Categories: ಮಂಗಳೂರು

ಉಜಿರೆ: ಸಾಹಿತ್ಯ ಸಮ್ಮೇಳನದಲ್ಲಿ 16ಕ್ಕೂ ಅಧಿಕ ಕನ್ನಡ ಪುಸ್ತಕಗಳ ಲೋಕಾರ್ಪಣೆ

ಉಜಿರೆ: ಸಾಹಿತ್ಯವು ಭಾಷೆ ಮತ್ತು ಅಕ್ಷರದ ಸಮ್ಮಿಶ್ರಣ. ಪತ್ರಕರ್ತರು ಮತ್ತು ಸಾಹಿತಿಗಳು ಸಮಾಜದ ಎರಡು ಕಣ್ಣುಗಳಿದ್ದಂತೆ. ಪತ್ರಕರ್ತರ ಗುರುತಿಸುವಿಕೆ ಒಂದು ದಿನಕ್ಕೆ ಮುಗಿದರೂ ಸಾಹಿತಿಗಳ ಗುರುತಿಸುವಿಕೆ ತುಂಬಾ ದಿನ ಇರುತ್ತದೆ ಎಂದು ಅಮರಸುಳ್ಯ ಅಧ್ಯಯನ ಕೇಂದ್ರ ಸುಳ್ಯದ ನಿರ್ದೇಶಕ ಡಾ. ಬಿ. ಪ್ರಭಾಕರ ಶಿಶಿಲ ಹೇಳಿದರು.

ಇಲ್ಲಿನ ಶ್ರೀ ಕೃಷ್ಣಾನುಭವ ಸಭಾಭವನದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ದ.ಕ.  ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೆಯ ದಿನವಾದ ಶನಿವಾರ 16ಕ್ಕೂ ಅಧಿಕ ಕನ್ನಡ ಪುಸ್ತಕಗಳ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಸಾಹಿತ್ಯದೆಡೆಗೆ ಜನರ ಒಲವು ಕಡಿಮೆಯಾಗುತ್ತಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಭಾಷಾ  ಪ್ರಾಧ್ಯಾಪಕರ  ಭಾಗವಹಿಸುವಿಕೆ ಕಡ್ಡಾಯಗೊಳಿಸಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಅವರ ಪತ್ನಿ ಡಾ. ಹೇಮಾವತಿ ವೀ. ಹೆಗ್ಗಡೆಯವರ ಹೆಸರಿನಲ್ಲಿ ಮುಂದಿನ ದಿನಗಳಲ್ಲಿ ಪ್ರಶಸ್ತಿ ಘೋಷಿಸಬೇಕು. ಆ ಮೂಲಕ ಸಾಹಿತಿಗಳನ್ನು ಪ್ರೋತ್ಸಾಹಿಸಬೇಕು ಎಂದರು.

ಮುಖ್ಯ ಅತಿಥಿ, ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, “ಜನರನ್ನು ತಪ್ಪು ದಾರಿಯಲ್ಲಿ ನಡೆಸುವ ಕಾವ್ಯ ಸಾರ್ಥಕವಾಗದು. ಗದ್ಯವೇ ಪದ್ಯದ ನಿಜವಾದ ಕಥಾವಸ್ತು. ಕಟ್ಟುಪಾಡುಗಳನ್ನೊಳಗೊಂಡ ಕಾವ್ಯಗಳು ಮತ್ತೆ ಸೃಷ್ಟಿಯಾಗಲಿ. ಕವಿಗಳಿಂದ ಲೋಕಕ್ಕೆ ಸಂದೇಶವನ್ನು ನೀಡುವಂಥ ಕಾವ್ಯ ಉತ್ಕರ್ಷತೆಯನ್ನು ಕಾಣುವ ಮೂಲಕ ಕರಾವಳಿಯಲ್ಲಿ ಸಾಹಿತ್ಯ ಪ್ರೀತಿ ಹೆಚ್ಚಲಿ” ಎಂದು ಆಶಿಸಿದರು.

ಸುಪ್ರೀತಾ ಚರಣ್ ಪಾಲಪ್ಪೆಯವರ ‘ಭಾವಸಾರ’; ಸುಭಾಷಿಣಿ ಬೆಳ್ತಂಗಡಿಯವರ ‘ಒಲವ ಕನವರಿಕೆ’; ಪ್ರಕಾಶ ಪ್ರಭು ಅವರ ‘ಏಳಿ ರಾಗಗಳೇ’; ದಾ.ನ. ಉಮಣ್ಣನವರ ‘ದೇವರ ಬೇಸಾಯ’; ಪ್ರೊ. ಎನ್.ಜಿ. ಪಟವರ್ಧನ್ ಅವರ ‘ರಾಗಲೀಲೆ’; ಅಶ್ವಿನಿ ಕಿಡಿಬೈಲು ಅವರ  ‘ಸೌಪರ್ಣಿಕಾ’; ಮಂಜುನಾಥ್ ಭಟ್ ಅವರ ‘ಕುಡುಮ ರತ್ನ’ ಮತ್ತು ‘ಲೋಕಾಭಿರಾಮ’; ಕೆ. ಎ.ಯುಂ. ಅನ್ಸಾರಿ ಮೂಡಂಬೈಲು ಅವರ ‘ಚೆಂಡೆ’; ಶ್ರೀಮತಿ ಆಶಾ ಅಡೂರು ಅವರ ‘ಕಾವ್ಯಪ್ರಭ’; ಮಲ್ಲೇಶಯ್ಯ ಹೆಚ್.ಎಂ. ಅವರ ‘ಭಾವಸುಮ’; ಜಯಪ್ರಕಾಶ್ ಪುತ್ತೂರು ಅವರ ‘ಬದುಕಲು ಬಿಡಿ ಪ್ಲೀಸ್’; ಹರ್ಷಿತ್ ಪಿಂಡಿವನ ಅವರ ‘ಮಾತು-ಮಂಥನ’; ಶಕುಂತಲಾ ಭಟ್ ಅವರ ‘ಅರ್ಥ -ಅನರ್ಥ’ ಮತ್ತು ‘ಕಿನ್ನರಿ’; ಶಿಕಾರಿಪುರ ಈಶ್ವರ ಭಟ್ ಅವರ ‘ಮಾನಸ-ಯಾನ’; ಡಾ. ಕೃಷ್ಣಮೂರ್ತಿ ಟಿ. ಅವರ ‘ವಿದ್ಯಾರ್ಥಿ ವಿಜಯಪಥ’; ಚಂದ್ರಶೇಖರ್ ಅಂತರ ಅವರ ‘ಗುಬ್ಬಿಗೂಡು’ ಸೇರಿದಂತೆ ಹಲವು ಕಥಾ ಸಂಕಲನ, ಕವನ ಸಂಕಲನ ಮತ್ತು ಕಾದಂಬರಿಗಳು ಲೋಕಾರ್ಪಣೆಗೊಂಡವು.

ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾಧ್ಯಕ್ಷ ಡಾ. ಎಂ. ಪಿ. ಶ್ರೀನಾಥ್ ಹಾಗೂ ಕೃತಿಗಳ ರಚನಾಕಾರರು ಉಪಸ್ಥಿತರಿದ್ದರು. ಪ್ರಮೋದ್ ಆರ್. ನಾಯಕ್ ಸ್ವಾಗತಿಸಿ, ಗಂಗಾರಾಣಿ ಜೋಶಿ ವಂದಿಸಿದರು. ಬಿ. ಸೋಮಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವರದಿ: ಅಮಿತ ಹೆಬ್ಬಾರ್, ತೇಜಶ್ವಿನಿ ಕಾಂತರಾಜ್
ಚಿತ್ರ: ಶಶಿಧರ ನಾಯ್ಕ್

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರ, ಉಜಿರೆ

 

Ashika S

Recent Posts

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

4 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

4 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

4 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

4 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

6 hours ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

6 hours ago