News Karnataka Kannada
Saturday, April 27 2024
ಉಡುಪಿ

ಕಾರ್ಕಳ: ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಪುತ್ಥಳಿಯಳ್ಳ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ

Karkala: Foundation stone laid for 12-feet statue of Chhatrapati Shivaji Maharaj
Photo Credit : News Kannada

ಕಾರ್ಕಳ: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ರಿ), ಬೆಂಗಳೂರು, ಕಾರ್ಕಳ ತಾಲೂಕು ಘಟಕ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ, ಯುವ ಮರಾಠ ಕಾರ್ಕಳ ಇವರ ಆಶ್ರಯದಲ್ಲಿ ಆರ್ಯ ಕ್ಷತ್ರಿಯ ಮರಾಠ ಸಮಾಜದ ಪುರುಷರಿಗಾಗಿ ಓವರ್ ಆರ್ಮ್ ಕ್ರಿಕೆಟ್ ಹಾಗೂ ಮಹಿಳೆಯರಿಗಾಗಿ ಓವರ್ ಆರ್ಮ್ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ ದಿ ಗ್ರೇಟ್ ಮರಾಠ ಟ್ರೋಫಿ 2022 , ನವೆಂಬರ್ 12 ಮತ್ತು 13 ರಂದು ಕಾರ್ಕಳದ ಸ್ವರಾಜ್ ಮೈದಾನದಲ್ಲಿ ನಡೆಯಲಿರುವುದು.

ಅದೇ ದಿನ ಬೆಳಿಗ್ಗೆ ಕಾರ್ಕಳ ನಗರದ ಬೈಪಾಸ್ ರಸ್ತೆ ಭವಾನಿ ಮಿಲ್ ನ ಬಳಿ ಛತ್ರಪತಿ ಶಿವಾಜಿ ಮಹಾರಾಜ ರ 12 ಅಡಿ ಪುತ್ಥಳಿಯಳ್ಳ ವೃತ್ತ ನಿರ್ಮಾಣಕ್ಕೆ ಶಿಲಾನ್ಯಾಸ ವನ್ನು ಇಂಧನ , ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನೀಲ್ ಕುಮಾರ್ ಇವರು ನೆರವೇರಿಸಲಿರುವರು. ಆನಂತರ ಶಿವಾಜಿ ವೃತ್ತದಿಂದ ವಾಹನ ಜಾಥಾದ ಮೂಲಕ ಹೊರಟು ಸ್ವರಾಜ್ ಮೈದಾನ ದಲ್ಲಿ ಕ್ರೀಡಾ ಕೂಟ ಉದ್ಘಾಟನೆ ಗೊಳ್ಳಲಿದೆ. ತಾ 13.11.22 ರ ಭಾನುವಾರ ಸಾಯಂಕಾಲ ಸಮಾರೋಪ ಸಮಾರಂಭವು ನೆರವೇರಲಿರುವುದು.

ಕಾಸರಗೋಡು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕ ಮಗಳೂರು, ಶಿವಮೊಗ್ಗ ಜಿಲ್ಲೆಗಳಿಂದ ಆರ್ಯ ಕ್ಷತ್ರಿಯ ಮರಾಠ ಸಮಾಜದ ಬಂಧುಗಳು ಹಾಗೂ ಅತಿಥಿ ಗಣ್ಯರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.ಎಂದು ಯುವ ಮರಾಠ ಸಂಚಾಲಕ ಚಿರಾಗ್ ರಾವ್, ಕೆ ಕೆ ಎಂ ಪಿ ಉಡುಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೀರ್ತನ್ ಕುಮಾರ್, ಕಾರ್ಯದರ್ಶಿ ಹರೀಶ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು