ಉಡುಪಿ

ಕಾರ್ಕಳದಲ್ಲಿ ಮೈಸೂರು ರೇಸ್ ಕುದುರೆಯ ಆಕರ್ಷಣೆ

ಕಾರ್ಕಳ: ಮೈಸೂರು ರೇಸ್ ಕುದುರೆ ಕಾರ್ಕಳದ ರಸ್ತೆಯಲ್ಲಿ ಕಾಣಸಿಗುತ್ತಿದೆ. ಅಂದ ಹಾಗೇ ಮೈಸೂರಿನ ಕುದುರೆ ರೇಸ್‌ಕೋರ್ಸಿನಲ್ಲಿ ಪಾಲ್ಗೊಂಡ ಆಸಕ್ತರಿಗೆ ಗೋಲ್ಡನ್ ಬ್ರೌನ್ ಬಣ್ಣ ರ‍್ಯಾಂಚೊ ನಾಮಾಂಕಿತದ ಇದರ ಪರಿಚಯ ಇರಲೂ ಬಹುದು. ಇದರ ಪ್ರಾಯ ೪ ವರ್ಷ ೨ ತಿಂಗಳು. ಮೈಸೂರು ರೇಸ್‌ಕೋರ್ಸಿನಲ್ಲಿ ೨ ಬಾರಿ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ೮ ಅಡಿ ಎತ್ತರ ೮ ಅಡಿ ಉದ್ದ ಹಾಗೂ ೪ ಅಡಿ ಅಗಲ ಹೊಂದಿದೆ.

ಉಗರ ಪ್ರೇಮಿ ಕುದುರೆ ಪ್ರೇಮಿಯಾದಾಗ: ತೆಳ್ಳಾರು ರಸ್ತೆ ನಿವಾಸಿ ಅನಿಲ್ ಪ್ರಭು ಉರಗಪ್ರೇಮಿ. ಅಸಂಖ್ಯಾತ  ವಿಷಪೂರಿತ ಉರಗಗಳನ್ನು ಸೆರೆ ಹಿಡಿದು ಅಭಯಾರಣ್ಯದಲ್ಲಿ ಮುಕ್ತಗೊಳಿಸಿ ನಾಗರಿಕರನ್ನು ಭಯ ಮುಕ್ತಗೊಳಿಸುವ ಸತ್ಕಾರ್ಯವನ್ನು ಹಲವು ವರ್ಷಗಳಿಂದ ನಡೆಸುತ್ತಾ ಬಂದಿರುವ ಕೀರ್ತಿ ಇವರಿಗೆ ಸಲ್ಲುತ್ತದೆ.

ಗಾಯಗೊಂಡ ಉರಗಗಳಿಗೆ ಚಿಕಿತ್ಸೆ ನೀಡುವ ಸಂದರ್ಭ ಬರೋಬರಿ ೩ ಸಲ ವಿಷಪೂರಿತ ಉರಗಗಳಿಂದ ಕಡಿತಕ್ಕೊಳಗಾಗಿ ಜೀವನ್ಮರಣ ಹೋರಾಟದಲ್ಲಿ ಗೆದ್ದು ಬಂದವರು  ಅನಿಲ್‌ ಪ್ರಭು.

ರಾಜಮಹಾರಾಜರ ಕಾಲದಲ್ಲಿ ಮಹತ್ವ ಪಡೆದಿತು: ಕಾರ್ಕಳವನ್ನು ಆಳಿದ ಬೈರವರಸರ ಕಾಲಘಟ್ಟದಲ್ಲಿ ಆನೆ,ಕುದುರೆಗಳಿಗೆ ಭಾರೀ ಮಹತ್ವ ಇತ್ತು. ಯುದ್ಧಗಳಲ್ಲಿ ವೈರಿಗಳನ್ನು ಸದೆ ಬಡಿಯಲು ಆನೆ, ಕುದುರೆಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಅಂತಹ ಕಾಲಘಟ್ಟದಲ್ಲಿ ಕಾರ್ಕಳದಲ್ಲಿ ಕುದುರೆಗಳು ಕಂಡು ಬಂದಿತ್ತಾದರೂ, ನಂತರದ ಕಾಲಘಟ್ಟದಲ್ಲಿ ಕುದುರೆಗಳ ಬಳಕೆ ತೀರಾ ಕಡಿಮೆಯಾಗುತ್ತಾ ಹೋಯಿತು.

ಕಾರ್ಕಳ ಉತ್ಸವ ಸಂದರ್ಭದಲ್ಲಿ ಕುದುರೆಗಾಡಿಗಳು ಕಂಡುಬದಿದ್ದವು. ಉತ್ಸವಕ್ಕೆಂದು ಬಂದವರಲ್ಲಿ ಕೆಲವರು ಕುದುರೆಗಾಡಿಯಲ್ಲಿ ಕುಳಿತು ಸಂಭ್ರಮಿಸಿದ್ದರು.

ಕುದುರೆಯ ಕುರಿತು ಆಸಕ್ತಿ ಮೂಡಿದಾಗ: ಅನಿಲ್‌ಪ್ರಭು ವಿಗೆ ಕುದುರೆಯ ಕುರಿತು ಎಲ್ಲಿಲ್ಲದ ಆಸಕ್ತಿ. ಏನಾದರೂ ಮಾಡಿ ಕುದುರೆಯೊಂದನ್ನು ಕಾರ್ಕಳಕ್ಕೆ ತರಲೇ ಬೇಕೆಂಬ ಛಲಕ್ಕೆ ಬಿದ್ದ ಅವರು ನೇರವಾಗಿ ಪ್ರಯಾಣಿಸಿರುವುದು ಮೈಸೂರಿಗೆ. ಮೈಸೂರು ರೇಸ್‌ಕೋರ್ಸ್ ಕ್ಲಬ್‌ಗೆ ಭೇಟಿ ನೀಡಿದ ಅವರು ಮೊದಲಿಗೆ ತರಬೇತಿ ಪಡೆದರು. ಕುದುರೆಯನ್ನು ಕೊಂಡುಕೊಂಡರು. ರ‍್ಯಾಮಚೋ ಕುದುರೆಯನ್ನು ಕಳೆದ ಕೆಲದಿನಗಳ ಹಿಂದೆ ಕಾರ್ಕಳಕ್ಕೆ ತಂದಿದ್ದಾರೆ.

ನೀಡುವ ಆಹಾರ: ಕುದುರೆಗೆ ಬೇಕಾದ ಅಗತ್ಯ ಆಹಾರವನ್ನು ಬೆಂಗಳೂರಿನಿದ ತರಿಸುತ್ತಾರೆ. ಸ್ಥಳೀಯ ಹುಲ್ಲನ್ನು ಹಾಕುತ್ತಾರೆ. ದಿನವೊಂದಕ್ಕೆ ಸುಮಾರು ೬೦೦ ಖರ್ಚು ಭರಿಸುವ ಅಗತ್ಯ ಇದೆ. ಅಸಕ್ತರಿಗೆ ಕುದುರೆ ಸವಾರಿಯ ತರಬೇತಿ ನೀಡಲು ಮುಂದಾಗುವುದಾಗಿ ಅನಿಲ್ ಪ್ರಭು ತಿಳಿಸಿದ್ದಾರೆ.

Ashika S

Recent Posts

ಜೂ.14 ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ-2 ಪ್ರಾರಂಭ

ಮೇ.15 ರಿಂದ ಆರಂಭವಾಗಿದ್ದ ಎಸ್​ಎಸ್​ಎಲ್​ಸಿ ವಿಶೇಷ ಪರಿಹಾರ ಬೋಧನೆ ತರಗತಿಗಳನ್ನು ಮುಂದೂಡಿ, ಮೇ 29 ರಿಂದ ಜೂ.13ರವರೆಗೆ ನಡೆಸಲು‌ ರಾಜ್ಯ…

14 mins ago

ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಡಿಕ್ಕಿ: ಮೂವರ ದುರ್ಮರಣ

ಹುಲಿಗೆಮ್ಮ ದೇವಿ ದರ್ಶನ ಮುಗಿಸಿ ಟ್ರ್ಯಾಕ್ಟರ್​ನಲ್ಲಿ ಮನೆಗೆ ಹೋಗುವಾಗ ​ಹಿಂದಿನಿಂದ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಈಗ…

32 mins ago

ಬೀದರ್: ನರೇಗಾ ಕಾಮಗಾರಿ ಪರಿಶೀಲಿಸಿದ ಉಪ ಕಾರ್ಯದರ್ಶಿ

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ.ಎಂ.ಸವಿತಾ ಅವರು ಬುಧವಾರ ತಾಲ್ಲೂಕಿನ ವಿವಿಧೆಡೆ ನಡೆಯುತ್ತಿರುವ ಮಹಾತ್ಮ ಗಾಂಧಿ ಉದ್ಯೋಗ ಖಾತರಿ (ನರೇಗಾ)…

54 mins ago

ಮನಿ ಲಾಂಡರಿಂಗ್ ಪ್ರಕರಣ: ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಲಂಗೀರ್ ಆಲಂ

ಮನಿ ಲಾಂಡರಿಂಗ್ ಕೇಸಿನಲ್ಲಿ ಬಂಧನಕ್ಕೊಳಗಾಗಿರುವ ಜಾರ್ಖಂಡ್​ನ ಕಾಂಗ್ರೆಸ್ ನಾಯಕ ಮತ್ತು ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಇಂದು ತಮ್ಮ…

1 hour ago

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಕಾಲಕ್ಕೆ ಸಿಗದ ಔಷಧ: ಸಾರ್ವಜನಿಕರ ಆಕ್ರೋಶ

ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಬಡಜನರಿಗೆ ಸಕಾಲಕ್ಕೆ ಸಿಗಬೇಕಾದ ಸೇವೆಯು ಮರೀಚಿಕೆಯಾಗಿ ಹೋಗಿದೆ. ಚಿಕಿತ್ಸೆಗೆ ಆಸ್ಪತ್ರೆಗೆ ಬಂದ ರೋಗಿಗಳು ವೈದ್ಯರಿಗಾಗಿ…

1 hour ago

ಪದವೀಧರರ ಸಮಸ್ಯೆಗೆ ಸ್ಪಂದಿಸಿದ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿ: ಡಾ. ಶಿಂಧೆ

ಪದವೀಧರರ ಸಮಸ್ಯೆಗೆ ಸ್ಪಂದಿಸುವ ಹಾಗೂ ಸದಾ ಸಂಪರ್ಕಕ್ಕೆ ಸಿಗುವಂಥ ಸೂಕ್ತ ಮತ್ತು ಸಮರ್ಥ ಕಾಂಗ್ರೆಸ್ ಅಭ್ಯರ್ಥಿಯಾದ ಡಾ. ಚಂದ್ರಶೇಖರ್ ಪಾಟೀಲ್…

2 hours ago