ಬೈಂದೂರು: ಇಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಉಡುಪಿ ತಾಲೂಕಿನ ಬೈಂದೂರು ವಿಧಾನಸಭಾ ವ್ಯಾಪ್ತಿಯ ತ್ರಾಸಿ ಗ್ರಾಮ ಪಂಚಾಯತ್ ಭಾಗದ ಕಲ್ಯಾಣಿ ಶಾಲೆಯ ಮತ ಕಟ್ಟೆಯ ಬೂತಿನಲ್ಲಿ ಗಾಂಧೀಜಿಯವರ ರೂಪವನ್ನೇ ಹೋಲುವ (ತದ್ರೂಪಿ) ಗಾಂಧೀಜಿ ಮತಕಟ್ಟೆಯಲ್ಲಿ ಸರತಿ ಸಾಲಿನಲ್ಲಿ ಬಂದು ಮತದಾನ ಮಾಡಿದರು.
ಗಾಂಧೀಜಿಯವರನ್ನೆ ಹೋಲುವ ಶ್ರೀಯುತರು ತ್ರಾಸಿ ನಿವಾಸಿ ಅಗಸ್ಟಿನ್ ಡಿ.ಅಲ್ಮೇಡಾ ಇವರು ಈಗ ವಾಸವಾಗಿರುವುದು ಉಡುಪಿ ಪಕ್ಕದ ತೊಟ್ಟಂ ನಲ್ಲಿ, ಕ್ರೈಸ್ತ ಸಮಾಜದಲ್ಲಿ ಹುಟ್ಟಿದರು ಕೂಡ ಮೋದಿಜಿ ಅವರ ಅಪ್ಪಟ ಅಭಿಮಾನಿ.
ಗಾಂಧಿಯವರ ತದ್ರೂಪಿಯವರು ಮತಕಟ್ಟೆಗೆ ಆಗಮಿಸುತ್ತಿದ್ದಂತೆ ಅಕ್ಕ ಪಕ್ಕದಲ್ಲಿ ನಿಂತಿರುವರು ವ್ಯಕ್ತಿಯನ್ನು ನೋಡಿ ಒಂದು ಸಲ ದಿಗ್ಭ್ರಮೆಯಾದರು ತಮ್ಮ ಕಣ್ಣುಗಳನ್ನು ತಾವೇ ನಂಬದ ಹಾಗೆ ಗಾಂಧಿ ಅಜ್ಜನನ್ನು ನೋಡುತ್ತಾ ನೆಟ್ಟಿಗರು ನಿಂತು ಬಿಟ್ಟರು.