ಹುಬ್ಬಳ್ಳಿ: ದೇಶದಲ್ಲಿ ಹಗಲು ಕಳ್ಳತನವಾಗುತ್ತಿದೆ. ರೈತರಿಗೆ ಒಳ್ಳೆಯ ಬೆಂಬಲ ಬೆಲೆ ಸಿಗುತ್ತಿಲ್ಲ. ಮಹದಾಯಿ, ಕೃಷ್ಣ ಮತ್ತು ಮೇಕೆದಾಟು ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿಯವರ ಉಸಿರೆಯಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಉತ್ತರ ಕರ್ನಾಟಕದವರು ಸಿಎಂ ಆದರೆ ರೈತರಿಗೆ ಒಳ್ಳೆಯದು ಆಗುತ್ತೆ ಎಂದು ಭಾವಿಸಲಾಗಿತ್ತು. ಆದರೆ ಒಂದು ದಿನವೂ ಅದರ ಬಗ್ಗೆ ಮಾತು ಆಡಿಲ್ಲಾ. ರಾಜ್ಯದಲ್ಲಿ ೨೫ ಎಪಿಂ ಗಳಿದ್ದಾರೆ ಪ್ರಧಾನಿಯವರ ಕಡೆ ಕರೆದುಕೊಂಡು ಹೋಗಿ ಸಮಸ್ಯೆ ಬಗೆಹರಿಸಿ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಬಂದರೆ ಸಮಸ್ಯೆ ಬಗೆಹರಿಸುತ್ತೇನೆ ಎಂದಿದ್ದು ಮರೆತ್ತಿದ್ದಾರೆ ಎಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಏನು ಮಾಡುತ್ತಿಲ್ಲ. ಇದಕ್ಕೆ ಈ ಭಾಗದ ಮತ್ತು ರಾಜ್ಯದ ರೈತರು ಬುದ್ದಿ ಕಲಿಸುತ್ತಾರೆ ಎಂದು ಹೇಳಿದರು.
ಉಪಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಂದಗಿ ಮತ್ತು ಹಾನಗಲ್ ಚುನಾವಣೆ ಬಿಜೆಪಿ ಸರ್ಕಾರ ವೈಖರಿ ಬಗ್ಗೆ ಜನಸಾಮಾನ್ಯರು ಅನುಭವಿಸುತ್ತಿರುವ ನೋವನ್ನು ಹಂಚಿಕೊಳ್ಳು ಒಂದು ಅವಕಾಶ. ಆಡಳಿತ ಯಂತ್ರ ಬಹಳ ಬಿಗಿಯಾಗಿರುತ್ತದೆ. ಬಿಜೆಪಿಯವರು ಯಾವ ರೀತಿ ಅಧಿಕಾರ ಉಪಯೋಗಿಸಿಕೊಳ್ಳಬೇಕು ಎಂಬುದು ಗೊತ್ತಿದೆ. ಏನೆ ಆಡಳಿತ ದುರಪಯೋಗ ಮಾಡಿದರು ಮತದಾರರ ತೀರ್ಪು ಯಾವುದೇ ಒತ್ತಡಕ್ಕಾಗಲಿ ಮತ್ತು ಮಾರಿಕೊಳ್ಳು ಹೋಗುವುದಿಲ್ಲ ಎಂದರು.