ಉಡುಪಿ: ಜನರನ್ನು ವಂಚಿಸಲು ಸ್ಕ್ಯಾಮರ್ ಗಳು ಹೊಸ ಹೊಸ ವಿಧಾನವನ್ನು ಹುಡುಕುತ್ತಾ ಇರುತ್ತಾರೆ. ಇವರ ಈ ವಂಚನಾ ಜಾಲದಲ್ಲಿ ಸಿಕ್ಕಿಹಾಕಿಕೊಂಡ್ರೆ ನಿಮಗೆ ಪಂಗನಾಮ ಗ್ಯಾರಂಟಿ. ಇದೀಗ ಆನ್ ಲೈನ್ ಹೆಸರಿನಲ್ಲಿ ಹೊಸತೊಂದು ವಂಚನೆ ನಡೆಯುತ್ತಿದೆ. ಈ ಬಗ್ಗೆ ಜನರು ಜಾಗೃತೆಯಾಗಿರಬೇಕಿದೆ.
ಬ್ಯಾಂಕ್ ಹೆಸರಿನಲ್ಲಿ ಅನೇಕ ವಿಧದಲ್ಲಿ ವಂಚನೆ ಮಾಡೋದು ಎಲ್ಲರಿಗೆ ಗೊತ್ತೇ ಇದೆ. . ಜನರನ್ನು ವಂಚಿಸಲು ಸ್ಕ್ಯಾಮರ್ ಗಳು ಹೊಸ ವಿಧಾನವನ್ನು ಕಂಡುಹುಡುಕುತ್ತಾರೆ.ಆದ್ರೆ ಈ ಬಗ್ಗೆ ಅರಿವಿಲ್ಲದವರು ಇಂತಹ ವಂಚನಾ ಜಾಲದಲ್ಲಿ ಸಿಲುಕಿ ತಮ್ಮ ಹಣ ಕಳೆದುಕೊಳ್ಳುತ್ತಾರೆ. ಇದೀಗ ಸ್ಕ್ಯಾಮರ್ ಗಳು ಹೊಸ ವಿಧಾನ ಕಂಡು ಹುಡುಕಿದ್ದು ಹೆಚ್ಚಿನವರಿಗೆ ರಿಜಿಸ್ಟಾರ್ ಪೋಸ್ಟ್ ಕಳುಹಿಸಿ ವಂಚಿಸಲಾಗುತ್ತಿದೆ.
ಹೌದು, ನಗರ ಭಾಗದಲ್ಲಿ ಬಟ್ಟೆಬರೆಗಳನ್ನು ಆನ್ ಲೈನ್ ಮೂಲಕನೇ ಖರೀದಿಸಲಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಮಿಶೋ ಹೆಸರಿನ ಬಟ್ಟೆಬರೆಗಳ ಆನ್ ಲೈನ್ ಕಂಪೆನಿಯ ಹೆಸರಿನಲ್ಲಿ ರಿಜಿಸ್ಟಾರ್ ಪೋಸ್ಟ್ ಕಳುಹಿಸುತ್ತಿದ್ದಾರೆ. ಈ ರಿಜಿಸ್ಟಾರ್ ಪೋಸ್ಟ್ ನಲ್ಲಿ ಗಿಫ್ಟ್ ಓಚರೊಂದನ್ನು ಕಳುಹಿಸಿ ನೀವು ಕಂಪೆನಿಯ ವಾರ್ಷಿಕೊತ್ಸವದ ಸಂದರ್ಭದಲ್ಲಿ ಹಮ್ಮಿಕೊಂಡ ಲಕ್ಕಿ ಕೂಪನ್ ನಲ್ಲಿ ಗೆದ್ದಿದ್ದೀರಿ ನಿಮಗೆ ಬಂಪರ್ ಬಹುಮಾನವಾಗಿ ಕಾರು ಸಿಕ್ಕಿದೆ ಅಂತ ನಂಬಿಸುತ್ತಾರೆ.
ನಿಮ್ಮ ಎಕೌಂಟ್ ಗೆ ಹಣ ವರ್ಗಾವಣೆ ಮಾಡುತ್ತೇವೆ ಅದಕ್ಕಾಗಿ ಫಾರ್ಮೊಂದನ್ನು ತುಂಬಿಸಿ ವಾಟ್ಸಾಪ್ ಮಾಡಿ ಎಂದು ಹೇಳುತ್ತಾರೆ. ಬಳಿಕ ಎಲ್ಲಾ ಬ್ಯಾಂಕ್ ಡೀಟೇಲ್ಸ್ ಪಡೆದು ಮುಂಗಡವಾಗಿ ಹಣವನ್ನು ನೀಡಬೇಕು ಎಂದು ನಂಬಿಸಿ ಮೋಸ ಮಾಡುತ್ತಾರೆ. ಇಂತಹ ಮೋಸದ ಜಾಲ ಸದ್ಯ ಸಕ್ರೀಯವಾಗಿದ್ದು ಈ ಬಗ್ಗೆ ನಾಗರಿಕರು ಎಚ್ಚರದಿಂದ ಇರಬೇಕಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ನಾಳೆ ಮೇ ಮೂರರಂದು ದಾವಣಗೆರೆಗೆ ಆಗಮಿಸುತ್ತಿದ್ದಾರೆ.
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅಂದಿನ ಕಾರ್ಮಿಕ ವರ್ಗ ಇಂದು ಮತ್ತೆ ದೇಶವನ್ನು ಉಳಿಸಲು ಸನ್ನದ್ದವಾಗಬೇಕು.ಕಳೆದ 10…
ಪವಾಡ ಪುರುಷ ಮಲೆ ಮಹದೇಶ್ವರ ಕೋಟಿ ಒಡೆಯನಾಗಿ ಮುಂದುವರೆಯುತ್ತಿದ್ದು, ಇದೀಗ 34 ದಿನಗಳ ಅಂತರದಲ್ಲಿ ಮೂರು ಕೋಟಿ ನಾಲ್ಕು ಲಕ್ಷದ…
ಅಶ್ಲೀಲ ವೀಡಿಯೋ ಪ್ರಕರಣ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿದ್ದು, ಅವರಿಗೆ ಕ್ಲಿಯರೆನ್ಸ್ ಕೊಟ್ಟವರು ಯಾರು ಎಂಬುದರ…
ಉಡುಪಿ ಜಿಲ್ಲೆಯಾದ್ಯಂತ ಸಿ ಎನ್ ಜಿ ಬಂಕ್ ಗಳಲ್ಲಿ ಇಂಧನ ಕೊರತೆಯಿಂದ ರಿಕ್ಷಾ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ…
ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ…