ಉಡುಪಿ: ಕೃಷ್ಣಜನ್ಮಾಷ್ಟಮಿ ಹಾಗೂ ಪಿಟ್ಲಪಿಂಡಿ ಉತ್ಸವ ಪ್ರಯುಕ್ತ ಉಡುಪಿಯಲ್ಲಿ ಹುಲಿ ಕುಣಿತ ಅಬ್ಬರ ಜೋರಾಗಿದೆ. ಚೆಂಡೆಯ ಸದ್ದಿಗೆ ತಕ್ಕಂತೆ ಹೆಜ್ಜೆ ಹಾಕುವ ಹುಲಿ ವೇಷಧಾರಿಗಳು ಗಮನ ಸೆಳೆಯುತ್ತಿದ್ದಾರೆ.
ವಿವಿಧ ಹುಲಿ ತಂಡಗಳು ಉಡುಪಿಯ ರಥಬೀದಿ ಹಾಗೂ ಪ್ರಮುಖ ರಸ್ತೆಗಳಲ್ಲಿ ಪ್ರದರ್ಶನ ನೀಡಿ ಸಾರ್ವಜನಿಕರನ್ನು ರಂಜಿಸಿದರು. ಕಾಡಬೆಟ್ಟು ಅಶೋಕ್ ರಾಜ್ ತಂಡದ ಹುಲಿ ಕುಣಿತ ಎಲ್ಲರ ಗಮನ ಸೆಳೆಯಿತು. ಅಲೆವೂರು, ಮಾರ್ಪಳ್ಳಿ, ಇಂದಿರಾನಗರ, ಮಲ್ಪೆ, ಬೈಲಕೆರೆ, ಕಡಿಯಾಳಿ ಹಾಗೂ ದರ್ಪಣಾ ಮಹಿಳಾ ತಂಡದ ಸದಸ್ಯರು ಎಲ್ಲರನ್ನೂ ರಂಜಿಸುತ್ತಿದ್ದಾರೆ.