Categories: ಮಂಗಳೂರು

ನಿಡಿಗಲ್-ಪಜಿರಡ್ಕ ರಸ್ತೆಯಲ್ಲಿ ಕುಸಿತ: ಸಂಪರ್ಕ ಕಡಿತ ಭೀತಿ

ಬೆಳ್ತಂಗಡಿ: ತಾಲೂಕಿನ ನಿಡಿಗಲ್ ನಿಂದ ಪಜಿರಡ್ಕ ಮೂಲಕ ಕನ್ಯಾಡಿಯನ್ನು ಸಂಪರ್ಕಿಸುವ ಕಲ್ಮಂಜ ಗ್ರಾಮದ ಗುಮಟಬೈಲು ಎಂಬಲ್ಲಿ ಕಾಂಕ್ರೀಟ್ ರಸ್ತೆ ಕುಸಿಯುವ ಭೀತಿ ಎದುರಾಗಿದೆ.

ಇಲ್ಲಿನ ಪರಿಸರದ ರಸ್ತೆಯು ಎತ್ತರದಲ್ಲಿದ್ದು ಅದರ ಬುಡ ಭಾಗದ ಮಣ್ಣು ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಸವಕಳಿಗೊಂಡಿದ್ದು ರಸ್ತೆಯಲ್ಲಿ 10 ಅಡಿಗಳಿಗಿಂತ ಅಧಿಕ ಉದ್ದಕ್ಕೆ ಹಾಗೂ ಎರಡು ಅಡಿಯಷ್ಟು ಅಗಲ ಪ್ರದೇಶದಲ್ಲಿ ಕುಸಿದಿದೆ. ಇದರಿಂದ ಅಷ್ಟು ಸ್ಥಳದ ಕಾಂಕ್ರೀಟ್ ಗೆ ಬುಡ ಭಾಗದಲ್ಲಿ ಆಧಾರ ಇಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಮಳೆ ಸುರಿವಾಗ ಈ ರಸ್ತೆಯ ಭಾಗ ಸಂಪೂರ್ಣ ಕುಸಿದು ಬೀಳುವ ಸಾಧ್ಯತೆ ಇದೆ ಪ್ರಸ್ತುತ ಘನವಾಹನಗಳು ಸಂಚರಿಸಿದರು ರಸ್ತೆ ಕುಸಿಯಬಹುದು. ರಸ್ತೆಯ ಇಕ್ಕೆಲಗಳಲ್ಲೂ ಚರಂಡಿ ನಿರ್ಮಿಸಲು ಜಾಗವಿಲ್ಲದ ಕಾರಣ ಇಲ್ಲಿ ಮಳೆ ನೀರು ರಸ್ತೆ ಮೂಲಕವೇ ಹರಿದು ಕುಸಿತ ಉಂಟಾದ ಜಾಗದ ಮೂಲಕವೇ ನೀರು ಮುಂದುವರಿಯುತ್ತದೆ. ಇದು ಹೆಚ್ಚಿನ ಮಣ್ಣಿನ ಸವಕಳಿಗೆ ಕಾರಣವಾಗುತ್ತಿದೆ.

ಪೂರ್ಣ ಕುಸಿದರೆ ಸಮಸ್ಯೆ: ಈಗಾಗಲೇ ಕುಸಿದಿರುವ ರಸ್ತೆ ಜಾಗದಲ್ಲಿ ಲಘು ಪ್ರಮಾಣದ ವಾಹನಗಳು ಸಂಚರಿಸಬಹುದಾಗಿದೆ. ಈ ರಸ್ತೆ ಪೂರ್ಣ ಕುಸಿದರೆ ನಿಡಗಲ್-ಪಜಿರಡ್ಡ ಸಂಪರ್ಕ ಕಡಿಯಲಿದೆ. ಈ ಪರಿಸರದ ನೂರಾರು ಮನೆಗಳಿಗೆ ಈ ರಸ್ತೆಯ ಅನಿವಾರ್ಯತೆ ಇದೆ.

ರಸ್ತೆ ಪೂರ್ಣ ಕುಸಿದರೆ ಇದರಿಂದ ಸಾಕಷ್ಟು ಶಾಲಾ ಮಕ್ಕಳು ಹೈನುಗಾರರು ಸಮಸ್ಯೆಗೊಳಗಾಗಲಿದ್ದಾರೆ. ಒಟ್ಟು ಏಳು ಕಿಮೀ. ವ್ಯಾಪ್ತಿಯ ಬಹು ಬೇಡಿಕೆಯ ಈ ರಸ್ತೆಯ ಈ ಭಾಗದ ಕಾಮಗಾರಿ ಕಳೆದ ಎರಡು ವರ್ಷಗಳ ಹಿಂದೆ ನಡೆಸಲಾಗಿತ್ತು. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತಕ್ಷಣ ಗಮನಹರಿಸಿ ಇಲ್ಲಿ ತ್ವರಿತ ಕಾಮಗಾರಿ ನಡೆಸುವ ಅಗತ್ಯವಿದೆ.

Ashika S

Recent Posts

ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ : ಅದೃಷ್ಟ ತಂದ ಅಶ್ವಿನಿ ಪುನೀತ್ ರಾಜ್​ಕುಮಾರ್ ಎಂಬ ಪೋಸ್ಟ್ ವೈರಲ್‌

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಸೋಲು ಕಂಡಾಗ ಸ್ಯಾಂಡಲ್​ವುಡ್​ ನಟ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಪತ್ನಿ ಅಶ್ವಿನಿಯವರನ್ನು…

4 mins ago

ಮೋದಿ ಪಾತ್ರದಲ್ಲಿ ‘ಬಾಹುಬಲಿ’ ಖ್ಯಾತಿಯ ನಟ ಸತ್ಯರಾಜ್

ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…

11 mins ago

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಸೈಬರ್ ವಂಚನೆ: ಓರ್ವ ವಶಕ್ಕೆ

ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…

23 mins ago

ಯಾರನ್ನು ಬಂಧಿಸಬೇಕೋ ಅವರನೆಲ್ಲಾ ಬಂಧಿಸಿ ಜೈಲಿಗೆ ತಳ್ಳಿ ಎಂದು ಮೋದಿಗೆ ಚಾಲೆಂಜ್‌ ಹಾಕಿದ ಕೇಜ್ರಿವಾಲ್

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…

33 mins ago

ಜುಲೈ 1ರಿಂದ ಮೂರು ಹೊಸ ಕ್ರಿಮಿನಲ್ ಕಾನೂನು ಜಾರಿ

ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…

54 mins ago

ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣ: ಆರೋಪಿ ಬಿಭವ್‌ ಕುಮಾರ್‌ 5 ದಿನ ಕಸ್ಟಡಿಗೆ

ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್‌ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್‌ ಆಗಿರುವ ದಿಲ್ಲಿ ಮುಖ್ಯಮಂತ್ರಿ…

1 hour ago