News Karnataka Kannada
Monday, April 29 2024
ಉತ್ತರಕನ್ನಡ

ಹೊನ್ನಾವರ: ಕಾರು ಕಳ್ಳತನಕ್ಕೆ ಯತ್ನಿಸಿದ ಮೂವರು ಬಂಧನ

Honnavar: Thieves caught trying to steal car
Photo Credit :

ಹೊನ್ನಾವರ: ಬಾಡಿಗೆ ನೆಪದಲ್ಲಿ ಕಾರನ್ನು ತೆಗೆದುಕೊಂಡು ಹೋಗಿ ಚಾಕು ತೋರಿಸಿ ಬೆದರಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕಲಬುರ್ಗಿ ಜಿಲ್ಲೆಯ ರೇವಣಸಿದ್ದೇಶ್ವರ ಕಾಲೋನಿಯ ಸಂಗಮೇಶ ಶಿವಶರಣಪ್ಪ ಅಳ್ಳಗಿ(25), ಚೌದರಿಓಣಿಯ ಸಂತೋಷ ಶಿವಶರಣಪ್ಪ ಭಜಂತ್ರಿ (24) ಮಾಶಾಳದ ಶ್ರವಣಕುಮಾರ ಶಂಕರಪ್ಪ ಕಲ್ಲೋಳ್ಳ (22) ಬಂಧಿತರಾಗಿದ್ದು, ಹೊನ್ನಾವರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆ. 20 ಮಂಗಳೂರಿನ ಟ್ಯಾಕ್ಸಿ ಸ್ಟ್ಯಾಂಡನಲ್ಲಿ ಬಾಡಿಗೆಗಾಗಿ ನಿಲ್ಲಸಿಟ್ಟ ಕಾರಿನ ಬಳಿಗೆ ತೆರಳಿದ ಆರೋಪಿತರು ಬಾಡಿಗೆ ಬರಲು ಕೇಳಿದ್ದು, ಸುಬ್ರಮಣ್ಯಕ್ಕೆ ಹೋಗಲು ಬಾಡಿಗೆ ಮಾಡಿಕೊಂಡು ಬಂದವರು.

ಸುಬ್ರಮಣ್ಯಕ್ಕೆ ಹೋಗದೆ ಚಾಲಕನಿಗೆ ಮುರ್ಡೇಶ್ವರಕ್ಕೆ ಕಾರನ್ನು ಒಯ್ಯಲು ತಿಳಸಿದಾಗ, ಚಾಲಕ ಕಾರನ್ನು ಮುರುಡೇಶ್ವರಕ್ಕೆ ತಂದಿದ್ದಾನೆ. ಈ ವೇಳೆ ಹೈವೆ ಬಳಿಯ ಮುರುಡೇಶ್ವರ ದ್ವಾರದ ಹತ್ತಿರ ಬಂದಾಗ, ಬಂಧಿತರು ಮುರ್ಡೇಶ್ವರಕ್ಕೆ ಹೋಗುವದು ಬೇಡಾ ಮುಂದೆ ಕರೆದುಕೊಂಡು ಹೋಗು ಎಂದು ಹೇಳಿದ್ದಾರೆ. ಕಾರಿನ ಚಾಲಕ ಮುರುಡೇಶ್ವರ ಕಡೆಯಿಂದ ಹೊನ್ನಾವರದ ಕಡೆಗೆ ಹೋಗುತ್ತಿರುವಾಗ ಮೂತ್ರ ವಿಸರ್ಜನೆಯ ಸಲುವಾಗಿ ಕಾರನ್ನು ಪಕ್ಕದಲ್ಲಿ ನಿಲ್ಲಿಸಲು ಸೂಚಿಸಿದ್ದಾರೆ.

ಕಾರನ್ನು ನಿಲ್ಲಿಸಿದ ತಕ್ಷಣ ಆರೋಪಿತರು ಕಾರನ್ನು ದೋಚುವ ಉದ್ದೇಶದಿಂದ ಆರೋಪಿತ ಸಂಗಮೇಶ ಕಿಸೆಯಲ್ಲಿದ್ದ ಚಾಕುವನ್ನು ತೆಗೆದು ಚಾಲಕನ ಕುತ್ತಿಗೆಯ ಹತ್ತಿರ ಹಿಡಿದು ಇಳಿಯಲು ಹೇಳಿದ್ದಾರೆ. ಕಾರಿನಿಂದ ಇಳಿಯದಿದ್ದಾಗ ಪಿರ್ಯಾದಿಗೆ ಆರೋಪಿತರು ಒಟ್ಟಾಗಿ ಕಾರಿನಿಂದ ದೂಡಿ ಹಾಕಲು ಪ್ರಯತ್ನಿಸುತ್ತಿರುವಾಗ ಚಾಲಕನ ಕೂಗನ್ನು ಕೇಳಿದ ಸಾರ್ವಜನಿಕರು ಕಾರಿನ ಹತ್ತಿರ ಬರುವದನ್ನು ಗಮನಿಸಿ ಆಪಾದಿತರು ಓಡಿ ಹೋಗಿದ್ದಾರೆ. ಈ ಬಗ್ಗೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ 24ಗಂಟೆಯ ಒಳಗೆ ಆರೋಪಿತರನ್ನು ಬಂಧಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
178
Srinivas Badkar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು