ಕಾರವಾರ: ಬಾವಿಯಲ್ಲಿ ರಿಂಗ್ ರಿಪೇರಿ ಮಾಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿನಲ್ಲಿ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಯಲ್ಲಾಪುರದ ಮಾವಿನಕಟ್ಟಾ ಗ್ರಾಮದಲ್ಲಿ ನಡೆದಿದೆ.
ಘಟನೆಯಲ್ಲಿ ಗೋವಿಂದ ಪೂಜಾರಿ(60), ಗಣೇಶ ಶೇಟ್ (23), ಸುರೇಶ ನಾಯ (40) ಮೃತಪಟ್ಟವರಾಗಿದ್ದಾರೆ. ಓರ್ವ ವ್ಯಕ್ತಿ ಮೊದಲು ಪಂಪ್ ರಿಪೇರಿಗೆ ಎಂದು ಬಾವಿಗೆ ಇಳಿಸಿದ್ದು, ಈ ವೇಳೆ ಆತ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದ ಎನ್ನಲಾಗಿದೆ. ಬಳಿಕ ಆತ ಬಿದ್ದಿರುವುದನ್ನ ನೋಡಿದ ಇನ್ನೋರ್ವ ವ್ಯಕ್ತಿ ಮುಳುಗಡೆಯಾಗಿದ್ದವ ರಕ್ಷಣೆಗೆ ಎಂದು ನೀರಿಗೆ ಇಳಿದಿದ್ದ ಇವರು ಸಹ ನೀರಿನಲ್ಲಿ ಮುಳುಗಡೆ ಆಗಿರುವುದನ್ನ ಗಮನಿಸಿದ ಮೂರನೆ ವ್ಯಕ್ತಿ ಸಹ ಅವರಿಬ್ಬರ ರಕ್ಷಣೆಗಾಗಿ ಬಾವಿಗೆ ಹಾರಿದ್ದು, ಈ ವೇಳೆ ಮೂವರು ಸಹ ಒಬ್ಬರಿಗೆ ಒಬ್ಬರೂ ರಕ್ಷಣೆ ಮಾಡಲಾಗದೆ ಬಾವಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪ್ರಕರಣ ದಾಖಲಾಗಿದೆ.