Categories: ಮಂಗಳೂರು

ಸೈಕಲ್ ಏರಿ ದೇಶ ಪರ್ಯಟನೆ ಮೂಲಕ ಪರಿಸರ ಸಂರಕ್ಷಣೆಯ ಪಾಠ ಮಾಡುತ್ತಿರುವ ಯುವಕ

ಬಂಟ್ವಾಳ:  ಸೈಕಲ್ ಏರಿ ದೇಶ ಪರ್ಯಟನೆ ಮಾಡುವ ಈ ಯುವಕ ಎಲ್ಲರಿಗೂ ಪರಿಸರ ಸಂರಕ್ಷಣೆಯ ಪಾಠ ಮಾಡುತ್ತಿದ್ದಾನೆ.

ಹೌದು ಈತನ ಹೆಸರು ಚೈತನ್ಯ. ಆಂಧ್ರಪ್ರದೇಶದ ನಲ್ಲೂರು ಜಿಲ್ಲೆ ಈತನ ತವರು ಜಿಲ್ಲೆ. ಕಳೆದ 2022 ಡಿ.25 ನಲ್ಲೂರಿನಿಂದ ಯಾತ್ರೆ ಹೊರಟಿರುವ ಈತ ಈವರೆಗೆ  9400 ಕಿಮೀ‌  ಸೈಕಲ್‌ನಲ್ಲೇ ಕ್ರಮಿಸಿದ್ದಾನೆ. ಕಳೆದ‌146 ದಿನಗಳಲ್ಲಿ ಪಾಂಡಿಚೇರಿ, ತಮಿಳುನಾಡು, ಕೇರಳ ಹಾಗೂ ರಾಜ್ಯಗಳನ್ನು ಸಂಪರ್ಕಿಸಿರುವ ಈತ ಒಟ್ಟು 625 ದಿನಗಳ‌ ಕಾಲ ಸೈಕಲ್ ನಲ್ಲಿ ಪಯಣಿಸಿ ಗಿನ್ನೆಸ್ ದಾಖಲೆಯ ಉದ್ದೇಶವನ್ನೂ ಇರಿಸಿಕೊಂಡಿದ್ದಾನೆ. ಪುತ್ತೂರಿನಿಂದ‌ ಮಂಗಳೂರಿಗೆ ಸಾಗುವ ದಾರಿ ಮಧ್ಯೆ ಕಲ್ಲಡ್ಕದಲ್ಲಿ ಪತ್ರಿಕೆಯ ಜೊತೆ ಮಾತನಾಡಿದ ಚೈತನ್ಯ ತನ್ನ ಅನಿಸಿಕೆಗಳನ್ನು ತೆರೆದಿಟ್ಟಿದ್ದಾನೆ.

ಪರಿಸರ ಜಾಗೃತಿಯೇ ಈತನ ಆಶಯ

ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಕುರಿತು ಜಾಗೃತಿ ಮೂಡಿಸುವುದು ತನ್ನ ಮುಖ್ಯ ಧ್ಯೇಯ ಎನ್ನುವ ಈತ ಪ್ಲಾಸ್ಟಿಕ್ ನ ಬಳಕೆ ಕಡಿಮೆ ಮಾಡಬೇಕು, ಬಳಸಿದ ಪ್ಲಾಸ್ಟಿಕನ್ನು ಮತ್ತೆ ಮತ್ತೆ  ಮರುಬಳಕೆ ಮಾಡುವ ಮೂಲಕ‌ ಹೊಸ‌ಪ್ಲಾಸ್ಟಿಕ್ ಉಪಯೋಗವನ್ನು ತಡೆಯಬೇಕು , ಅತಿಯಾದ ಉಷ್ಟಾಂಶವನ್ನು ಕಡಿಮೆ‌ ಮಾಡಲು ಮರಗಿಡಗಳನ್ನು ಬೆಳೆಸಿ ಎನ್ನುವ ಈತ ಪ್ರತೀ ಮನೆಯ ಸುತ್ತಮುತ್ತ ಕನಿಷ್ಟ ನಾಲ್ಕೈದು‌ ಗಿಡಗಳನ್ನು ನೆಟ್ಟು ಮರವಾಗಿಸಬೇಕು ಎನ್ನುತ್ತಾನೆ. ಪ್ಲಾಸ್ಟಿಕ್ ಹಾವಳಿ ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಲು ತನ್ನ ತಂದೆ ಗುರಂ ನರಸಿಂಹಲು ಪ್ರೇರಣೆಯಾಗಿದ್ದಾರೆ ಎನ್ನುವ ಈತ ಡಿ.ಫಾರ್ಮ್  ವಿದ್ಯಾರ್ಜನೆ ಪೂರೈಸಿದ್ದು,  ತಾನೇನಾದರೂ ಸಾಧಿಸಬೇಕು, ತನ್ನ ಸಾಧನೆ ಸಮಾಜಮುಖಿಯಾಗಿರಬೇಕು ಎನ್ನುವ ಛಲ ಹೊಂದಿದ್ದಾನೆ.‌

ಒಟ್ಟು 50 ಸಾವಿರ ಕಿ‌ಮೀ.ದೂರು ಸೈಕಲ್‌ನಲ್ಲೇ ಕ್ರಮಿಸಿ ದೇಶ ಸುತ್ತುವ ಜೊತೆಗೆ ವೈವಿಧ್ಯಮಯ ಸಂಸ್ಕೃತಿಯನ್ನು ತಿಳಿಯುವ ಉದ್ದೇಶವೂ ಈತನದ್ದಾಗಿದ್ದು, ಸೈಕಲ್‌ಯಾತ್ರೆಯ ಮೂಲಕ‌ಭೂಮಿಗೇ ಚೈತನ್ಯ ನೀಡಲು ಹೊರಟ ಚೈತನ್ಯನ ಯಾತ್ರೆ ಯಶಸ್ವಿಯಾಗಲಿ..

Gayathri SG

Recent Posts

13 ವರ್ಷದ ಬಾಲಕಿ ಜೊತೆ 70ರ ವೃದ್ಧ ಮದುವೆ: ತಂದೆ, ವರ ಪೊಲೀಸರ ವಶಕ್ಕೆ

13 ವರ್ಷದ ಬಾಲಕಿಯನ್ನು  70 ವರ್ಷದ ವ್ಯಕ್ತಿ ಮದುವೆಯಾಗಿದ್ದಕ್ಕಾಗಿ ಪೊಲೀಸರು ಬಂಧಿಸಿದ ಘಟನೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ.

25 mins ago

ಪಶ್ಚಿಮ ಬಂಗಾಳದ ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಶಿಕ್ಷಕರ ವಜಾಕ್ಕೆ ತಡೆ ನೀಡಿದ ಸುಪ್ರೀಂ

ಪಶ್ಚಿಮ ಬಂಗಾಳದ ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಕೋಲ್ಕೊತಾ ಹೈಕೋರ್ಟ್‌…

50 mins ago

ಪ್ರಜ್ವಲ್ ನನ್ನು ದೇಶದಿಂದ ಆಚೆ ಬಿಟ್ಟು ನಮ್ಮಂತವರ ಬಂಧನ ಎಂದ ಕೆ. ಕವಿತಾ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಭಾರೀ ಸುದ್ದಿಯಾಗುತ್ತಿದ್ದು, ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಬರೀ ರಾಜ್ಯದಲ್ಲಷ್ಟೇ ಅಲ್ಲ…

1 hour ago

‘ಕಾಂತಾರ’ ಪ್ರೀಕ್ವೆಲ್‌ ಶೂಟಿಂಗ್‌ ಬಗ್ಗೆ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ’ ಪ್ರೀಕ್ವೆಲ್ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಬೈಂದೂರಿನ ಕೆರಾಡಿಯಲ್ಲಿ…

1 hour ago

ಇವಿಎಂಗೆ ಬೆಂಕಿ ಹಚ್ಚಿದ ಯುವಕ: ಪೊಲೀಸರ ವಶಕ್ಕೆ

ನೆರೆಯ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಾಂಗೋಲಾ ತಾಲೂಕಿನ ಬಾಗಲವಾಡಿ ಗ್ರಾಮದಲ್ಲಿ ಯುವಕನೊಬ್ಬ ಇವಿಎಂಗೆ ಬೆಂಕಿ ಹಚ್ಚಿದ್ದಾನೆ.

2 hours ago

100 ವರ್ಷ ತುಂಬಿದ ಅಜ್ಜನಿಗೆ ಹುಟ್ಟುಹಬ್ಬದ ಸಂಭ್ರಮ

೧೦೦ ವರ್ಷ ತುಂಬಿದ ಅಜ್ಜನಿಗೆ ಇಡೀ ಕುಟುಂಬ, ಹಾಗೂ ಗ್ರಾಮದ ವತಿಯಿಂದ ಹುಟ್ಟುಹಬ್ಬದ ಸಂಭ್ರಮ ಆಚರಣೆ ಮಾಡಿದ ವಿಶೇಷ ಕಾರ್ಯಕ್ರಮ…

2 hours ago