ಅಜ್ಜರಕಾಡು: ಕಾರ್ಮಿಕ ದಿನದ ಅಂಗವಾಗಿ ಸಿಐಟಿಯು ನೇತೃತ್ವದಲ್ಲಿ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಬಳಿಕ ಬಹಿರಂಗ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೆಸಿಟಿಯುನ ಜಿಲ್ಲಾ ಸಂಚಾಲಕ ಕೆ.ಶಂಕರ್ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರಕಾರಗಳು ಕಾರ್ಮಿಕರು ಹಾಗೂ ದುಡಿಯುವ ವರ್ಗಗಳ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬಂಡವಾಳ ಶಾಹಿಗಳ ಪರವಾಗಿ ಕಾಯ್ದೆ, ಕಾನೂನುಗಳಿಗೆ ತಿದ್ದುಪಡಿ ತಂದು ರೈತರು ಹಾಗೂ ಕಾರ್ಮಿಕರಿಗೆ ವಂಚನೆ ಮಾಡುತ್ತೇವೆ ಎಂದು ಆರೋಪಿಸಿದರು.
ಪ್ರಗತಿಪರ ಚಿಂತಕ ಕೆ.ಪಣಿರಾಜ್, ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್, ಎಐಟಿಯುಸಿ ಸಂಘದ ಮುಖಂಡರಾದ ಶಿವನಂದ, ಸಂಜೀವ ಶೇರಿಗಾರ, ಶಶಿಕಲಾ, ಸಿಐಟಿಯು ತಾಲೂಕು ಮುಖಂಡರಾದ ಉಮೇಶ್ ಕುಂದರ್, ನಳಿನಿ, ಮೊಹನ್, ವಿದ್ಯರಾಜ್,ಕಟ್ಟಡ ಸಂಘದ ಜಿಲ್ಲಾ ಅಧ್ಯಕ್ಷ ರಾದ ಶೇಖರ್ ಬಂಗೇರ, ಗಣೇಶ ನಾಯ್ಕ,ವಾಮನ ಪೂಜಾರಿ ,ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಭಾರತಿ,ಗೀತಾ ಬಿಸಿಯೂಟ ಸಂಘದ ಮುಖಂಡರಾದ ಸುನಂದ,ರೂಪ,ರತ್ನ ಹಾಗೂ ಶ್ರೀ ಪತಿ ಆಚಾರ್ಯ, ಅಂಗಾರ,ಬುದ್ಯ,ಡೇರಿಕ್ ರೆಬೆಲ್ಲೋ,ಉಮೇಶ್, ಕವಿತ,ಉಪಸ್ಥಿತರಿದ್ದರು. ಸಿಐಟಿಯು ಉಡುಪಿ ಸಂಚಾಲಕರಾದ ಕವಿರಾಜ್ ಎಸ್ ಸ್ವಾಗತಿಸಿದರು. ವಿಮಾ ನೌಕರರ ಸಂಘದ ಅಧ್ಯಕ್ಷ ಕೆ ವಿಶ್ವನಾಥ ವಂದಿಸಿದರು.
ಸಭೆಗೂ ಮೊದಲು ಸರ್ವಿಸ್ ಬಸ್ ನಿಲ್ದಾಣದಿಂದ ಅಜ್ಜರಕಾಡಿನವರೆಗೆ ಬೃಹತ್ ಜಾಥ ನಡೆಯಿತು. ಜಾಥದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಸರಕಾರದ ಕಾರ್ಮಿಕ ವಿರೋಧಿ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.