ಗುರುಪುರ: ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ CPI(M) ನ 4ನೇ ಗುರುಪುರ ವಲಯ ಸಮ್ಮೇಳನವು ಇಂದು ಇರುವೈಲು ಕನಡ್ರಕೋಡಿಯಲ್ಲಿ ನಡೆಯಿತು. ಪಕ್ಷದ ಹಿರಿಯ ಮುಖಂಡರಾದ ಹೊನ್ನಯ್ಯ ಅಮೀನ್ ಧ್ವಜಾರೋಹಣ ನೆರವೇರಿಸಿದರು. ಸಮ್ಮೇಳನವನ್ನು ಉದ್ಘಾಟಿಸಿ CPIM ಪಕ್ಷದ ಕಾರ್ಯದರ್ಶಿ ವಸಂತ ಆಚಾರಿ ಮಾತನಾಡುತ್ತಾ, ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿಯು ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿರುವ ಪಕ್ಷವಾಗಿದೆ. ಪ್ರಸ್ತುತ ಅಪಾಯದ ಅಂಚಿನಲ್ಲಿರುವ ಪ್ರಜಾಪ್ರಭುತ್ವವನ್ನು ಕಾಪಾಡಲು ನಾವು ಕಟಿಬದ್ದರಾಗಬೇಕಿದೆ. ಪ್ರಸ್ತುತ ಮೋದಿ ಸರ್ಕಾರ ಬಂದ ನಂತರದಲ್ಲಿ ಕಾರ್ಮಿಕ,ರೈತ ಕಾನೂನುಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಶಾಸಕಾಂಗವು ನ್ಯಾಯಾಂಗದಿಂದ ಪ್ರಬಲಗೊಳ್ಳುತ್ತಿದೆ. ಜನತೆಯ ಸಮಸ್ಯೆಗಳ ರೈತರ ಪ್ರತಿಭಟನೆಗಳ ಮತ್ತು ಸಂವಿಧಾನ ಬದ್ಧವಾಗಿ ಸಂವಿಧಾನದ ಮೂಲ ಧ್ಯೇಯದ ಪರ ನಿಲ್ಲಬೇಕಾದ ನ್ಯಾಯಾಲಯಗಳು ಭ್ರಷ್ಟ ರಾಜಕಾರಣಿಗಳ ಪರ ನಿಂತಿರುವಂತೆ ತೋರುತ್ತಿರುವುದು ಭಾರತೀಯ ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು.
ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ವಾದಿ CPI(M) ನ 4ನೇ ಗುರುಪುರ ವಲಯ ಸಮ್ಮೇಳನ
Photo Credit :
ಸಮ್ಮೇಳನದಲ್ಲಿ CPIM ಪಕ್ಷದ ದಕ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಯು.ಬಿ ಲೋಕಯ್ಯ ಗುರುಪುರ ವಲಯ ಕಾರ್ಯದರ್ಶಿ ಸದಾಶಿವದಾಸ್, ನೋಣಯ್ಯಗೌಡ, ಅಶೋಕ್ ಬಂಗೇರ, ವಸಂತಿ ಕುಪ್ಪೆಪದವು ಉಪಸ್ಥಿತರಿದ್ದರು.
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.