News Karnataka Kannada
Sunday, April 28 2024
ಉತ್ತರಕನ್ನಡ

ಕಾರವಾರ: ಅರ್ಗಾದ ನೌಕಾನೆಲೆ ನಡೆದ ನೌಕಾಪಡೆ ದಿನಾಚರಣೆಗೆ ರಾಜ್ಯಪಾಲ ಥಾವರಚಂದ್ ಭಾಗಿ

Thaavar
Photo Credit : By Author

ಕಾರವಾರ: ಭಾರತೀಯ ನೌಕಾಪಡೆ ದಿನಾಚರಣೆ ನಿಮಿತ್ತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ತಾಲೂಕಿನ ಅರ್ಗಾದ ನೌಕಾನೆಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನೆರವೇರಿದವು.

ಅರ್ಗಾದ ಐಎನ್‌ಎಸ್ ಕದಂಬ ನೌಕಾನೆಲೆಗೆ ಸಂಜೆ ಆಗಮಿಸಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕ ನೌಕಾ ಪ್ರದೇಶದ ಕಮಾಂಡಿಂಗ್ ಫ್ಲಾಗ್ ಆಫೀಸರ್ ರಿಯರ್ ಅಡ್ಮಿರಲ್ ಅತುಲ್ ಆನಂದ್ ಅವರು ಬರಮಾಡಿಕೊಂಡರು.

ಬಳಿಕ ರಾಜ್ಯಪಾಲರಿಗೆ ಐಎನ್‌ಎಸ್ ಕದಂಬ ಪರೇಡ್ ಮೈದಾನದಲ್ಲಿ ಗೌರವ ವಂದನೆ ಸಲ್ಲಿಸಲಾಯಿತು. ಬಳಿಕ ರಾಜ್ಯಪಾಲರ ಸಮ್ಮುಖದಲ್ಲಿ ನೌಕಾ ಬ್ಯಾಂಡ್‌ನಿಂದ ‘ಅಟ್ ಹೋಮ್’ ಕಾರ್ಯಕ್ರಮ ಮತ್ತು ‘ಬೀಟಿಂಗ್ ರಿಟ್ರೀಟ್’ ಸಮಾರಂಭವನ್ನು ಇಲ್ಲಿನ ನೇವಿ ಹೌಸ್‌ನಲ್ಲಿ ನಡೆಸಲಾಯಿತು.

ಸೂರ್ಯಾಸ್ತದ ಸಂದರ್ಭದಲ್ಲಿ ನೌಕಾ ಧ್ವಜವನ್ನು ಕೆಳಕ್ಕೆ ಎಳೆಯುವುದರ ಮೂಲಕ ಸಮಾರಂಭವು ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ನೌಕಾ ಬಂದರಿನಲ್ಲಿ ಲಂಗರು ಹಾಕಿರುವ ನೌಕಾ ಯುದ್ಧನೌಕೆಗಳು ವಿದ್ಯುದಲಂಕಾರಗಳೊಂದಿಗೆ ಝಗಮಗಿಸಿದವು.

ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ನೌಕಾ ಯೋಧರು, ನೌಕಾ ಅಧಿಕಾರಿಗಳು ಮತ್ತು ನಾವಿಕರು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು