ಮಂಗಳೂರು: ಶಕ್ತಿನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನಲ್ಲಿ ವರ್ಷಂಪ್ರತಿ ನಡೆಯುವ ದೀಪಾವಳಿ ಸಹಸ್ರ ದೀಪೋತ್ಸವ ಇದೇ ಅ.24ರಿಂದ 26ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಸಂಭ್ರಮದಿಂದ ಆಚರಿಸಲು ನಿರ್ದರಿಸಲಾಗಿದೆ.
ಅ.24ರಂದು ಪ್ರಾತಃಕಾಲ 5.30ರಿಂದ ವಿಶೇಷ ತೈಲಾಭಿಷೇಕ, ಮದ್ಯಾಹ್ನ 12.30 ಕ್ಕೆ ವಿಶೇಷ ಅಲಂಕಾರ ಪೂಜೆ ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4ರಿಂದ ಮಯೂರಿ ನಾಟ್ಯಾಲಯ ಮಂಗಳೂರು ಇದರ ಗುರುಗಳಾದ ನಾಟ್ಯ ವಿಧುಷಿ ಸುಮಾ ದಾಮೋದರ್ ಇವರ ಶಿಷ್ಯ ವೃಂದದವರಿAದ ‘ಸಂಗೀತ ನೃತ್ಯ ವೈಭವ’ ಜರುಗಲಿದೆ. ಸಂಜೆ 6.30ರಿಂದ ಭಜನಾ ನಾಮಸಂಕೀರ್ತನೆ, 7ಕ್ಕೆ ಸಹಸ್ರ ದೀಪಾಲಂಕಾರ ಹಾಗೂ ದೀಪಾರಾದನೆ ರಾತ್ರಿ 8ಕ್ಕೆ ಶ್ರೀ ಲಕ್ಷ್ಮೀ ಪೂಜೆ ಸಹಿತ ಮಹಾಪೂಜೆ ನೆರವೇರಲಿದೆ.
ಅ25ರಂದು ಪ್ರಾತಃಕಾಲ 5.30 ರಿಂದ ಪವಮಾನಾಭಿಷೇಕ, 8ಕ್ಕೆ ಭಜನಾ ನಾಮಸಂಕೀರ್ತನೆ ಸೂರ್ಯಗ್ರಹಣ ನಿಮಿತ್ತ ಅಂದಿನ ಮದ್ಯಾಹ್ನದ ಪೂಜೆ 11ಕ್ಕೆ ನಡೆಯಲಿದೆ ಗ್ರಹಣದ ಮೋಕ್ಷ ಕಾಲ 6.28ರ ನಂತರ ಶುದ್ಧಿ ಕಾರ್ಯಗಳಾಗಿ ಸಹಸ್ರ ದೀಪಾಲಂಕಾರ ದೀಪಾರಾದನೆ ನಡೆಯಲಿದೆ, ಸಂಜೆ7 ರಿಂದ 9ರ ವರೆಗೆ ಶಕ್ತಿ ವಸತಿ ಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ರಾತ್ರಿ 9ಕ್ಕೆ ವಿಶೇಷ ಕಾರ್ತಿಕ ಪೂಜೆಯೊಂದಿಗೆ ಮಹಾಪೂಜೆ ನಡೆಯಲಿದೆ.
ಅ.26ರಂದು ಪ್ರಾತಃಕಾಲ 5.30 ರಿಂದ ಪಂಚಾಮೃತಾಬಿಷೇಕ, ವಿಶೇಷ ಸೀಯಾಳಾಬಿಷೇಕ, ಮದ್ಯಾಹ್ನ 12.30 ಕ್ಕೆ ವಿಶೇಷ ಅಲಂಕಾರ ಪೂಜೆ ನೆಡೆಯಲಿದೆ. ಸಂಜೆ 4ರಿಂದ 5.15 ರ ತನಕ ಶ್ರೀ ಶಾರದಾ ನಾಟ್ಯಾಲಯ ಕುಳಾಯಿ ಸಂಸ್ಥೆಯ ವಿಧುಷಿ ಶ್ರೀಮತಿ ಭಾರತಿ ಸುರೇಶ್ ಇವರ ವಿದ್ಯಾರ್ಥಿಗಳಿಂದ ನೃತ್ಯ ವೈಭವ ಜರುಗಲಿದೆ. 5.15 ರಿಂದ 6ರವರೆಗೆ ವಿಧುಷಿ ಶ್ರೀಮತಿ ಪ್ರಣತಿ ಸತೀಶ್ ಹಾಗೂ ಶಿಷ್ಯೆಯರಾದ ಕುಮಾರಿ. ಸಂಹಿತ.ಕೆ ಮತ್ತು ದಿಯಾ ಆಳ್ವರಿಂದ ‘ನೂಪುರ ನಾದ’ ನೃತ್ಯ ಕಾರ್ಯಕ್ರಮವಿದೆ ರಾತ್ರಿ. 7ಕ್ಕೆ ಸಹಸ್ರ ದೀಪಾಲಂಕಾರ, ದೀಪಾರಾದನೆ, ಗೋಪೂಜೆ ಜರುಗಲಿದೆ ರಾತ್ರಿ 8ಕ್ಕೆ ಮಹಾಸೇವೆ ರಂಗಪೂಜೆ, ತುಳಸೀಪೂಜೆ, ತುಳಸೀ ನಾಮಸಂಕೀರ್ತನೆ ಹಾಗೂ ಪ್ರಸಾದ ವಿತರಣೆ ಸಂಪನ್ನಗೊಳ್ಳಲಿದೆ.
ಅ.26ರಿಂದ ನ.5ರ ವರೆಗೆ ನಿತ್ಯ ಮಹಾಪೂಜೆಯ ಬಳಿಕ ತುಳಸೀ ನಾಮ ಸಂಕೀರ್ತನೆ ಜರುಗಲಿದೆ ಇವಲ್ಲದರೋಂದಿಗೆ ಶ್ರೀ ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿರುವ ನಿರಂತರ ಭಜನಾ ನಾಮಸಂಕೀರ್ತನೆ ಒಂದು ಸಂವತ್ಸರ ಪೂರ್ಣಗೊಳ್ಳಲ್ಲಿದೆ ಈ ಎಲ್ಲಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಶ್ರೀ ಗೋಪಾಲಕೃಷ್ಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಆಡಳಿತ ಮಂಡಳಿ ವಿನಂತಿಸಿದೆ.
ಕನ್ನಡದ ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾ ರಮಣ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದ ನಟಿ ಪವಿತ್ರ ಜಯರಾಂ ಅವರು ನಿಧನರಾಗಿದ್ದಾರೆ.
ಹಣಕ್ಕಾಗಿ ಬೇಡಿಕೆ ಇಟ್ಟು ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯ ಬಟ್ಟೆ ಬಿಚ್ಚಿಸಿ, ಬೆತ್ತಲೆ ಮಾಡಿ ಘನಘೋರವಾಗಿ ಚಿತ್ರಹಿಂಸೆ ನೀಡಿರುವ ಘಟನೆ…
ಹೆಚ್ಡಿ ರೇವಣ್ಣರಂತೆ ಮಾಜಿ ಸಿಎಂ ಹೆಚ್ಡಿಕೆ ಜೈಲಿಗೆ ಹೋಗುವ ಕಾಲ ಹತ್ತಿರದಲ್ಲಿದೆ. ಅವರ ವಿರುದ್ಧವೂ ಮಹಿಳೆಯರು ದೂರು ಕೊಡುತ್ತಾರೆ. ಅವರು…
ವಿದ್ಯುತ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪಾಕ್ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನ ಹಲವು ಪ್ರದೇಶಗಳಲ್ಲಿ…
ವಾಯುವ್ಯ ದೆಹಲಿಯ ಭಾರತ್ ನಗರ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯದ ವೇಳೆ ತನ್ನ ಸಹೋದರ ಮತ್ತು ಇತರ ಆಟಗಾರರ ನಡುವಿನ ಜಗಳದಲ್ಲಿ…
ಬೀದರ್ನ ಬಸವಕಲ್ಯಾಣದಲ್ಲಿ ಮತ್ತೊಂದು ನೈತಿಕ ಪೊಲೀಸ್ಗಿರಿ ನಡೆದಿದೆ. ಬಸವಕಲ್ಯಾಣದ ಹೊರವಲಯದ ಪಾರ್ಕ್ನಲ್ಲಿ ಹಿಂದೂ ಧರ್ಮೀಯ ವ್ಯಕ್ತಿ ಜೊತೆ ಕುಳಿತಿದ್ದಕ್ಕೆ ಮುಸ್ಲಿಂ…