ಮಂಗಳೂರು: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ನ್ಯೂಸ್ ಕರ್ನಾಟಕ ಮತ್ತು ಮಾಮ್ಸ್ ಆಫ್ ಮಂಗಳೂರು ಜಂಟಿ ಸಹಯೋಗದಲ್ಲಿ ನಡೆಯುತ್ತಿರುವ ವ್ಹಾವ್ ಮಾಮ್ಸ್ ಕಾರ್ಯಕ್ರಮದಂಗವಾಗಿ “ದ ಇಂಡಿಯನ್ ವುಮನ್ ಎಥ್ನಿಕ್ ಫ್ಯಾಶನ್ ಶೋ” ಫಾರ್ ವುಮೆನ್ ಹಾಗೂ ಇನ್ಸ್ಪಾಯರ್ಡ್ ಎಲಿಗೆನ್ಸ್ ಸಾಧಕ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮ ಅದ್ಧೂರಿಯಾಗಿ ಮಾರ್ಚ್ 5ರ ಸಂಜೆ ಪಾಂಡೇಶ್ವರದ ಫಿಜಾ ಬೈ ನೆಕ್ಸಸ್ ಮಾಲ್ನಲ್ಲಿ ನೆರವೇರಿತು.
ಪಾಂಡೇಶ್ವರದಲ್ಲಿ ಫಿಜಾ ಬೈ ನೆಕ್ಸಸ್ ಮಾಲ್ ನಲ್ಲಿ ವ್ಹಾವ್ ಮಾಮ್ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಹಿಳೆಯರಿಗಾಗಿ ಇಂಡಿಯನ್ ವುಮನ್ಎಥ್ನಿಕ್ ಫ್ಯಾಶನ್ ಶೋ” ಫಾರ್ ವುಮೆನ್ ಮತ್ತು ಇನ್ಸ್ಪಾಯರ್ಡ್ ಎಲಿಗೆನ್ಸ್ ಮಹಿಳಾ ಸಾಧಕಿಯರ ಸನ್ಮಾನ ಕಾರ್ಯಕ್ರಮ ನಡೆಯಿತು.
ದ ಇಂಡಿಯನ್ ವುಮನ್ ಎಥ್ನಿಕ್ ಫ್ಯಾಶನ್ ಶೋ ಫಾರ್ ವುಮನ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಅಪ್ಪಟ ಭಾರತೀಯ ಉಡುಗೆ ತೊಡುಗೆಯಲ್ಲಿ ಮಿಂಚುತ್ತಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಂಗಳೂರು ಸಂಚಾರಿ ವಿಭಾಗದ ಎಸಿಪಿ ಗೀತಾ ಕುಲಕರ್ಣಿ ಭಾಗವಹಿಸಿ ಸಾಧಕ ಮಹಿಳೆಯರಾದ ಬಾಲಿನಿ, ವೃಂದಾ ಕೊನ್ನಾರ್, ರಾಧಿಕಾ, ಶ್ರೀಮತಿ ವಿಜಯಲಕ್ಷ್ಮಿ, ಸ್ವರ್ಣಲತಾ ಪೈ (ದುರ್ಗಾ)ರನ್ನು ಸನ್ಮಾನಿಸಿ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದರು.
ದ ಇಂಡಿಯನ್ ವುಮನ್ ಎಥ್ನಿಕ್ ಫ್ಯಾಶನ್ ಶೋ ಫಾರ್ ವುಮನ್ ಕಾರ್ಯಕ್ರಮದಲ್ಲಿ ಮಹಿಳೆಯರ ರ್ಯಾಂಪ್ ವಾಕ್ ಹಾಗೂ ಕ್ವೆಸ್ಚನ್ ರೌಂಡ್ಸ್ ಜನರ ಆಕರ್ಷಣೆಗೆ ಕಾರಣವಾಯಿತು. ತೀರ್ಪುಗಾರರಾಗಿ ಸಚಿತಾ ನಂದಗೋಪಾಲ್, ಸುಷ್ಮಾ ಕಿಶನ್, ಡಾ. ಜೋಸ್ಮಿತಾ ಡಿಸಿಲ್ವಾ ಭಾಗವಹಿಸಿದ್ದರು, ದ ಇಂಡಿಯನ್ ವುಮನ್ ಎಥ್ನಿಕ್ ಫ್ಯಾಶನ್ ಶೋ ಫಾರ್ ವುಮನ್ನ ಸ್ಪರ್ಧಿಗಳಲ್ಲಿ ಪ್ರಥಮ ಬಹುಮಾನವನ್ನು ಜ್ಯೂಡಿಕ್ ಫೆರ್ನಾಂಡಿಸ್ ದ್ವಿತೀಯ ಬಹುಮಾನವನ್ನು ದಿವ್ಯಾ ಪ್ರೀತಮ್ ಪಡೆದುಕೊಂಡರೆ ತೃತೀಯ ಬಹುಮಾನವನ್ನು ವೀಣಾ ಗೆದ್ದುಕೊಂಡಿದ್ದಾರೆ .
ಅರುಣ ಮಸಾಲ ಹಾಗೂ ಚೇತನಾಸ್ ಬ್ಯೂಟಿ ಲಾಂಜ್ ಮತ್ತು ಎಜ್ಯುಕೇಶನ್ ಫೌಂಡೇಶನ್ ಕಾರ್ಯಕ್ರಮ ಸಹ ಪ್ರಾಯೋಜಕತ್ವ ವಹಿಸಿದ್ದರು. ಸ್ವಸ್ಥ ಕುಕ್ ವೇರ್ ಮತ್ತು ರಾಯಲ್ ಬೈ ಮೆಟಲ್ ಮಾರ್ಟ್ ಬಹುಮಾನಗಳ ಪ್ರಾಯೋಜಕರಾಗಿದ್ದರು. ಮೆಟಲ್ ಮಾರ್ಟ್ ಮಾಲೀಕರಾದ ಕೆ ಸುರೇಂದ್ರ ಶೆಣೈ ಚೇತನಾ ಬ್ಯೂಟಿ ಲಾಂಜ್ ಮಾಲಕಿ ಚೇತನಾ ಎಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನ್ಯೂಸ್ ಕರ್ನಾಟಕ ಕ್ವಿಕ್ ಡಿಜಿಟಲ್ನ ಅಡ್ವೈಸರ್ ಎಂಡ್ ಮೆಂಟರ್ ವಲೇರಿಯನ್ ಡಾಲ್ಮೈಡಾ, ಎಕ್ಸಿಕ್ಯೂಟಿವ್ ಮ್ಯಾನೇಜರ್ ಕೆನ್ಯೂಟ್ ಜೀವನ್ ಪಿಂಟೋ, ನ್ಯೂಸ್ ಕರ್ನಾಟಕದ ಮಾರ್ಕೆಟಿಂಗ್ ವಿಭಾಗದ ಆಲ್ಡ್ರಿನ್, ಮತ್ತು ಪ್ರತಿಮಾ, ಲೊಲಾಕ್ಷಿ, ಮಾಮ್ಸ್ ಆಫ್ ಮಂಗಳೂರಿನ ಅಡ್ಮಿನ್ ಪ್ರಥ್ವಿ ಗಣೇಶ್ ಕಾಮತ್, ನಯನಾ, ಮೆಲ್ಬಾ, ಮತ್ತಿತರರು ಉಪಸ್ಥಿತರಿದ್ದರು. ಕುಮಾರಿ ಸೌಮ್ಯಾ ಕೋಟ್ಯಾನ್ ಹಾಗೂ ನಿಖಿಲ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಮಾಮ್ಸ್ ಆಫ್ ಮಂಗಳೂರು ಇವರ ವತಿಯಿಂದ ಮಾಮ್ಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಕಾರ್ಯಕ್ರಮವನ್ನು ಖ್ಯಾತ ನಿರೂಪಕ, ಫ್ಯಾಶನ್ ಮಾಡೆಲ್ ವಿ.ಜೆ ಡಿಕ್ಸನ್ ನಡೆಸಿಕೊಟ್ಟರು.
ಹಿಂದೂ ಯುವಕನ ಜೊತೆ ಮುಸ್ಲಿಂ ಸಮುದಾಯದ ಮಹಿಳೆ ಕುಳಿತಿದಕ್ಕೆ ಅದೇ ಕೋಮಿನ ಯುವಕರ ಗುಂಪೊಂದು ಹಲ್ಲೆ ನಡೆಸಿ, ನೈತಿಕ ಪೊಲೀಸ್…
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀಕನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ದಿನಗಳ ಹಿಂದೆ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ್ದ ಆರೋಪಿಯನ್ನು…
ಸಿಲಿಕಾನ್ ಸಿಟಿಯಲ್ಲಿ ಹುಸಿ ಬಾಂಬ್ ಬೆದರಿಕೆ ಮೇಲ್ ಮುಂದುವರೆದಿದ್ದು, ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಾದ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ…
ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.
ಮಧ್ಯಂತರ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಮೋತಿ ನಗರ ಪ್ರದೇಶದಲ್ಲಿ ಚುನಾವಣಾ…
ರಾಜಕೀಯ ಕೊನೆಗಾಲದಲ್ಲಿ ನನ್ನ ಕೈ ಹಿಡಿದವರು ಎಚ್.ಡಿ.ದೇವೇಗೌಡರು, ಅವರ ಕುಟುಂಬಕ್ಕೆ ದ್ರೋಹ ಮಾಡುವ ಕೆಲಸ ಮಾಡುವುದಿಲ್ಲ ಎಂದು ಶಾಸಕ ಎ.…