ಮಂಗಳೂರು

ಮಂಗಳೂರು: ಭಾಷಣ ವೇಳೆ ಆಝಾನ್‌, ಈಶ್ವರಪ್ಪ ಸಿಡಿಮಿಡಿ

ಮಂಗಳೂರು: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಕಾವೂರಿನಲ್ಲಿ ವಿಜಯ ಸಂಕಲ್ಪ ಯಾತ್ರೆ ಯಲ್ಲಿ ಮಾಜಿ ಸಚಿವ ಈಶ್ವರಪ್ಪ ಭಾಗವಹಿಸಿದ್ದು, ಈ ಸಂದರ್ಭ ಭಾಷಣ ವೇಳೆ ಮಸೀದಿಯ ಅಝಾನ್ ಗೆ ಈಶ್ವರಪ್ಪ ಅಸಮಾಧಾನ ವ್ಯಕ್ತಪಡೆಸಿದ್ದಾರೆ.

ಎಲ್ಲಿ ಹೋದ್ರು ಇದೊಂದು ನನಗೆ ತಲೆನೋವು ಎಂದು ಹೇಳಿದರು. ಸುಪ್ರಿಂ ಕೋರ್ಟ್ ಆದೇಶವಿದೆ ಇವತ್ತಲ್ಲಾ ನಾಳೆ ಇದು ನಿಲ್ಲುತ್ತದೆ. ಇದರಲ್ಲಿ ಅನುಮಾನವೇ ಬೇಡ ಎಂದು ತಿಳಿಸಿದರು. ಎಲ್ಲಾ ಧರ್ಮಕ್ಕೂ ಗೌರವ ಕೊಡಿ ಅಂತ ಪ್ರಧಾನಿ ಮೋದಿ ಹೇಳುತ್ತಾರೆ. ಮೈಕ್‌ ಹಾಕಿ ಕೂಗಿದ್ರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ? ನಮ್ಮ ದೇವಸ್ಥಾನ ದಲ್ಲೂ ಪೂಜೆ ಮಾಡುತ್ತೇವೆ ಅಲ್ಲೂ ಶ್ಲೋಕ ಹೇಳ್ತೆವೆ ಭಜನೆ ಮಾಡ್ತೇವೆ. ಅವರಿಗಿಂತ ಜಾಸ್ತಿ ಭಕ್ತಿ ಪ್ರಪಂಚದಲ್ಲಿ ಧರ್ಮವನ್ನು ಉಳಿಸುತ್ತಿರುವಂತ ದೇಶ ಭಾರತ ಮಾತ್ರ. ಮೈಕಲ್ಲಿ ಜೋರಾಗಿ ಕೂಗಿದ್ರೆ ಮಾತ್ರ ಅಲ್ಲನಿಗೆ ಹೇಳಿದ್ರೆ. ಅವನಿಗೆ ಕಿವುಡಾ ಅಂತ ಹೇಳ್ಬೆಕಾಗುತ್ತೆ ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆ ಪರಿಹಾರ ಆಗುತ್ತದೆ. ದೇಶದ ಪ್ರತಿ ಕ್ಷೇತ್ರದಲ್ಲಿ ಅಭಿವೃದ್ದಿ ಆಗುತ್ತಿದೆ.

ಪ್ರಧಾನಿ ಮೋದಿ ಮಂಡ್ಯದಲ್ಲಿ ಬಂದು ಮೈಸೂರು – ಬೆಂಗಳೂರು ವಿಶೇಷ ರಸ್ತೆಯನ್ನ ಉದ್ಘಾಟನೆ ಮಾಡಿದ್ದಾರೆ. 950 0 ಕೋಟಿ ರೂ. ಖರ್ಚು ಮಾಡಿ ರಸ್ತೆ ಮಾಡಿದ್ರೆ. ಖರ್ಗೆ ಮತ್ತು ಸಿದ್ದರಾಮಯ್ಯ ಹೇಳ್ತಾರೆ ಇದು ನಮ್ಮ ಕೂಸು ಅಂತ ಹೇಳುತ್ತಿದ್ದಾರೆ. ಬಿಜೆಪಿ ಸರ್ಕಾರ ಮಾಡಿದ ಪ್ರತಿಯೊಂದು ಅಭಿವೃದ್ಧಿ ಕೆಲಸವನ್ನು ತಾನು ಮಾಡ್ಡಿದ್ದು ಅಂತ ಸಿದ್ದರಾಮಯ್ಯ ಹೇಳ್ತಾನೆ. ನಿಮ್ಮ ಮಕ್ಕಳು ನಿಮ್ಮ ಕೂಸು ಯಾರ್ದೋ ಮಕ್ಕಳು ನಿಮ್ಮ ಕೂಸು ಆಗಕ್ಕೆ ಆಗಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಮೈಸೂರು – ಬೆಂಗಳೂರು ರಸ್ತೆಗೆ ಇವ್ರು ಒಂದ್ ರೂಪಾಯಿ ಹಾಕಿಲ್ಲ. ಯಾಕೆ ಹೀಗೆ ಸುಮ್ಮನೆ ಅಪಪ್ರಚಾರ ಮಾಡುತ್ತೀರಿ.

ಅಪ ಪ್ರಚಾರ ಮಾಡಿ ಮಾಡಿ ಕಾಂಗ್ರೆಸ್ ದೇಶದಲ್ಲಿ ನಿರ್ನಾಮ ಅಗಿದೆ. ಕರ್ನಾಟಕ ದಲ್ಲಿ ಮಾತ್ರ ಕಾಂಗ್ರೆಸ್ ಕುಟು ಕುಟು ಅಂತಿದೆ. ಈ ಚುನಾವಣೆಯಲ್ಲಿ ಅದ್ರದ್ದೂ ಜೀವ ಹೋಗುತ್ತೇ . ಕಾಂಗ್ರೆಸ್ ಕಾರ್ಯಕ್ರಮ ದಲ್ಲಿ ಬರೋರು ಪೇಡ್ ವರ್ಕರ್ಸ್. 500 ರೂಪಾಯಿ ಕೊಟ್ಟು ಕರ್ಕೊಂಡು ಬರ್ರಪ್ಪಾ ಆಂತ ಸ್ಥಿತಿ ಸಿದ್ದರಾಮಯ್ಯ ಅವರದ್ದು. ಸಿದ್ದರಾಮಯ್ಯ ಬಾಯ್ ಬಿಟ್ರೆ ಬರೀ ಸುಳ್ಳು ಮೋಸ.

ಸಿದ್ದರಾಮಯ್ಯ ನ ಯಾರೂ ನಂಬಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಾಯ್ತು. ಬಾದಾಮಿ ಬಿಟ್ಟು ಈಗ ಕೋಲಾರ ಅಂತೆ. ರಾಜ್ಯದ 224 ಕ್ಷೇತ್ರದಲ್ಲಿ ನೀವು ಎಲ್ಲೇ ನಿಂತ್ರು ಈ ಬಾರಿ ಸಿದ್ದರಾಮಯ್ಯ ಸೋಲುತ್ತಾರೆ ಬರೆದು ಕೊಡುತ್ತೇನೆ. ಸಿದ್ದರಾಮಯ್ಯ ಗೆ ರಾಷ್ಟ್ರ ಭಕ್ತರು ಬೇಡ . ಜಿನ್ನಾ ಸಂಸ್ಕೃತಿ ಯ ಜನ ಬೇಕು. ಎಲ್ಲ ಮುಸ್ಲಿಮರು ದೇಶ ದ್ರೋಹಿಗಳೆಂದು ನಾನು ಕರೆಯಲ್ಲ. ಇವ್ರು ಕದ್ದು ಮುಚ್ಚಿ ದೇವಸ್ಥಾನ ಕ್ಕೆ ಹೋಗುತ್ತಾರೆ ಹಣೆಗೆ ಕುಂಕುಮ ಇಡಲ್ಲ ಅಂತ ಹೇಳಿದ್ರು. ಇತ್ತೀಚೆಗೆ ಚುನಾವಣೆ ಬಂದಾಗ ಡಬಲ್ ಕುಂಕುಮ ಹಾಕಲು ಆರಂಭಿಸಿದ್ದಾರೆ.

ಈಗ ಮತ್ತೊಂದು ಹೇಳುತಿದ್ದಾರೆ ನಾನು ಹಿಂದೂ ಗಳ ವಿರುದ್ಧ ಎಂದೂ ಮಾತಾಡಿಲ್ಲ ಅಂತ ಹೇಳುತ್ತಿದ್ದಾರೆ. ಈಗ ನಾನು ಹಿಂದೂ ಆಂತ ಹೇಳುತಿದ್ದಾರೆ . ನಾನು ಹಿಂದು ಅಂತ ಹೇಳಿದ್ರೆ ಬಾಯಲ್ಲಿ ಹುಳಾ ಬೀಳುತ್ತೆ. ರಾಜ್ಯದಲ್ಲಿ ಇವರ ಸರ್ಕಾರ ಇದ್ದಾಗ ಹಿಂದೂ ಯುವಕರ ಕಗ್ಗೊಲೆ ಯಾಯಿತು. ನೀವು ಚಾಮುಂಡೇಶ್ವರಿ ಯಲ್ಲಿ ಸೋತು ಕಾಂಗ್ರೆಸ್ ನಿರ್ನಾಮ ಆಗಲು ಕೊಲೆಯಾದ ಹಿಂದೂ ಯುವಕರ ತಾಯಂದಿರ ಕಣ್ಣಿರಿನ ಶಾಪ ಕಾರಣ ಎಂದರು. ನಾನು ಹಿಂದೂ ಪರ ಎನ್ನುತ್ತೇನೆ. ನೀವು ಮುಸ್ಲಿಮರ ಪರ ಅಂತ ಘೋಷಿಸಿ ನೋಡೋಣ ಎಂದು ಸವಾಲೆಸೆದರು. ಪ್ರಣಾಳಿಕೆಯಲ್ಲಿ ಮುಸ್ಲಿಮರ ರಕ್ಷಣೆ ಮಾಡುತ್ತೇನೆ. ಹಿಂದುಗಳ ಓಟ್‌ ಬೇಡ ಎಂದು ಘೋಷಣೆ ಮಾಡಲಿ ಎಂದು ತಿಳಿಸಿದರು.

Ashika S

Recent Posts

ಮೀನಾ ಹತ್ಯೆ ಪ್ರಕರಣ: ವಿಶೇಷ ನ್ಯಾಯಾಲಯ ತೆರೆಯಲು ಕ್ರಮ

ಬಾಲಕಿಯನ್ನು ಹತ್ಯೆ ಮಾಡಿರುವ ಕೃತ್ಯ ಸಹಿಸಲಾಗುವುದಿಲ್ಲ. ಬಾಲಕಿಯ ಕುಟುಂಬಕ್ಕೆ ನ್ಯಾಯ  ಒದಗಿಸುವ ನಿಟ್ಟಿನಲ್ಲಿ  ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.…

8 mins ago

ಕೇಸೋರಾಮ್ ಇಂಡಸ್ಟ್ರೀಸ್ ಮುಖ್ಯಸ್ಥೆ ಮಂಜುಶ್ರೀ ಖೇತಾನ್ ವಿಧಿವಶ

ಬಿಕೆ ಬಿರ್ಲಾ ಒಡೆತನದ ಕೇಸೋರಾಮ್ ಇಂಡಸ್ಟ್ರೀಸ್ ಸಂಸ್ಥೆಯ ಛೇರ್ಮನ್ ಆಗಿದ್ದ ಮಂಜುಶ್ರೀ ಖೇತಾನ್ ನಿಧನರಾಗಿದ್ದಾರೆ.

10 mins ago

ಡಿವೈಡರ್‌ಗೆ ಡಿಕ್ಕಿ ಹೊಡೆದು ಬೈಕ್‌ ಸವಾರ ಮೃತ್ಯು

ಭೀಕರ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

18 mins ago

ಎಸ್‌ಎಸ್‌ಎಲ್‌ಸಿ ಗ್ರೇಸ್ ಮಾರ್ಕ್ಸ್‌ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ

ಈ ಬಾರಿಯ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಶೇಕಡಾ 20ರಷ್ಟು ಗ್ರೇಸ್‌ ಮಾರ್ಕ್ಸ್ ಕೊಟ್ಟು ವಿದ್ಯಾರ್ಥಿಗಳನ್ನ ಪಾಸ್ ಮಾಡಿದ್ದು…

21 mins ago

ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟ: ಮನೆಯ ವಸ್ತುಗಳು ಬೆಂಕಿಗಾಹುತಿ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನಂದನಗದ್ದಾದಲ್ಲಿ ಮನೆಯಲ್ಲಿ ಅಡುಗೆ ಮಾಡುತಿದ್ದ ವೇಳೆ ಗ್ಯಾಸ್‌ ಸಿಲಿಂಡರ್ ಸ್ಫೋಟಗೊಂಡ ಘಟನೆ ನಡೆದಿದೆ.

29 mins ago

ಪಂದ್ಯದ ವೇಳೆ ಮಳೆ ಬಾರದಂತೆ ಆರ್​ಸಿಬಿ ಆಟಗಾರರಿಂದ ಕೃಷ್ಣ ನಾಮ ಜಪ

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ…

37 mins ago