ಉಡುಪಿ

ಕುಂದಾಪುರ: ಸೂರಿಲ್ಲದ ಮಹಾಲಿಂಗೇಶ್ವರನಿಗೆ ಬಯಲಿನಲ್ಲೆ ಪೂಜೆ,ಅನಾಥವಾದ ಶಿವಾಲಯ

ಕುಂದಾಪುರ:ಬೈಂದೂರು ತಾಲೂಕಿನ ಹೇರೂರು ಗ್ರಾಮದ ರಾಗಿ ಹಕ್ಲು ಕೊಣಾಲು ಪರಿಸರದಲ್ಲಿ ಸೌಪರ್ಣಿಕಾ ನದಿ ತೀರದಲ್ಲಿ ಸೂರಿಲ್ಲದೆ ಬಯಲಿನಲ್ಲಿ ನೆಲೆಯಾಗಿರುವ ಪುರಾಣ ಪ್ರಸಿದ್ಧ ಶ್ರೀಮಹಾಲಿಂಗೇಶ್ವರ ದೇವರಿಗೆ ಮಹಾಶಿವರಾತ್ರಿ ಮಹೋತ್ಸವದ ದಿನದಂದು ಸಾಂಪ್ರದಾಯಕವಾಗಿ ಶಿವ ಪೂಜೆಯನ್ನು ನೆರವೇರಿಸಲಾಯಿತು.

ನೂರಾರು ವರ್ಷಗಳ ಕಾಲ ಇತಿಹಾಸವಿರುವ ಅರಸರ ಕಾಲದಲ್ಲಿ ವೈಭಯುತವಾಗಿ ವಿಜೃಂಭಿಸಿದ ಧರ್ಮ ರಕ್ಷಕನಾದ ಶ್ರೀಮಹಾಲಿಂಗೇಶ್ವರನ ದೇವಾಲಯವು ಅಜೀರ್ಣಾವಸ್ಥೆಯಲ್ಲಿದ್ದು ಸೂರಿಲ್ಲದ ಶಿವ ಮಳೆ ಬಿಸಿಲಿಗೆ ಮೈ ಒಡ್ಡಿ ಭಕ್ತರನ್ನು ಹರಸುತ್ತಾ ಇದ್ದಾನೆ.

ಶಿವಾಲಯದ ನಿರ್ಮಾಣಕ್ಕೆ ಬೇಕಿದೆ ಸಂಕಲ್ಪ : ನೂರಾರು ವರ್ಷಗಳಿಂದ ರಾಗಿ ಹಕ್ಲು ಕೊಣಾಲು ಪರಿಸರದಲ್ಲಿ ನೆಲೆಯಾಗಿರುವ ಶ್ರೀಮಹಾಲಿಂಗೇಶ್ವರ ದೇವಾಲಯವು ಕುಸಿದು ಬಿದ್ದು ನೆಲಸಮನಾಗಿ ಸರಿ ಸುಮಾರು 50 ಕ್ಕೂ ಅಧಿಕ ವರ್ಷಗಳೆ ಕಳೆದು ಹೋಗಿದೆ ಹೂವಿನ ಎಸಳನ್ನು ತಲೆ ಮೇಲಿಡದೆ ಹೆಚ್ಚು ಕಮ್ಮಿ ಐದು ದಶಕಗಳು ಸಂದಿವೆ ನೈವೇದ್ಯ, ಪೂಜೆ ಪೂರಸ್ಕಾರವಿಲ್ಲದೆ ಶಿವನು ಬಟಾಬಯಲಿನಲ್ಲಿ ಅನಾಥನಾಗಿ ಸೂರ್ಯ ಕಿರಣಗಳಿಗೆ ಮೈ ಒಡ್ಡಿ ನಿಂತಿದ್ದಾನೆ.

ಧರ್ಮ ರಕ್ಷಕನಾದ ಮಹಾದೇವನಿಗೆ ಸೂರೊಂದನ್ನು ನಿರ್ಮಿಸುವ ಕಾರ್ಯಕ್ಕೆ ಸದ್ಭಕ್ತರು, ಊರವರು, ಪರ ಊರಿನವರು,ದಾನಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ವಯಂ ಪ್ರೇರಿತರಾಗಿ ಶ್ರೀಮಹಾಲಿಂಗೇಶ್ವರ ದೇವರ ಸಾನಿಧ್ಯವನ್ನು ಸಂದರ್ಶನ ಮಾಡಿ ದೇವಾಲಯದ ನಿರ್ಮಾಣದ ಕಾರ್ಯಕ್ಕೆ ಎಲ್ಲರೂ ಸಂಕಲ್ಪ ಮಾಡುವುದರ ಮುಖಾಂತರ ಗತ ವೈಭವ ಮರುಕಳಿಸುವ ಕೆಲಸ ಮಾಡಬೇಕಾಗಿದೆ.

Sushma K

Recent Posts

ಚಾರ್ ಧಾಮ್​ ಯಾತ್ರೆ, ದೇವಸ್ಥಾನಗಳ ಬಳಿ ರೀಲ್ಸ್​ಗೆ ನಿಷೇಧ

ಚಾರ್​ ಧಾಮ್ ಯಾತ್ರೆ ಶುರುವಾಗಿದ್ದು, ಮೇ 31ರವರೆಗೆ ವಿಐಪಿ ದರ್ಶನಕ್ಕೆ ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ. ಅಷ್ಟೇ ಅಲ್ಲದೆ ದೇವಾಲಯದಗಳ…

15 mins ago

ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ !

ಭಾರತದ ಎಂಡಿಎಚ್​ ಹಾಗೂ ಎವರೆಸ್ಟ್​ ಮಸಾಲೆ ಉತ್ಪನ್ನಗಳಲ್ಲಿ ವಿಷಕಾರಿ ಅಂಶ ಇರುವ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ನೇಪಾಳವು…

1 hour ago

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಮಳೆಯ ಅಬ್ಬರ

ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ,…

2 hours ago

ಮನೆಗೆ ನುಗ್ಗಿ ಅಂಜಲಿ ಕೊಲೆ ಮಾಡಿದ್ದ ಆರೋಪಿ ಅರೆಸ್ಟ್

ಹುಬ್ಬಳ್ಳಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ವಿಶ್ವ ಅಲಿಯಾಸ್ ಗಿರೀಶ್​ನನ್ನು ಪೊಲೀಸರು ಬಂಧಿಸಿದ್ದಾರೆ.…

2 hours ago

ಚಿತ್ರದುರ್ಗ: ಮನೆಯೊಂದರಲ್ಲಿ ಮೃತಪಟ್ಟಿದ್ದ ಐವರ ಸಾವಿಗೆ ನಿದ್ರೆ ಮಾತ್ರೆ ಕಾರಣ!

ನಗರದ ಜೈಲು ರಸ್ತೆಯ ಮನೆಯೊಂದರಲ್ಲಿ ಪತ್ತೆಯಾಗಿದ್ದ ಐದು ಅಸ್ಥಿಪಂಜರಗಳಿಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ಅಂತಿಮ ವರದಿ ಪೊಲೀಸರ ಕೈ ಸೇರಿದ್ದು, ಸಾವಿಗೆ…

2 hours ago

ಬಿರುಗಾಳಿ ಸಹಿತ ಮಳೆಗೆ ಕುಸಿದ ಮಹಾದ್ವಾರ

ಭಾಲ್ಕಿ ತಾಲ್ಲೂಕಿನ ಭಾತಂಬ್ರಾ ಗ್ರಾಮದ ಬಸವ ಮಹಾದ್ವಾರ ಗುರುವಾರ ಸುರಿದ ಬಿರುಗಾಳಿ ಸಹಿತ ಮಳೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ…

3 hours ago