News Karnataka Kannada
Sunday, April 28 2024
ಉಡುಪಿ

“ಯಕ್ಷ ರಂಗಾಯಣ” ದ ಪ್ರಪ್ರಥಮ ನಿರ್ದೇಶಕರಾಗಿ ರಂಗ ಮಾಂತ್ರಿಕ ಜೀವನರಾಮ್ ಸುಳ್ಯ ಆಯ್ಕೆ

Jeevan Ram
Photo Credit :

ಕರ್ನಾಟಕ ಸರಕಾರದ ಪ್ರತಿಷ್ಠಿತ “ಯಕ್ಷ ರಂಗಾಯಣ”ದ ನಿರ್ದೇಶಕ ಹುದ್ದೆಗೆ ಜೀವನರಾಮ್ ಸುಳ್ಯರವರು ಆಯ್ಕೆಯಾಗಿದ್ದಾರೆ. ರಂಗಾಯಣ ಕರ್ನಾಟಕ ಸರಕಾರದ ವಿಶಿಷ್ಟ ಯೋಜನೆಯಾಗಿದ್ದು ಉಡುಪಿಯ ಜಿಲ್ಲೆಯ ಕಾರ್ಕಳದಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಆರನೇ ರಂಗಾಯಣವೇ – ಯಕ್ಷ ರಂಗಾಯಣ.

ಜೀವನರಾಮ್, ಸುಳ್ಯದಲ್ಲಿರುವ ತನ್ನ ಮನೆಯನ್ನೇ ರಂಗಮನೆನ್ನಾಗಿಸಿ, ಕಳೆದ ಮೂವತ್ತು ವರ್ಷಗಳಿಂದ ರಂಗ ಭೂಮಿಯಲ್ಲಿ ಹತ್ತು ಹಲವು ಹೊಸತನದ ಪ್ರಯೋಗ ಮಾಡಿ ರಂಗಭೂಮಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಜೀವನರಾಮ್ ಸುಳ್ಯರವರ ಪರಿಶ್ರಮಕ್ಕೆ ಸಂದ ಫಲವಿದು.

ಪ್ರಪ್ರಥಮ ನಿರ್ದೇಶಕರಾದ ಜೀವನರಾಮ್ ಸುಳ್ಯರವರ ಸಮರ್ಥ ನಾಯಕತ್ವದಲ್ಲಿ “ಯಕ್ಷ ರಂಗಾಯಣ” ದಿಂದ ಮಹತ್ವದ ಕಾರ್ಯಗಳಾಗಲಿ – ದಕ್ಷಿಣ ಕನ್ನಡ , ಉಡುಪಿ ಸೇರಿದಂತೆ ಕರ್ನಾಟಕ ಎಲ್ಲಾ ಕಲಾವಿದರಿಗೆ ಅವಕಾಶಗಳ ಲಾಭವಾಗಲಿ ಎಂದು ಜೀವನರಾಮ್ ಅವರಿಗೆ ಕುದ್ರೋಳಿ ಗಣೇಶ್ ಅಭಿನಂದನೆ ಸಲ್ಲಿಸಿದರು.

ನ್ಯೂಸ್ ಕನ್ನಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಜೀವನ್‌ರಾಮ್ ಸುಳ್ಯ, ಯಕ್ಷ ರಂಗಾಯಣ ಕರ್ನಾಟಕಕ್ಕೆ ಮೊದಲ ರಂಗಾಯಣ, ಇದರ ಸ್ಥಾಪಕರಾದಂತಹ ವಿ.ವಿ ಕಾರಂತರು ಕರ್ನಾಟಕದಲ್ಲಿ, ಮೈಸೂರು ರಂಗಾಯಣ, ಶಿವಮೊಗ್ಗ ರಂಗಾಯಣ, ದಾರವಾಢ ರಂಗಾಯಣ, ಗುಲ್ಬರ್ಗ ರಂಗಾಯಣ, ದಾವಣಗೆರೆ ರಂಗಾಯಣ ಈಗ ಕರ್ನಾಟಕದ 6ನೇ ರಂಗಾಯಣವಾಗಿ ಕಾರ್ಕಳದಲ್ಲಿ ಯಕ್ಷ ರಂಗಾಯಣ ಸ್ಥಾಪಣೆಯಾಗಿದೆ. ಇದರ ಮೊದಲ ನಿರ್ದೇಶಕನಾಗಿ ನನಗೆ ಸರ್ಕಾರ ಜವಬ್ದಾರಿ ವಹಿಸಿಕೊಟ್ಟಿರುವುದು ತುಂಬಾನೆ ಖುಷಿ ಇದೆ ಎಂದು ಹೇಳಿದರು.

ಬಹಳ ವಿಶೇಷವಾಗಿ ಯಕ್ಷ ರಂಗಾಯಣಕ್ಕೆ ಸಚಿವರಾದ ಸುನಿಲ್ ಕುಮರ್ ಬೆನ್ನೆಲುಬಾಗಿ ನಿಂತಿದ್ದಾರೆ. ಯಕ್ಷ ರಂಗಾಯಣಕ್ಕೆ ಈಗಾಗಲೇ ಕರ್ನಾಟಕ ಸರ್ಕಾರ ಸುಮಾರು 3ಎಕ್ರೆಗಿಂತಲೂ ಹೆಚ್ಚು ಜಾಗವನನು ಮೀಸಲಿರಿಸಿದ್ದು, ಸಧ್ಯದಲ್ಲೇ ಸ್ಥಾಪನೆ ಮಾಡುವಂತಹ ಕೆಲಸ ಕಾರ್ಕಳದಲ್ಲಿ ನಡೆಯುತ್ತಿದೆ. ನನ್ನ ಜವಬ್ದಾರಿಯನ್ನು ನಿಭಾಯಿಸಲು ಎಲ್ಲರ ಸಹಕಾರ ಸಿಗುತ್ತದೆ ಎಂದು ಭರವಸೆ ಇದೆ ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು