನವೆಂಬರ್ 8 ರ ಮಂಗಳವಾರ ಚಂದ್ರಗ್ರಹಣ ಇರುವುದರಿಂದ, ದೇವಾಲಯದಲ್ಲಿ ಉತ್ಸವ ಮತ್ತು ಪ್ರಸಾದ ಇರುವುದಿಲ್ಲ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ಸೋಮವಾರ ಸಂಜೆ 6.00 ಗಂಟೆಯಿಂದ ತ್ರಿಪುರಾಖ್ಯಾ ದೀಪೋತ್ಸವ ನಡೆಯಲಿದ್ದು, ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಅವರು ಶಿಷ್ಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸೂಚಿಸಿದ್ದಾರೆ.
ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ದೀಪೋತ್ಸವ ನಡೆಯಲಿದೆ. ಸಂಜೆ 6.00 ರಿಂದ 10,000 ಸಂಖ್ಯೆಯಲ್ಲಿ ತ್ರಿಪುರಾಖ್ಯಾ ದೀಪೋತ್ಸವ, ಮಹಾಮಂಗಳಾರತಿ, ದೀಪೋತ್ಸವ ಮತ್ತು ಪ್ರಸಾದ ವಿತರಣೆ ನಡೆಯಲಿದೆ. ಮಂಗಳವಾರ ಗ್ರಹಣ ಸಂಭವಿಸುವುದರಿಂದ ಒಂದು ದಿನ ಮುಂಚಿತವಾಗಿ ದೀಪೋತ್ಸವವನ್ನು ನಡೆಸಲಾಗುತ್ತಿದೆ ಎಂದು ಬೊಮ್ಮನಹಳ್ಳಿಯ ಮಠದ ಆಡಳಿತ ಸಮಿತಿ ಅಧ್ಯಕ್ಷ ವಿ.ಎನ್.ಹೆಗಡೆ ತಿಳಿಸಿದ್ದಾರೆ.