ಉಜಿರೆ : ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆ ಸಂವಹಿಸುವ ವಿವಿಧ ಬಗೆಯ ಅರ್ಥವಿನ್ಯಾಸಗಳೊಂದಿಗೆ ಅನುಸಂಧಾನ ನಡೆಸುವ ಸಾಮರ್ಥ್ಯ ರೂಢಿಸಿಕೊಳ್ಳಬೇಕು ಎಂದು ವಿಮರ್ಶಕ ಪ್ರೊ. ಟಿ.ಪಿ.ಅಶೋಕ ಅಭಿಪ್ರಾಯಪಟ್ಟರು.
ಉಜಿರೆ ಎಸ್. ಡಿ. ಎಂ ಸ್ವಾಯಕ್ತ ಮಹಾವಿದ್ಯಾಲಯದಲ್ಲಿ ಕನ್ನಡ ಸಂಘ ಹಾಗೂ ಹೆಗ್ಗೋಡು ನೀನಾಸಂ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿತ ೨೫ನೆ ಸಾಹಿತ್ಯ ಶಿಬಿರ ರಜತ ಸಂಭ್ರಮದ ಕಲಾನುಸಂದಾನ ಶಿಬಿರದ ಮೊದಲನೇ ಗೋಷ್ಟಿ ಕಾವ್ಯಾನುಸಂದಾನದಲ್ಲಿ ಅವರು ಮಾತನಾಡಿದರು.
ಸಾಹಿತ್ಯದಲ್ಲಿ ಬಳಕೆಯಾಗುವ ಭಾಷೆಯ ಅರ್ಥ ಪದಶಃ ರೀತಿಯಲ್ಲಿರುವುದಿಲ್ಲ. ಅರ್ಥವಂತಿಕೆಯ ನಿರೂಪಣೆಯು ಭಾಷೆಯ ನೆರವಿನೊಂದಿಗೆ ನಡೆಯುತ್ತದೆ. ಇಂಥ ಭಾಷಿಕ ಸತ್ವದೊಂದಿಗೆ ಅನುಸಂಧಾನ ನಡೆಸುವುದು ಸುಲಭವಲ್ಲ ಎಂದರು.
ಕಾವ್ಯದಲ್ಲಿ ಶಬ್ದ ಶರೀರವೇ ಅದಕ್ಕೆ ಆಧಾರ. ಒಬ್ಬರಿಗೆ ಒಂದು ಕವಿತೆ ನೀಡುವ ಅನುಭವ ಮತ್ತೊಬ್ಬರಿಗೆ ಅದೇ ಸ್ವಾದ ನೀಡಬೇಕು ಎಂದೇನಿಲ್ಲ. ಸಾಹಿತ್ಯದಲ್ಲಿ ಒಂದು ಪದ, ವಾಕ್ಯಕ್ಕೆ ಅನೇಕ ಅರ್ಥಬಾಹುಳ್ಯ ಇರುತ್ತವೆ. ಕಾವ್ಯಸಹೃದಯತೆ ಎಂಬುದನ್ನು ಅರಿಯಬೇಕಾದರೆ ಕನ್ನಡ ಕವಿ ದಿಗ್ಗಜರ ಕವಿತೆ ಅಧ್ಯಯನ ಮುಖ್ಯ. ನರಸಿಂಹಸ್ವಾಮಿ, ಎ ಕೆ ರಾಮಾನುಜಂ, ವೈದೇಹಿಯವರ ನಾಲ್ಕು ಕಾವ್ಯಗಳನ್ನು ನೆರೆದ ವಿದ್ಯಾರ್ಥಿಗಳ ಎದುರು ಪ್ರಸ್ತುತಪಡಿಸುವ ಮೂಲಕ ಕಾವ್ಯಾವಲೋಕನ ನಡೆಸಿದರು.
ಕವಿತೆ ಎನ್ನುವುದು ಕವಿ ಮತ್ತು ಓದುಗನ ನಡುವಿನ ಅನುಸಂಧಾನ. ಕಾವ್ಯಕ್ಕೆ ಜೀವ ಬರುವುದು ಅದು ಓದುಗನ ಕೈ ಸೇರಿದಾಗ. ಪದ್ಯ ಎಂಬುದು ವಕ್ರೋಕ್ತಿ. ಕವಿತೆಗೆ ಪದವೇ ಪದಾರ್ಥ ಎಂದು ವಿಶ್ಲೇಷಿಸಿದರು.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ನಾಳೆ ಮೇ ಮೂರರಂದು ದಾವಣಗೆರೆಗೆ ಆಗಮಿಸುತ್ತಿದ್ದಾರೆ.
ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅಂದಿನ ಕಾರ್ಮಿಕ ವರ್ಗ ಇಂದು ಮತ್ತೆ ದೇಶವನ್ನು ಉಳಿಸಲು ಸನ್ನದ್ದವಾಗಬೇಕು.ಕಳೆದ 10…
ಪವಾಡ ಪುರುಷ ಮಲೆ ಮಹದೇಶ್ವರ ಕೋಟಿ ಒಡೆಯನಾಗಿ ಮುಂದುವರೆಯುತ್ತಿದ್ದು, ಇದೀಗ 34 ದಿನಗಳ ಅಂತರದಲ್ಲಿ ಮೂರು ಕೋಟಿ ನಾಲ್ಕು ಲಕ್ಷದ…
ಅಶ್ಲೀಲ ವೀಡಿಯೋ ಪ್ರಕರಣ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶದಲ್ಲಿದ್ದು, ಅವರಿಗೆ ಕ್ಲಿಯರೆನ್ಸ್ ಕೊಟ್ಟವರು ಯಾರು ಎಂಬುದರ…
ಉಡುಪಿ ಜಿಲ್ಲೆಯಾದ್ಯಂತ ಸಿ ಎನ್ ಜಿ ಬಂಕ್ ಗಳಲ್ಲಿ ಇಂಧನ ಕೊರತೆಯಿಂದ ರಿಕ್ಷಾ ಚಾಲಕರು ಗಂಟೆಗಟ್ಟಲೆ ಇಂಧನಕ್ಕಾಗಿ ಕಾಯುವ ಸನ್ನಿವೇಶ…
ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ ಮಾಡಿಸಿಕೊಟ್ಟಿರುವುದಕ್ಕಾಗಿ ನೇಹಾ ಹಿರೇಮಠ…