ಕಾರ್ಕಳ: ಪ್ರದಾನಿ ನರೇಂದ್ರ ಮೋದಿ ಹಾಗೂ ಸಚಿವ ವಿ.ಸುನೀಲ್ ಕುಮಾರ್ ನಮಗೆ ಅದರ್ಶರು. ಹಿಂದುತ್ವ ಹಾಗೂ ಅಭಿವೃದ್ಧಿಯೇ ನಮ್ಮ ಧ್ಯೇಯ ಉದ್ದೇಶವಾಗಿದೆ. ಕಾರ್ಕಳ ವಿಧಾನ ಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿ.ಸುನೀಲ್ ಕುಮಾರ್ ಅವರು ೫೦ ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷ ಹಾಗೂ ಉದ್ಯಮಿ ಮಹೇಶ್ ಕುಡುಪುಲಾಜೆ ವಿಶ್ವಾಸ ವ್ಯಕ್ತಪಡಿಸಿದರು.
ಸುನೀಲ್ ಕುಮಾರ್ ಅವರ ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಅಭಿವೃದ್ಧಿಯಲ್ಲಿ ಏನೆಂಬುವುದನ್ನು ಕ್ಷೇತ್ರದ ನಾಗರಿಕರ ಕಣ್ಣಮುಂದೆ ಕಾಣಸಿಗುತ್ತಿದೆ. ಸುನೀಲ್ ವರ್ಚಸನ್ನು ಕಂಡು ಅಸೂಯೆ ಪಟ್ಟು ಅವರ ಮೇಲೆ ವಿನಾಕಾರಣ ಆರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಕಾರ್ಕಳ ನಾಗರಿಕರಿಗೆ ಸಿಗದ ಮಾಹಿತಿಗಳು ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಗೆ ಎಲ್ಲಿಂದ ಸಿಗುತ್ತದೆ. ಅವರೇನು ಹಿಂದು ಮುಖಂಡರೋ? ರಾಜಕರಣಿಯೋ? ಅಥವಾ ಮಾಹಿತಿ ಹಕ್ಕುದಾರರೋ ಎಂಬ ಜಿಜ್ಞಾಸೆ ವ್ಯಕ್ತಪಡಿಸಿದರು.
ಮಾತು ಮುಂದುವರಿಸಿದ ಅವರು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಂದ ಹಿಂದುತ್ವದ ಗಿಳಿಪಾಠ ಕಲಿಯುವ ಅಗತ್ಯತೆ ಬಿಜೆಪಿಗರಿಗಿಲ್ಲ. ಅವರ ಆರೋಪಗೆಳೆವೂ ಪೊಟ್ಟು ಪಟಾಕಿ ಎಂದು ವ್ಯಂಗ್ಯವಾಡಿದರು.
ಜಾತಿ ಆಧರಿತ ಮೇಲೆ ನಡೆಯುವ ಚುನಾವಣೆ ಇದಲ್ಲ. ಏನಿದ್ದರೂ ಇಲ್ಲಿ ಪಕ್ಷ ಹಾಗೂ ಸೈದ್ಧಾಂತಿಕ ಸಿದ್ಧಾಂತದ ಮೇಲೆ ನಡೆಯುವ ಚುನಾವಣೆ ಇದಾಗಿದೆ. ಹಿಂದುತ್ವ ಅನ್ನುವುದು ಜೀವನ ಪದ್ಧತಿಯಾಗಿದೆ ಹೊರತು ಮತ್ತೊಬ್ಬರ ಬದುಕಿನೊಂದಿಗೆ ಚೆಲ್ಲಾಟವಾಡುವುದಲ್ಲ. ಕೂಡಿ ಬಾಳುವುದರಿಂದ ಎಲ್ಲರ ವಿಕಾಸಕ್ಕೆ ಬುನಾದಿಯಾಗುತ್ತದೆ. ಇಂತಹ ಸಿದ್ಧಾಂತವೇ ನಮ್ಮೆಲ್ಲರ ಬದುಕಿಗೆ ಪ್ರೇರಣೆಯಾಗಿದೆ. ನಮಗೆ ಹಿಂದುತ್ವ ಎನ್ನುವುದನ್ನು ಯಾರಿಮದಲೂ ಕಲಿಸುವ ಅಗತ್ಯ ಇಲ್ಲ. ಕಾರ್ಕಳವು ಶಾಂತಿ ಸಹಬಾಳ್ವೆಯ ಊರು ಆಗಿದೆ ಎಂದು.
ಈ ಹಿಂದೆ ಸುನೀಲ್ ಕುಮಾರ್ ಹಮ್ಮಿಕೊಂಡಿದ್ದ ಸ್ವರ್ಣ ಕಾರ್ಕಳ, ಸ್ವಚ್ಛ ಕಾರ್ಕಳದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಚುನಾವಣೆಯಲ್ಲಿ ಸುನೀಲ್ ಕುಮಾರ್ ಅವರನ್ನು ಗೆಲ್ಲಿಸೋಣ. ಅವರ ಕನಸ್ಸು ನನಸಾಗಿಸೋಣ ಎಂದರು.
ಕರೋನಾ ಸಂಕಷ್ಟದ ದಿನಗಳಲ್ಲಿ ಪರವೂರುಗಳಲ್ಲಿ ಸಿಲುಕಿಕೊಂಡಿದ್ದ ಸಾವಿರಾರು ಮಂದಿಯನ್ನು ಊರಿಗೆ ಬರಲು ಎಲ್ಲ ರೀತಿಯಲ್ಲಿ ಸಹಕಾರ ನೀಡಿದವರೇ ಸುನೀಲ್ ಕುಮಾರ್ ಆಗಿದ್ದಾರೆ. ಊರಿಗೆ ಬಂದವರಿಗೆ ಕ್ವಾರೆಂಟನ್ ವ್ಯವಸ್ಥೆ ಕಲ್ಪಿಸಿ ಅಲ್ಲಿ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದವರು. ಇದು ಎಂದಿಗೂ ಮರೆಯಲಾಗದ ನೆರವಿನ ಕಾಣಿಕೆಯಾಗಿದೆ. ಹೊರ ಜಿಲ್ಲೆ, ಹೊರದೇಶಗಳಲ್ಲಿ ಕನ್ನಡಿಗ ಸಂಕಷ್ಟದಲ್ಲಿ ಇದ್ದಾಗ ಅವರ ನೆರವಿಗೆ ಮುಂದಾಗುವವರಲ್ಲಿ ಮುಂಚೂಣಿಯಲ್ಲಿ ಇದ್ದವರು ಸುನೀಲ್ ಆಗಿದ್ದಾರೆ. ಅವರಿಂದಾಗಿ ಹಲವು ಮಂದಿ ಸಂಕಷ್ಟದಿAದ ಪರಾಗಿ ಊರಿಗೆ ಮರಳಿದ್ದಾರೆ ಎಂಬುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಬಿಜೆಪಿ ಮುಖಂಡ ಅನಂತಕೃಷ್ಣ ಶೆಣೈ, ವಕ್ತಾರ ಸಾಣೂರು ನರಸಿಂಹ ಕಾಮತ್ ಉಪಸ್ಥಿತರಿದ್ದರು.
ತಮಿಳು ಚಿತ್ರರಂಗದ ಜನಪ್ರಿಯ ನಟ ಸಿಂಭು ಅವರ ವಿರುದ್ಧ ಇದೀಗ ನಿರ್ದೇಶಕ ದೂರು ನೀಡಿದ್ದು ತಮಿಳು ಚಿತ್ರರಂಗದಿಂದ ಹೊರಗಟ್ಟಬೇಕು ಎಂದು…
ಹಲವಾರು ಕಾರಣಗಳಿಗಾಗಿ ಕೆಲಸದ ಸ್ಥಳದಲ್ಲಿ ಅತಿಯಾದ ಒತ್ತಡವುಂಟಾಗುತ್ತದೆ. ಇದರಿಂದ ಆಯಾಸ ಹಾಗೂ ವಿಶ್ರಾಂತಿಯ ಕೊರತೆ ತಲೆದೋರುತ್ತದೆ. ಇದರಿಂದ ವ್ಯಕ್ತಿ ಸಿಕ್ಕಾಪಟ್ಟೆ…
ರಾಜ್ಯದ ಕೆಲವಡೆ ಬಾರಿ ಮಳೆಯಾಗುವ ಸಾಧ್ಯತೆ ಇರುವ ಕಾರಣ ಹವಮಾನ ಇಲಾಖೆ 8 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್, 23 ಜಿಲ್ಲೆಗಳಿಗೆ…
ತಾಯಂದಿರ ದಿನ , ತಾಯಂದಿರ ಗೌರವಾರ್ಥ ರಜಾದಿನವನ್ನು ವಿಶ್ವದಾದ್ಯಂತ ದೇಶಗಳಲ್ಲಿ ಆಚರಿಸಲಾಗುತ್ತದೆ. ಅದರ ಆಧುನಿಕ ರೂಪದಲ್ಲಿ ರಜಾದಿನವು ಹುಟ್ಟಿಕೊಂಡಿತುಯುನೈಟೆಡ್ ಸ್ಟೇಟ್ಸ್…
ವಾರದ ಆರಂಭದಲ್ಲೇ ಶುಭ ಸುದ್ದಿ. ಮನೆಯಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದ್ದು, ವಾರಾಂತ್ಯದಲ್ಲಿ ಎಲ್ಲವೂ ಸರಿದೂಗಲಿದೆ. ಕಾರ್ಮಿಕರಿಗೆ ಲಾಭ.…
ಹೆಸರೇ ಸೂಚಿಸುವಂತೆ, ಆದಿ ಶಂಕರ ಜಯಂತಿಯನ್ನು ಭಾರತೀಯ ತತ್ವಜ್ಞಾನಿ ಮತ್ತು ದೇವತಾಶಾಸ್ತ್ರಜ್ಞ ಆದಿ ಶಂಕರರ ಜನ್ಮದಿನದ ಸವಿ ನೆನಪಿಗಾಗಿ ಆಚರಿಸಲಾಗುತ್ತದೆ.…