Categories: ಮಂಗಳೂರು

ಮಂಗಳೂರು: ಎ.ಜೆ. ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಸಹಜ ಉಸಿರಾಟಕ್ಕೆ ಅಪರೂಪದ ಶಸ್ತ್ರಚಿಕಿತ್ಸೆ

ಮಂಗಳೂರು: 24 ದಿನ ಪ್ರಾಯದ ನವಜಾತ ಶಿಶುವನ್ನು ಸ್ತನ್ಯಪಾನ ಮತ್ತು ಉಸಿರಾಟದ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಉಸಿರಾಡಲು ಕಷ್ಟಪಡುತ್ತಾ ಶ್ವಾಸೋಚ್ಛಾಸ ಮಾಡುವಾಗ,ಎದೆ ಹಾಲು ಕುಡಿಯುವಾಗ ಮೈ ನೀಲಿ ವರ್ಣಕ್ಕೆ ತಿರುಗುತ್ತಿತ್ತು. ಪರಿಸ್ಥಿತಿ ಗಂಭೀರವಿದ್ದುದರಿಂದ ನಗರದ ಏಕೈಕ ನವಜಾತ ಶಿಶುಗಳ ಹೃದಯ ತಜ್ಞರಾದ ಪ್ರಸ್ತುತ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಪ್ರೇಮ್ ಆಳ್ವ ಅವರಿಗೆ ಶಿಶುವಿನ ನಿರ್ವಹಣೆ ಮಾಡುವಂತೆ ಕೋರಲಾಯಿತು.

ಅವರು ಇ.ಸಿ.ಜಿ. ಮೂಲಕ ಪರೀಕ್ಷಿಸಿದಾಗ ಶಿಶುವಿನ ಹೃದಯದಿಂದ ಅಶುದ್ಧರಕ್ತವನ್ನು ಶ್ವಾಸಕೋಶಗಳಿಗೆ ಕಳಿಸುವ ಪಲ್ಮನರಿ ರಕ್ತನಾಳಗಳ ಒತ್ತಡ ತೀವ್ರವಾಗಿತ್ತು. ಇಂತಹ ಸ್ಥಿತಿಗೆ ಕಾರಣ ಯಾವುದು ಎಂದು ಕಂಡು ಹಿಡಿಯಲು ನವಜಾತ ಶಿಶು ತಜ್ಞರಾದಡಾ. ಅಶ್ವಿಜ್ ಶ್ರಿಯನ್ ಅವರನ್ನು ಸಂಪರ್ಕಿಸಲಾಯಿತು.

ಸಾಮಾನ್ಯವಾಗಿ ಕಂಡುಬರುವ ತೊಂದರೆಗಳ ಪತ್ತೆಗಾಗಿ ರಕ್ತ ಪರೀಕ್ಷೆ ಎಕ್ಸರೇ ಸಿ.ಟಿ. ಸ್ಕ್ಯಾನ್‌ಗಳನ್ನು ಮಾಡಿದಾಗ ಎಲ್ಲೂ ಖಚಿತ ಕಾರಣ ಸಿಗದಾಯಿತು. ಹಾಗಿದ್ದಲ್ಲಿ ಶ್ವಾಸನಾಳದಲ್ಲಿ ಏನಾದರೂ ಕಟ್ಟಿಕೊಂಡು ಇರಬಹುದೇ, ಆ ಕಾರಣದಿಂದ ಆಮ್ಲಜನಕ ಸಾಕಷ್ಟು ದೊರಕದೆ ಶಿಶುವು ಹೃದಯದ ತೊಂದರೆಗೆ ಒಳಗಾಗಿರ ಬಹುದು ಎಂದು ತಿಳಿಯಲು ಶ್ವಾಸನಾಳದ ಪ್ರತ್ಯೇಕ ಪರೀಕ್ಷೆಗೆ ನಿಗದಿ ಪಡಿಸಲಾಯಿತು.

ನಗರದ ಇ.ಎನ್. ಟಿ ಚಿಕಿತ್ಸಕರಾದ ಡಾಕ್ಟರ್‌ ಗೌತಮ್ ಕುಳಮರ್ವ ಅವರನ್ನು ಶಿಶುವಿನ ಮೂಗಿನಿಂದ ಶ್ವಾಸನಾಳದವರೆಗಿನ ಉಸಿರಾಟದ ದಾರಿಯಲ್ಲಿ ತೊಂದರೆಗಳೇನಾದರೂ ಇವೆಯೇ ಎಂದು ನೋಡಲು ಹಾಗೂ ಸರಿಪಡಿಸಲು ಕೋರಲಾಯಿತು. ಅವರು ನವಜಾತ ಶಿಶುಗಳ ಅತ್ಯಾಧುನಿಕ ವಿಡಿಯೋ ಎಂಡೋಸ್ಕೋಪಿ ಮೂಲಕ ನೋಡಿದಾಗ ನಾಲಿಗೆಯ ಬುಡದ ಶ್ವಾಸನಾಳದ ಪ್ರವೇಶ ದ್ವಾರದಲ್ಲಿಒಂದು ಸಿಸ್ಟ್ (ನರ‍್ಗುಳ್ಳೆ) ಇರುವುದು ಕಂಡುಬಂತು. ಇದನ್ನು ಸ್ಕ್ಯಾನಿಂಗ್‌ ತಜ್ಞರಾದ ಡಾಕ್ಟರ್‌ ಗಣೇಶ್‌ ಕಲ್ಲಕಟ್ಯ ಅವರು ಎಮ್.ಆರ್.ಐ. ಮೂಲಕ ಖಚಿತಪಡಿಸಿದರು.

ಶಿಶುವು ಉಸಿರಾಟಕ್ಕಾಗಿ ಗಾಳಿ ಒಳಕ್ಕೆ ಎಳೆದುಕೊಳ್ಳುವಾಗ ಈ ಸಿಸ್ಟ್ ಶ್ವಾಸನಾಳದ ಬಾಗಿಲಲ್ಲಿ ತಡೆಯುತ್ತಿತ್ತು. ಅಷ್ಟು ಮಾತ್ರವಲ್ಲದೆ ಈ ಗುಳ್ಳೆಯ ಗಾತ್ರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಶಸ್ತ್ರಚಿಕಿತ್ಸೆಯ ಮೂಲಕ ಇದನ್ನು ನಿವಾರಿಸದೆ ಬೇರೆ ಮಾರ್ಗವೇ ಇರಲಿಲ್ಲ. ಆದರೆ ನವಜಾತ ಶಿಶುಗಳ ಶಸ್ತ್ರಚಿಕಿತ್ಸೆ ಯಾವುದೇ ಆಗಿದ್ದರೂ ಬಹಳ ಕಷ್ಟ. ಅದರಲ್ಲಿಯೂ ಉಸಿರಾಟದ ತೊಂದರೆಇರುವ ಶ್ವಾಸನಾಳದಲ್ಲಿ ತಡೆಯುವ ಪ್ರಸಂಗವಂತೂಇನ್ನೂಕಷ್ಟ. ಶಿಶುವು ಬೆಳೆದಾದ ಮೇಲೆ ಮಾಡೋಣವೆಂದು ಕಾಯುವಂತೆಯು  ಇಲ್ಲ. ಇಂತಹ ಇಕ್ಕಟ್ಟಿನ ಪರಿಸ್ಥಿತಿಯನ್ನು ಹೆತ್ತವರಿಗೆ ವಿವರವಾಗಿ ತಿಳಿಸಿ ಅವರ ಸಂಪೂರ್ಣಒಪ್ಪಿಗೆ ಪಡೆದುಕೊಂಡು ಎಲ್ಲರೂ ಪರಸ್ಪರ ಚರ್ಚಿಸಿ ಶಸ್ತ್ರಕ್ರಿಯೆ ನಡೆಸುವ ತೀರ್ಮಾನ ಕೈಗೊಂಡರು.

ಡಾ. ಗೌತಮ್ ಕುಳಮರ್ವ ಅವರು ಅರಿವಳಿಕೆ ತಜ್ಞರಾದ ಡಾ ಗುರುರಾಜ ತಂತ್ರಿಯವರ ಸಹಕಾರದೊಂದಿಗೆ ಎಂಡೋಸ್ಕೋಪಿ ಮೂಲಕ ಶಸ್ತ್ರಚಿಕಿತ್ಸೆ ನಡೆಸಿ ನರ‍್ಗುಳ್ಳೆಯನ್ನು ಯಶಸ್ವಿಯಾಗಿ ಕತ್ತರಿಸಿ ತೆಗೆದರು. ನಂತರ ಎ.ಜೆ. ಆಸ್ಪತ್ರೆಯ ಪೆಥಾಲಜಿಸ್ಟ್ಡಾ. ಸಂಧ್ಯಾ ಇಳಂತೋಡಿ ಅವರು ಈ ಗುಳ್ಳೆ ‘ಥೈರೋಗ್ಲೋಸಲ್ ಸಿಸ್ಟ್’ ಎಂದು ಮೈಕ್ರೋಸ್ಕೋಪಿನ ಪರೀಕ್ಷೆಯಲ್ಲಿ ಖಚಿತ ಪಡಿಸಿದರು.

ಶಿಶು ಗರ್ಭಾಶಯದಲ್ಲಿ ಬೆಳವಣಿಗೆಯ ಹಂತದಲ್ಲಿಇದ್ದಾಗ ಥೈರಾಯ್ಡ್ ಗ್ರಂಥಿಯ ಕೆಲವು ಕೋಶಗಳು ನಾಲಗೆಯ ಬುಡದಲ್ಲಿ ಬಾಕಿಯಾಗಿ ಉಳಿದುಕೊಂಡು ಈ ರೀತಿಯ ಗುಳ್ಳೆ ಉಂಟಾಗುತ್ತದೆ. ಇಂತಹ ಪ್ರಸಂಗಗಳು ಅಪರೂಪ. ಒಮ್ಮೆ ಕತ್ತರಿಸಿ ತೆಗೆದ ನಂತರ ಚೇತರಿಸಿಕೊಂಡ ಶಿಶುವನ್ನು ಒಂದು ವಾರದಲ್ಲಿ ಮನೆಗೆ ಕಳಿಸಲಾಯಿತು.

ಅತ್ಯಂತ ಅಪರೂಪದ ಮತ್ತು ಪ್ರಾಣಾಪಾಯ ಉಂಟು ಮಾಡುವಂತಹ ಕ್ಲಿಷ್ಟಕರವಾದ ಸರ್ಜರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ವೈದ್ಯಕೀಯ ತಂಡವನ್ನುಎ.ಜೆ. ಆಸ್ಪತ್ರೆಯ ಮುಖ್ಯಸ್ಥರಾದಡಾ. ಪ್ರಶಾಂತ್ ಮಾರ್ಲ ಶ್ಲಾಘಿಸಿದರು.

Gayathri SG

Recent Posts

ಅಂಜಲಿ ಹತ್ಯೆ ಪ್ರಕರಣ: ನನ್ನ ಮಗನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ ಎಂದ ಆರೋಪಿ ಗಿರೀಶ್ ತಾಯಿ

ನನ್ನ ಮಗ ಗಿರೀಶ್ ತಪ್ಪು ಮಾಡಿದ್ದಾನೆ. ಅವನಿಗೆ ಕೋರ್ಟ್ ಯಾವ ಶಿಕ್ಷೆ ಬೇಕಾದರು ಕೊಡಲಿ. ಅಂಜಲಿ ಮತ್ತು ಗಿರೀಶ್ ಪರಸ್ಪರ…

15 mins ago

ಸ್ವಾತಿ ಹಲ್ಲೆ ಪ್ರಕರಣ : ಹೊಸ CCTV ಫೂಟೇಜ್ ಬಿಡುಗಡೆ ಮಾಡಿದ ಎಎಪಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರು ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ…

16 mins ago

ಮರಕ್ಕೆ ಕಾರು ಡಿಕ್ಕಿ: ನಾಲ್ವರು ಕಾನೂನು ವಿದ್ಯಾರ್ಥಿಗಳು ಮೃತ್ಯು

ಅತಿ ವೇಗವಾಗಿ ಬಂದ ಕಾರೊಂದು ಭಯಾನಕವಾಗಿ ಇನ್ನೊಂದು ಕಾರಿಗೆ ಡಿಕ್ಕಿಯಾಗಿ ಮತ್ತೆ ಮರಕ್ಕೆ ರಭಸದಿಂದ ಗುದ್ದಿದ್ದರಿಂದ ನಾಲ್ವರು ಕಾನೂನು ವಿದ್ಯಾರ್ಥಿಗಳು…

37 mins ago

ಸಮಸ್ಯೆಗಳ ಆಗರ: ಮೂಲಸೌಕರ್ಯಗಳ ಕೊರತೆಗೆ ಬೇಸತ್ತ ಸಾರ್ವಜನಿಕರು

ಪಟ್ಟಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಸ್ಥಳೀಯ ಆಡಳಿತದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರು ಬೇಸರಗೊಂಡಿದ್ದಾರೆ. ಪಟ್ಟಣದಲ್ಲಿ ಒಟ್ಟು 27 ವಾರ್ಡ್‌ಗಳು…

47 mins ago

ನಾಳೆ ಶ್ರೀ ಅವಿಜ್ಞ ಸಾಯಿಬಾಬಾ ಪ್ರತಿಷ್ಠಾಪನೆ

ತಾಲ್ಲೂಕಿನ ಬಿಳಿಗೆರೆ ಹೋಬಳಿಯ ಸರಗೂರು ಗ್ರಾಮದಲ್ಲಿ ಮೇ.19 ರಂದು ಭಾನುವಾರ ಶ್ರೀ ಅವಿಜ್ಞ ಸಾಯಿ ಕ್ಷೇತ್ರದಲ್ಲಿ ಶ್ರೀ ಅವಿಜ್ಞ ಸಾಯಿಬಾಬಾ…

49 mins ago

ಚಾಮರಾಜನಗರದಲ್ಲಿ ಮುಂದುವರೆದ ಮಳೆ ಆರ್ಭಟ: ವಾಹನ ಸವಾರರ ಪರದಾಟ

ಗಡಿಜಿಲ್ಲೆ ವರುಣಾರ್ಭಟ ಮುಂದುವರೆದಿದ್ದು ಶನಿವಾರ ಮಧ್ಯಾಹ್ನದ ಜಿಲ್ಲಾಕೇಂದ್ರದಲ್ಲಿ ಒಂದೂವರೆ ತಾಸು ಜೋರು ಮಳೆಯಾಯಿತು.

1 hour ago