ಉಡುಪಿ: ಚಂದ್ರಯಾನ 2 ವಿಫಲತೆಯ ಬಳಿಕ ಅಧ್ಯಯನ ಮಾಡಿ ಚಂದ್ರಯಾನ 3 ಕಳಿಸಲಾಗಿದೆ. ಇಂದು ಅದು ಲ್ಯಾಂಡ್ ಅಗಲಿದೆ. ಟೆಸ್ಟ್ ನಲ್ಲಿ ಏನಾದರೂ ಸಮಸ್ಯೆ ಕಂಡು ಬಂದಲ್ಲಿ ಲ್ಯಾಂಡಿಂಗ್ ಅನ್ನು ಮುಂದೂಡುತ್ತಾರೆ ಎಂದು ಉಡುಪಿ ಪಿಪಿಸಿ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕ, ಖಗೋಳ ಜ್ಞಾನಿ ಅತುಲ್ ಭಟ್ ಮಾಹಿತಿ ನೀಡಿದ್ದಾರೆ.
ಇಳಿಯುವ 4 ಗಂಟೆಗಳ ಮುಂಚೆ ಕೆಲವೊಂದು ಟೆಸ್ಟ್ ನಡೆಸುತ್ತಾರೆ. ಟೆಸ್ಟ್ ನಲ್ಲಿ ಏನಾದರೂ ಸಮಸ್ಯೆ ಕಂಡು ಬಂದಲ್ಲಿ ಲ್ಯಾಂಡಿಂಗ್ ಅನ್ನು ಮುಂದೂಡುತ್ತಾರೆ. ಎರಡೂ ದಿಕ್ಕಿನ ಎಳಿತದಿಂದ ಇದು ಸೇಫಾಗಿ ಲ್ಯಾಂಡ್ ಆಗಲಿದೆ. ಇದರಲ್ಲಿ 11 ಕ್ಯಾಮೆರಾ ಇದೆ, ಇದರ ಮೂಲಕ ಮಾಹಿತಿ ಪಡೆಯುತ್ತಾರೆ. ಚಂದ್ರನಲ್ಲಿ ಏನೇ ನಡೆದರೂ ನಮಗೆ ಗೊತ್ತಾಗುವುದು 1.3 ಸೆಕೆಂಡ್ ಬಳಿಕ. ಹೀಗಾಗಿ ನಾವು ಕಮಾಂಡ್ ಗಳನ್ನು ಕಳಿಸಿ ಅದು ಚಂದ್ರನಲ್ಲಿಗೆ ತಲುಪುವಾಗ 3 ಸೆಕೆಂಡ್ ನಷ್ಟು ಸಮಯ ತಗಲುತ್ತದೆ. ಹೀಗಾಗಿ ಎಲ್ಲಾ ಮಾಹಿತಿಯನ್ನು ಸಾಪ್ಟ್ ವೇರ್ ಮೂಲಕ ಫೀಡ್ ಮಾಡಲಾಗಿದೆ ಎಂದರು.
10 ಮೀಟರ್ ಎತ್ತರದಲ್ಲಿ ಇರುವಾಗ ಥಸ್ಟರ್ ಗಳನ್ನು ಆಫ್ ಮಾಡಲಾಗುತ್ತದೆ. ಈ ಬಳಿಕ ರೋವರ್ ನಿಧಾನವಾಗಿ ಲ್ಯಾಂಡ್ ಆಗಲಿದೆ. ಆದರೂ ಕೂಡಾ ಆ ಕ್ಷಣದಲ್ಲಿ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ ಎಂಬುವುದು ವಿಜ್ಞಾನಿಗಳಿಗೆ ಕೂಡಾ ತಿಳಿದಿದೆ. ಈ ಬಾರಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿ, ಈ ಬಾರಿ ಇಂಧನವನ್ನು ಕೂಡಾ ಜಾಸ್ತಿ ಮಾಡಿ ಕಳಿಸಲಾಗಿದೆ. ಇಳಿದ 4 ಗಂಟೆ ಯ ಬಳಿಕ ರೊವರ್ ಹೊರಬರಲಿದೆ. ಲೂನಾ ಕೂಡಾ ಕ್ರ್ಯಾಶ್ ಆಗಿದೆ. ಹಿಗಾಗೀ ಭಾರತ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ಮೊದಲ ದೇಶ ಆಗಲಿದೆ ಎಂದು ಹೇಳಿದ್ರು.