ಉಡುಪಿ: ಉಡುಪಿಯ ರಂಜಿನಿ ಸ್ಮಾರಕ ಟ್ರಸ್ಟ್ ಪ್ರತಿವರ್ಷ ಆಯೋಜಿಸುತ್ತಿರುವ ರಂಜಿನಿ ಸ್ಮಾರಕ ಸಂಗೀತೋತ್ಸವ ಸೆ.9ರಿಂದ 17ರವರೆಗೆ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಟ್ರಸ್ಟ್ನ ಸ್ಥಾಪಕ ಪ್ರೊ.ವಿ.ಅರವಿಂದ ಹೆಬ್ಬಾರ್ ತಿಳಿಸಿದ್ದಾರೆ.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.9ರ ಸಂಜೆ ಸಂಗೀತೋತ್ಸವ ಉದ್ಘಾಟನೆ ಗೊಳ್ಳಲಿದ್ದು, ಇದರೊಂದಿಗೆ ಟ್ರಸ್ಟ್ನ ವೆಬ್ಸೈಟ್ ಹಾಗೂ ತಾನು ಬರೆದ ‘ಸೌತ್ ಕೆನರಾದಲ್ಲಿ ಸಂತ ನಡೆದು ಬಂದ ದಾರಿ’ ಕೃತಿ ಅನಾವರಣಗೊಳ್ಳಲಿದೆ ಎಂದರು. ಬಳಿಕ 5:30ರಿಂದ ಅರ್ಚನಾ, ಸಮನ್ವಿ, ದೇವಿ, ಗಾರ್ಗಿ, ಶುಭಾಂಗಿ ಹಾಗೂ ಶ್ರೀರಾಗ್ ಇವರಿಂದ ಪ್ರದರ್ಶನವಿರುತ್ತದೆ.
ಸೆ.10ರಂದು ಪ್ರಸಿದ್ಧ ಗಾಯಕಿ ರಂಜನಿ ಗಾಯತ್ರಿ ಇವರ ಕರ್ನಾಟಕ ಕಚೇರಿ ಇದ್ದರೆ, 11ರಂದು ನೌಶಾದ್ ಹಾಗೂ ನಿಶಾದ್ ಹರ್ಲಾಪುರ್ ಇವರಿಂದ ಹಿಂದೂಸ್ತಾನಿ ಗಾಯನವಿದೆ. 12ರಂದು ಅಮೃತ ಮುರಳಿ ಇವರಿಂದ ಕರ್ನಾಟಕ ಸಂಗೀತ, 13ರಂದು ಚೆನ್ನೈನ ವಿನಯ್ ವಾರಣಾಸಿ ಇವರು ಸಂಗೀತ ಸಂಕೀರ್ತನೆ ಮೂಲಕ ಕಥೆಗಳನ್ನು ಹೇಳಲಿದ್ದಾರೆ ಎಂದರು.
ಸೆ.14ರಂದು ಜೆಬಿ ಶ್ರುತಿಸಾಗರ್ರಿಂದ ಕೊಳಲುವಾದನ, 15ರಂದು ಮೈಸೂರು ನಾಗರಾಜ್ ಹಾಗೂ ಕಾರ್ತಿಕ್ರಿಂದ ದ್ವಂದ್ವ ವಯಲಿನ್ ವಾದನ, 16ರಂದು ಆದಿತ್ಯ ಮಾಧವ್ರಿಂದ ಕರ್ನಾಟಕ ಸಂಗೀತ ಕಚೇರಿ ನಡೆಯಲಿದೆ. ಕೊನೆಯ ದಿನವಾದ ಸೆ.17ರಂದು ಬೆಳಗ್ಗೆ 10ರಿಂದ ಹಯಗ್ರೀವ ನಗರದ ಲತಾಂಗಿಯಲ್ಲಿ ಬೆಂಗಳೂರಿನ ಸ್ವಾಮಿ ಸೂರ್ಯಪದ ಇವರಿಂದ ಸತ್ಸಂಗ ಭಜನೆ ನಡೆಯಲಿದೆ ಎಂದರು.
ಆಮ್ ಆದ್ಮಿ ಪಕ್ಷಕ್ಕೆ ವಿದೇಶಿ ಮೂಲಗಳಿಂದ 7 ಕೋಟಿ ರೂ.ಗೂ ಹೆಚ್ಚು ದೇಣಿಗೆ ಸಿಕ್ಕಿರುವ ಬಗ್ಗೆ ಎಫ್ಸಿಆರ್ಎ ತನಿಖೆಯನ್ನು ಕೋರಿ…
ಕೆರೆಯ ಬಳಿ ಆಸ್ವಸ್ಥಗೊಂಡು ಬಿದ್ದಿದ್ದ ಆನೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಹೆಡಿಯಾಲ ಉಪ-ವಿಭಾಗ…
ಒಂದು ವರ್ಷ ಅಧಿಕಾರ ಪೂರೈಸುವ ಹೊತ್ತಿಗೆ ನೂರೊಂದು ಸಮಸ್ಯೆಗಳನ್ನು ತಂದುಕೊಂಡಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ…
ಆಕಸ್ಮಿಕವಾಗಿ ಸಂಭವಿಸುವ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಪಡೆದುಕೊ ಳ್ಳುವ ಸಲುವಾಗಿ ಸರ್ಕಾರ ಜಾರಿಗೊಳಿಸಿರುವ ಯಶಸ್ವಿನಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು…
ರಾಜ್ಯದಲ್ಲಿ ಭೀಕರ ಬರಗಾಲದಿಂದ ಕಂಗೆಟ್ಟಿರುವ ರೈತರಿಗೆ ರಾಜ್ಯ ಸರಕಾರ ಅಲ್ಪ ಮಟ್ಟಿಗೆ ಪರಿಹಾರ ನೀಡಿ ನಿಟ್ಟುಸಿರು ಬಿಡುವಂತೆ ಮಾಡಿದೆ.ಆದರೆ ಅಫಜಲಪುರ…
ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಬೆನ್ನಲ್ಲೇ ಇದೀಗ ಅಂಜಲಿ ಅಂಬಿಗೇರ ಕೊಲೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಈ ಬಗ್ಗೆ…