ಮಂಗಳೂರು: ನನ್ನ ಕೊಲೆಗೆ ಸಂಚು ರೂಪಿಸಲಾಗಿದೆ, ಸಿಸಿಬಿ ಪೊಲೀಸರೆಂದು ಹೇಳಿ ಕೆಲ ಹಿಂದುಗಳೇ ಬಂದು ನನ್ನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ ಎಂದು ಸ್ವತಃ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಆರೋಪಿಸಿದ್ದಾರೆ.
ಈ ಬಗ್ಗೆ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜೇಶ್ ಪವಿತ್ರನ್ ಅವರು ಮಾಜಿ ಕಾರು ಚಾಲಕ ಸುರತ್ಕಲ್ ಮುಕ್ಕ ನಿವಾಸಿ ಕಿರಣ್ ಮನೆಗೆ ಆಗಸ್ಟ್ 17 ರಂದು ರಾತ್ರಿ 9ಗಂಟೆಗೆ 5ಜನ ಅಪರಿಚಿತರು ಬಂದು ರಾಜೇಶ್ ಪವಿತ್ರನ್ ಅವರ ಚಲನವಲನ ವಹಿವಾಟು ಬಗ್ಗೆ ವಿಚಾರಿಸಿದ್ದಾರೆ.
ಆಗ ನೀವು ಯಾರೆಂದು ಕೇಳಿದಾಗ ನಾವು ಸಿಸಿಬಿ ಪೊಲೀಸರೆಂದು ಹೇಳಿ ಬಂದೂಕು ತೋರಿಸಿ ಯಾರ ಬಳಿಯೂ ಹೇಳದಂತೆ ತಾಕೀತು ಮಾಡಿದ್ದಾರೆ . ಈ ಬಗ್ಗೆ ತಕ್ಷಣ ಪೋಲಿಸ್ ಠಾಣೆ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ ಆ ರಾತ್ರಿ ಕಿರಣ್ ಮನೆಗೆ ಬಂದವರು ಹಿಂದೂಗಳೆಂದು ನನಗೆ ಖಚಿತ ಮಾಹಿತಿ ಬಂದಿದೆ.
ಇದು ನಮಗೆ ನಿಜವಾಗಿ ನೋವಾಗಿದೆ ಬಿಜೆಪಿ ಸರಕಾರದಡಿ ಹಿಂದೂ ನಾಯಕರಿಗೆ ಪ್ರಾಮುಖ್ಯತೆಯಿಲ್ಲ ಮುತಾಲಿಕ್ ಸೇರಿ ಹಲವರಿಗೆ ನೀಡಿದ ಭದ್ರತೆ ಬಿಜೆಪಿ ಹಿಂತೆಗೆದುಕೊಂಡಿದೆ ಎಂದು ಆರೋಪಿಸಿದ ಅವರು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಪೊಲೀಸ್ ಮುಕ್ತ ಸ್ವಾತಂತ್ರ್ಯ ಕೊಡಿ ಎಂದು ಹೇಳಿದ ಅವರು ಎಲ್ಲ ವಾದ ಮೇಲೆ ಶಾಂತಿ ಮಾತುಕತೆ ಬೇಡ ಎಂದು ಹೇಳಿದರು.
ಕೆಎಸ್ಆರ್ಟಿಸಿ ಬಸ್ ನ ಕಿಟಕಿಯಿಂದ ಉಗುಳಲು ಹೋಗಿ ಮಹಿಳೆಯೊಬ್ಬರ ತಲೆ ಸಿಕ್ಕಿಕೊಂಡಿರುವ ಘಟನೆ ನಡೆದಿದೆ.
ಇದೇ ತಿಂಗಳ 18 ರಂದು 92ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಈ ಬಾರಿ ಹುಟ್ಟುಹಬ್ಬ…
ವಾಹನಗಳ ಸಂಚಾರವಿದ್ದರೂ ರಸ್ತೆಬದಿಯಲ್ಲಿ ಜೋಡಿ ಜಿಂಕೆಗಳು ನಾನಾ-ನೀನಾ ಎಂದು ಕುಸ್ತಿ ಮಾಡಿದ ಘಟನೆ ಮೈಸೂರು-ಉಟಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ಬಂಡೀಪುರದ…
ಪ್ರಭಾಸ್ ಮದುವೆ ಬಗ್ಗೆ ಆಗಾಗ್ಗೆ ಸುದ್ದಿ ಹರಡುತ್ತಲೇ ಇರುತ್ತದೆ. ದರಲ್ಲಿಯೂ ನಟಿ ಅನುಷ್ಕಾ ಶೆಟ್ಟಿ ಜೊತೆಗಂತೂ ಪ್ರಭಾಸ್ ಮದುವೆಯೇ ಆಗಬಿಟ್ಟಿದ್ದಾರೆ…
ಅನುಮಾನಾಸ್ಪದ ರೀತಿಯಲ್ಲಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ಮೃತಪಟ್ಟ ಘಟನೆ ಆನೇಕಲ್ ತಾಲೂಕಿನ ಚಂದಾಪುರ ಸಮೀಪ ನಡೆದಿದೆ.
ಆಸ್ತಿ ತೆರಿಗೆ ಕಟ್ಟದ ಹಿನ್ನೆಲೆ ಕಳೆದ ಶುಕ್ರವಾರ ಪ್ರತಿಷ್ಠಿತ ಮಂತ್ರಿಮಾಲ್ ನನ್ನು ಬಂದ್ ಮಾಡಲಾಗಿತ್ತು, ಮಾಲ್ ನ ಬೀಗ ತೆರೆಯುವಂತೆ ಬಿಬಿಎಂಪಿಗೆ…