ಮಂಗಳೂರು: ಬಿಜೆಪಿಯವರು ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಬಹಳ ಅವಸರ ಮಾಡುತ್ತಿದ್ದಾರೆ. ಷರತ್ತಿಲ್ಲದೇ ಯೋಜನೆ ಮಾಡಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಗ್ಯಾರಂಟಿಯನ್ನು ಕಸದ ಬುಟ್ಟಿ, ಆಗಲ್ಲ, ವಾರಂಟಿನೇ ಇಲ್ಲ ಅಂತ ಹೇಳಿದ ಬಿಜೆಪಿ ನಾಯಕರು ಈಗ ಜಾರಿಗೆ ತರುತ್ತಾರೆ ಎನ್ನುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆ ಕುರಿತು ಮೊದಲ ಕ್ಯಾಬಿನೆಟ್ ನಲ್ಲೇ ಅನುಮೋದನೆ ಮಾಡಿ ಆದೇಶವಾಗಿದೆ. ಯೋಜನೆ ಜಾರಿಗೆ ಮುನ್ನ ಮನೆಯೊಡತಿ ಯಾರು ಎಂದು ಗುರುತಿಸುವುದು ಬೇಡವೇ ಎಂದು ಪ್ರಶ್ನಿಸಿದರು. ಬಿಜೆಪಿಯವರು ರೈತರಿಗೆ 2 ಸಾವಿರ ರೂ. ನೀಡಿದ್ದರು. ಅದರ ಫಲಾನುಭವಿಗಳ ಗುರುತುಪ್ರಕ್ರಿಯೆ ನಡೆಸಿಲ್ಲವೇ ಎಂದು ಪ್ರಶ್ನಿಸಿದರು. ಇಂತಹ ಪ್ರಶ್ನೆ ಕೇಳಲು ಬಿಜೆಪಿಯವರಿಗೆ ನೈತಿಕತೆ ಇಲ್ಲ. ನೈತಿಕತೆ ಇದ್ದಿದ್ದರೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕಬೇಕಿತ್ತು ಎಂದರು. ಮತ್ತೆ ನೋಟ್ ಬ್ಯಾನ್ ಮಾಡಿದ್ದಾರೆ. ಅದು ಯಾವಕಾರಣಕ್ಕೆ ಎಂಬುದರ ಬಗ್ಗೆ ಉತ್ತರ ಇಲ್ಲ ಎಂದರು.
ಬಿಜೆಪಿಯವರು ಬೊಕ್ಕಸ ಲೂಟಿ ಮಾಡಿದ್ದಾರೆ. ಅದಕ್ಕೆ ಹಣ ಹೊಂದಿಸಬೇಕು, ಯಾವ ರೀತಿಕೊಡಬೇಕು ಎನ್ನುವ ಪ್ರಕ್ರಿಯೆ ಮುಕ್ತಾಯವಾಗಿ ನಂತರ ಜನರ ಕೈಗೆ ಸಿಗಲಿದೆ.
ಎಂಆರ್ಪಿಎಲ್ನಲ್ಲಿ ಹುದ್ದೆಗಳಿಗೆ ನೋಟಿಫಿಕೇಶನ್ ಮಾಡಿದ್ದಾರೆ. ಅದರಲ್ಲಿ ಅನ್ಯಾಯವಾಗಿದೆ. ಆನ್ ಕೈನ್ ಅಪ್ಲಿಕೇಶನ್ ಕೂಡದು. ರಾಜ್ಯದವರಿಗೆ ಅದರಲ್ಲೂ ಜಾಗ ಕಳೆದುಕೊಂಡವರಿಗೆ ನೀಡಬೇಕು. ಡಿಪ್ಲೊಮಾ ಪದವೀದರು ಸಾಕಷ್ಡಿದ್ದಾರೆ. ಜಾಹೀರಾತು ಬದಲಿಸಿ, ಸ್ಥಳೀಯರಿಗೆ ಕೊಡಬೇಕು ಎಂದು ಒತ್ತಾಯಿಸಿದರು. ಸಚಿವೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದರು.
ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ(ಏ.30) ಪ್ರಿಯಾಂಕಾ ಜಾರಕಿಹೊಳಿ…
ಸ್ಯಾಂಡಲ್ವುಡ್ನ ಖ್ಯಾತ ನಟ ಕಾರ್ತಿಕ್ ಜಯರಾಮ್ ಅಲಿಯಾಸ್ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ…
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರಕ್ಕೆ ಬಂದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ವಿಜಯ…
ಕೆಂಡ’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದ್ದೆ. ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ಸಿನಿಮಾ…
ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊರ್ವ ಶಾಸಕನ ವಿಡಿಯೋ ವೈರಲ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಶಾಸಕರದ್ದು ಎನ್ನಲಾದ…