ಕಾರ್ಕಳ : ಜಿಲ್ಲೆಯ ಅತ್ಯಂತ ಪ್ರಸಿದ್ಧ ಚರ್ಚ್ ಆಗಿರುವ ಸಂತ ಲಾರೆನ್ಸ್ ಬಸಿಲಿಕ ಅತ್ತೂರು ಚರ್ಚಿನಲ್ಲಿ ಗರಿಗಳ ಭಾನುವಾರದಂದು, ನೈಜ್ಯ ಶಿಲುಬೆ ಹಾದಿಯನ್ನು ನೆರವೇರಿಸಲಾಯಿತು. ಸಂಜೆ 3.30ಕೆ ಚರ್ಚ್ ವಠಾರದಲ್ಲಿ ಪ್ರಾರಂಭವಾದ ಶಿಲುಬೆ ಹಾದಿ ಪರಪಳೇ ಪೆಟ್ಟದವರೆಗೆ ಸಾಗಿತು. ಬಂಟ್ವಾಳ ಇನ್ಫೆಂಟ್ ಜೀಸಸ್ ಚರ್ಚಿನ ಸಹಾಯಕ ಧರ್ಮ ಗುರುಗಳಾದ ವಂ ರಾಹುಲ್ ಡಿಸೋಜಾ. ಶಿಲುಬೆ ಹಾದಿಯ ಮುಂದಾಳುತ್ವವನ್ನು ವಹಿಸಿ ಪ್ರವಚನವಿತ್ತರು ತಮ್ಮ ಪ್ರವಚನದಲ್ಲಿ ನಾವು ನಮ್ಮ ಜೀವನದಲ್ಲಿ ನಮ್ಮ ಶಿಲುಬೆಯನ್ನು ಹೊತ್ತು ಮುಂದೆ ಸಾಗಬೇಕು ಎಂದರು.
ಕಾರ್ಕಳ ವಲಯದ ಅನೇಕ ಕಲಾವಿದರು ಹಾಗೂ ವಿಶೇಷವಾಗಿ ಯೇಸುವಿನ ಪಾತ್ರವನ್ನು ನಿರ್ವಹಿಸಿದಂತಹ ಶ್ರೀ ದೀಪಕ್ ಡಿಮೆಲ್ಲೊ ಈ ನೈಜ್ಯ ಶಿಲುಬೆ ಹಾದಿಯಲ್ಲಿ ಪಾತ್ರಗಳನ್ನು ಮಾಡುವ ಮೂಲಕ ಯೇಸು ಸ್ವಾಮಿ ಶಿಲುಬೆ ಹಾದಿಯಲ್ಲಿ ಪಡೆದಂತಹ ಕಷ್ಟಗಳನ್ನು ನೈಜವಾಗಿ ತೋರ್ಪಡಿಸಿದರು.
ಬಸಿಲಿಕಾದಾ ರೆಕ್ಟರ್ ವಂ|ಆಲ್ಬನ್ ಡಿಸೋಜಾ, ಸಹಾಯಕ ಧರ್ಮ ಗುರುಗಳಾದ ವO ಲ್ಯಾರಿ ಪಿಂಟೊ, ಆಧ್ಯಾತ್ಮಿಕ ಗುರುಗಳಾದ ವಾO ರೋಮನ್ ಮಾಸ್ಕರೆನ್ಹಸ್ ಹಾಗೂ ಅಪಾರ ಭಕ್ತಾಧಿಗಳು ಪಾಲ್ಗೊಂಡರು.
ಶಿಲುಬೆ ಹಾದಿಯನು ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಂತೋಷ್ ಡಿಸಿಲ್ವಾ, ಪಾಲನ ಮಂಡಳಿಯ ಕಾರ್ಯದರ್ಶಿಯಾದ ಶ್ರೀರೋನಾಲ್ಡ್ ನರೊನ್ಹಾ, ವಂದೀಶ್ ಮಥಾಯಸ್ ರೋಷನ್ ಸಲೇಸ್.ಹಾಗೂ ಜೊಯೆಲ್ ಅತ್ತೂರು,ಪಾಲನಾ ಮಂಡಳಿ ಅತ್ತೂರ್ ಐಸಿವೈಎಂ ಸಂಘಟನೆ ಅತ್ತೂರು. ಅಚ್ಚುಕಟ್ಟಾಗಿ ಆಯೋಜಿಸಿದರು.
ಕೆನಡಾದಲ್ಲಿ ಬಹುಕೋಟಿ ಡಾಲರ್ ಮೌಲ್ಯದ ಚಿನ್ನ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ವ್ಯಕ್ತಿಯನ್ನು ಟೊರೊಂಟೋ ವಿಮಾನ ನಿಲ್ದಾಣದಲ್ಲಿ ಅರೆಸ್ಟ್…
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದೆ. ಈ ವರ್ಷದ ತೇರ್ಗಡೆ ಪ್ರಮಾಣ…
ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನಲ್ಲಿರುವ ಪವಾಡ ಪುರುಷ ಶ್ರೀ ಮಲೆ ಮಹದೇಶ್ವರನಿಗೆ ಬೆಂಗಳೂರಿನ ನಾಗಮಣಿ.ಎಂ ಮತ್ತು ಕುಟುಂಬ 01 ಕೆಜಿ…
ಬೈಕ್ ಸ್ಫೋಟಗೊಂಡು ಸುಮಾರು ಹತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ಭೀಕರ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ಭಯಾನಕ ಘಟನೆ…
ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ವೇಳೆ ಗುಂಡ್ಲುಪೇಟೆ ಪೊಲೀಸರು ದಾಳಿ 2 ಕೆ.ಜಿ ಗಾಂಜಾ ಸಮೇತ ಇಬ್ಬರು ಆರೋಪಿಗಳನ್ನು…