ಮಂಗಳೂರು: ಇತ್ತೀಚೆಗೆ ಮಂಗಳೂರು ಗೌರವ ಡಾಕ್ಟರೇಟ್ ಪಡೆದ ಗಣ್ಯರಾದ ಡಾ. ಯೇನೆಪೋಯ ಅಬ್ದುಲ್ಲಾ ಕುಂಞ, ಡಾ. ಡಿ. ಹೇಮಾವತಿ ಹೆಗ್ಗಡೆ, ಡಾ. ದೇವದಾಸ್ ಕಾಪಿಕಾಡ್, ಡಾ. ಹರಿಕೃಷ್ಣ ಪುನರೂರು ಅವರುಗಳಿಗೆ ನಾಗರಿಕ ಸನ್ಮಾನ ಸಲ್ಲಿಸುವ ಬಗೆಗಿನ ಆಮಂತ್ರಣ ಪತ್ರ ಬಿಡುಗಡೆ ಇಂದು ನಗರದಲ್ಲಿ ನಡೆಯಿತು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಪೌರ ಸನ್ಮಾನ ಸಮಿತಿ ಸಂಚಾಲಕರಾದ ಐವಾನ್ ಡಿಸೋಜಾ ಮಾತನಾಡಿದರು.
ಗೌರವ ಡಾಕ್ಟರೇಟ್ ಪಡೆದವರು ಈಗಾಗಲೇ ಸಮಾಜದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದವರು. ಈ ಪೌರ ಸನ್ಮಾನವು ಅವರ ಸೇವೋನ್ನತಿ ಬಲಿಯುತ್ತದೆ. ಅಲ್ಲದೆ ಸನ್ಮಾನ ನಡೆಸಿದ ನಮಗೂ ಗೌರವ ತರುವುದಾಗಿದೆ. ಜೊತೆಗೆ ಇಂತಾ ಸಾಧನೆ ಮಾಡಲು ಇತರರಿಗೂ ಇದು ಸ್ಪೂರ್ತಿ ಆಗಲಿದೆ ಎಂದು ಐವಾನ್ ಡಿಸೋಜಾ ಹೇಳಿದರು.
ಜುಲಾಯಿ 7ನೇ ತಾರೀಕಿನ ಮಧ್ಯಾಹ್ನ 3 ಗಂಟೆಗೆ ಮಂಗಳೂರು ಪುರಭವನದಲ್ಲಿ ಕಾರ್ಯಕ್ರಮ ನಡೆಯುತ್ತದೆ. ಹಿರಿಯ ರಾಜಕಾರಣಿ, ಸಾಹಿತಿ ವೀರಪ್ಪ ಮೊಯ್ಲಿ, ನಿಟ್ಟೆ ವಿದ್ಯಾಲಯಗಳ ವಿನಯ ಹೆಗ್ಡೆ, ಮೇಯರ್ ಪ್ರೇಮಾನಂದ ಶೆಟ್ಟಿ, ಯು. ಟಿ. ಖಾದರ್, ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲ್ ಅಲ್ಲದೆ ಸಾಕಷ್ಟು ನಾಯಕರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಡಿಸೋಜಾ ತಿಳಿಸಿದರು.
ನಡುವೆ ಅರವಿಂದ ಬೋಳಾರ್ ತಂಡದ ನಗೆಹಬ್ಬ ಇರುತ್ತದೆ. ಅಲ್ಲದೆ ಸಾಕಷ್ಟು ಗಣ್ಯರು ಇದರಲ್ಲಿ ನೆರೆಯುವರು ಎಂದೂ ಅವರು ಹೇಳಿದರು.ನಾಗೇಶ್, ಜನಾರ್ದನ, ದೇವರಾಜ್, ಮಾರ್ಶಲ್ ಮೊಂತೆರೋ, ಪ್ರದೀಪ್ ಕುಮಾರ್ ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.
ತನ್ನ ಬೆಂಬಲಿಗರ ಪರ ಪೊಲೀಸ್ ಠಾಣೆಯಲ್ಲಿ ಧರಣಿ ನಡೆಸಿದ್ದ ಬಿಜೆಪಿ ಶಾಸಕ ಹರೀಶ್ ಪೂಂಜಾ ಮೇಲೆ ಎಫ್ಐಆರ್ ದಾಖಲಾಗಿದೆ.ಶಾಸಕರು ತನ್ನ…
ಕಾರು ಚಾಲಕನೋರ್ವ ಕುಡಿದು ಅಡ್ಡಾದಿಡ್ಡಿ ಡ್ರೈವಿಂಗ್ ಮಾಡಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಬ್ಯಾಂಕ್ ಖಾತೆಗೆ ಜಮಾ ಮಾಡಲು ಎಂದು ತಂದಿದ್ದ ಹಣವು ಕಳ್ಳತನಕ್ಕೆ ಒಳಗಾದ ಘಟನೆ ಬಸವಕಲ್ಯಾಣದಲ್ಲಿ ನಡೆದಿದೆ. ಬೈಕ್ ನ ಪೆಟ್ರೋಲ್…
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪೂರ್ವ ಅಜೆರ್ಬೈಜಾನ್ ಪ್ರಾಂತ್ಯದಲ್ಲಿಭಾನುವಾರ ಮುಂಜಾನೆ ಅಪಘಾತಕ್ಕೀಡಾಗಿದೆ.
ತಡರಾತ್ರಿ ದುಷ್ಕರ್ಮಿಗಳು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆಗೈದಿರುವ ಘಟನೆ ನಗರದ…
ಬಿಜೆಪಿ ಮತ್ತು ಆರೆಸ್ಸೆಸ್ ಸಂಬಂಧದ ಬಗ್ಗೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಶಿವಸೇನಾ ಯುಬಿಟಿ ಬಣದ…