News Karnataka Kannada
Monday, April 29 2024
ಕರಾವಳಿ

ಪುತ್ತೂರು ತಾಲೂಕು ಪಂ. ಕಾರ್ಯನಿರ್ವಹಣಾಧಿಕಾರಿ ವಿರುದ್ಧ ದೌರ್ಜನ್ಯ ಆರೋಪ

Puttr
Photo Credit : News Kannada

ಪುತ್ತೂರು: ಆನಾರೋಗ್ಯ ನಿಮಿತ್ತ ಸರಕಾರಿ ಅಂಗಡಿಗೆ ಕಟ್ಟದ ಬಾಡಿಗೆ ಕಟ್ಟಿಲ್ಲ ಎಂದು ಅಂಗಡಿಯನ್ನು ಏಲಂ ಮಾಡಿ ದೌರ್ಜನ್ಯ ಎಸಗಿದ ಆರೋಪ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾ| ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಕೇಳಿಬಂದಿದೆ.

ಅಂಗಡಿಯಿಂದ ಹೊರ ಹಾಕಲ್ಪಟ್ಟ ಹೇಮಲತಾ ಎನ್ನುವ ಮಹಿಳೆ ಈ ಆರೋಪ ಮಾಡಿದ್ದಾರೆ. ಮಹಿಳೆಯ ಪತಿ ರಾಜ್ ಬಪ್ಪಳಿಗೆ ಎಂಬವರಿಂದ ನ್ಯಾಯಕ್ಕಾಗಿ ಮಾಧ್ಯಮಗಳ ಮೊರೆ ಹೋಗಿದ್ದಾರೆ.

ಹೇಮಲತಾ ಎಂಬುವವರಿಗೆ ಈ ಅಂಗಡಿ ಏಲಂ ಆಗಿತ್ತು. ʼಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ದಾಖಲಾಗಿದ್ದೆ. ಸುಮಾರು 72 ಸಾವಿರ ರೂಪಾಯಿ ಬಾಡಿಗೆ ಬಾಕಿಯಿತ್ತು.
ಆರು ತಿಂಗಳ ಸಮಯಾವಕಾಶ ಕೋರಿ ದ.ಕ. ಜಿಲ್ಲಾ ಪಂಚಾಯತ್ ಸಿಇಒ ಸೇರಿದಂತೆ ಪುತ್ತೂರು ಇ.ಒ ರಿಗೂ ಮನವಿ ಮಾಡಲಾಗಿದೆ. ಆದರೂ ಉದ್ಧೇಶಪೂರ್ವಕವಾಗಿ ಅಂಗಡಿಯನ್ನು ತೆರವುಗೊಳಿಸಲಾಗಿದೆ. ಏಲಂ ಪಡೆಯುವ ಮೊದಲು 1 ಲಕ್ಷ ರೂಪಾಯಿ ಅಡ್ವಾನ್ಸ್ ನೀಡಲಾಗಿದೆ. ಬಾಕಿ ಬಾಡಿಗೆಗಿಂತ ಜಾಸ್ತಿ ಅಡ್ವಾಸ್ ಹಣವಿತ್ತು. ಆದರೂ ಯಾವುದೇ ಸೂಚನೆ ನೀಡದೆ ಅಂಗಡಿಯೊಳಗಿನ ಸಾಮಾಗ್ರಿಗಳನ್ನೂ ಏಲಂ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳನ್ನು ಏಲಂ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಮಹಿಳೆಯ ಪತಿ ರಾಜ್ ಬಪ್ಪಳಿಗೆ ಆರೋಪ ಮಾಡಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು