ಮಂಗಳೂರು: ಗುರುಪುರದ ಮಳಲಿ ಜುಮ್ಮಾ ಮಸೀದಿಯ ಕುರಿತು ವಿವಾದಕ್ಕೆ ಸಂಬಂಧಿಸಿ ಮಂಗಳೂರಿನ ಸಿವಿಲ್ ಕೋರ್ಟ್ ಮತ್ತೆ ತೀರ್ಪು ಮುಂದೂಡಿದೆ ನವೆಂಬರ್ 9ಕ್ಕೆ ತೀರ್ಪು ನೀಡುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.
ಮಸೀದಿ ಕುರಿತ ವ್ಯಾಜ್ಯಕ್ಕೆ ಸಂಬಂಧಿಸಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ಅಕ್ಟೋಬರ್ 17ರಂದು ತೀರ್ಪು ನೀಡುವ ಬಗ್ಗೆ ದಿನ ನಿಗದಿ ಮಾಡಿತ್ತು ಹಾಗಾಗಿ ತೀರ್ಪಿನ ಬಗ್ಗೆ ಕುತೂಹಲ ಮನೆ ಮಾಡಿತ್ತು. ಆದರೆ ಇದೀಗ ಈ ತೀರ್ಪನ್ನು ನ್ಯಾಯಾಧೀಶರು ತೀರ್ಪನ್ನು ಮೂರನೇ ಬಾರಿಗೆ ಮುಂದೂಡಿ ಕುತೂಹಲ ಹೆಚ್ಚಿಸಿದ್ದಾರೆ.
ಮಸೀದಿಯ ನವೀಕರಣ ಕಾಮಗಾರಿಗೆ ವಿಶ್ವ ಹಿಂದೂ ಪರಿಷತ್ ಮುಖಂಡರು ನ್ಯಾಯಾಲಯದ ಮೂಲಕ ತಡೆಯಾಜ್ಞೆ ಹೇರಿದ್ದರು ಆ ಬಳಿಕ ಜ್ಞಾನವ್ಯಾಪಿ ರೀತಿಯಲ್ಲಿ ಕೋರ್ಟ್ ಕಮಿಷನ್ ಮೂಲಕ ಮಸೀದಿಯಲ್ಲಿ ಸರ್ವೆ ನಡೆಸಲು ಅವಕಾಶ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ಇದಲ್ಲದೆ ಮಸೀದಿ ಮತ್ತು ವಿಎಚ್ಪಿ ಎರಡೂ ಕಡೆಯಿಂದ ಏಳೆಂಟು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ನಡುವೆ ಮಸೀದಿಯ ಕಡೆಯ ವಕೀಲ ಎಂ ಪಿ ಶೆಣೈ ಮರಳಿ ಮಸೀದಿ ವಕ್ಫ್ ಆಸ್ತಿಯಾಗಿದ್ದು ಈ ಬಗ್ಗೆ ನಿರ್ಧರಿಸಲು ಸಿವಿಲ್ ನ್ಯಾಯಾಲಯಕ್ಕೆ ಸಾಧ್ಯವಿಲ್ಲ ವಕ್ಫ್ ಟ್ರಿಬುನಲ್ ನಲ್ಲಿಯೇ ವ್ಯಾಜ್ಯ ನಡೆಯಬೇಕು ಎಂದು ಪ್ರತ್ಯೇಕ ಅರ್ಜಿ ಸಲ್ಲಿಸಿ ವಾದಿಸಿದರು .
ಈ ಕುರಿತು ಮತ್ತು ಹಿಂದೂ ಆರಾಧನಾ ಪದ್ಧತಿ ವಿಚಾರದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯ ಸಂಬಂಧ ವಾದ ಪ್ರತಿವಾದ ನಡೆದಿತ್ತು ಇವೆರಡು ಪ್ರಮುಖ ವಿಚಾರದಲ್ಲಿ ಸಿವಿಲ್ ಕೋರ್ಟ್ ತೀರ್ಪು ನೀಡುವ ನಿರೀಕ್ಷೆಯಿತ್ತು ಆದರೆ 9ನವೆಂಬರ್ ಕ್ಕೆ ತೀರ್ಪು ನೀಡುವುದಾಗಿ ನ್ಯಾಯಾಲಯ ಹೇಳಿದೆ.
ವಿಎಚ್ಪಿ ಪರವಾಗಿ ಚಿದಾನಂದ ಕೆದಿಲಾಯ ವಾದಮಾಡುತಿದ್ದು ಮಳಲಿಯದ್ದು ಮಸೀದಿಯಲ್ಲ ಹಿಂದೂ ಆರಾಧನ ಪದ್ಧತಿ ದೇವಸ್ಥಾನ ಆಗಿತ್ತು ಎಂಬ ಬಗ್ಗೆ ವಾದ ಮಂಡಿಸಿದ್ದಾರೆ. ಅಲ್ಲದೆ ಈ ಕುರಿತು ಪ್ರತ್ಯೇಕ ಅರ್ಜಿಗಳನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ.
ಎಲ್ಲಾ ಅರ್ಜಿಗಳು 1ಕಡೆ ಇದ್ದು ಸಿವಿಲ್ ನ್ಯಾಯಾಲಯಕ್ಕೆ ಈ ಕುರಿತು ನಿರ್ಧರಿಸಲು ಬರಲ್ಲ ಎಂಬ ವಾದ ಎತ್ತಿಹಿಡಿದಲ್ಲಿ ಇವೆಲ್ಲ ಅರ್ಜಿಗಳಿಗೆ ಹಿನ್ನೆಡೆಯಾಗುತ್ತದೆ ಹೀಗಾಗಿ ಸಿವಿಲ್ ಕೋರ್ಟ್ ಈ ಕುರಿತು ನೀಡುವ ತೀರ್ಪು ಮಹತ್ವದ್ದಾಗಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ನ ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…
ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…
ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ನಡೆದಿದೆ.
ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…
ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…