Categories: ಮಂಗಳೂರು

‘ಘಾಟ್ ಸ್ಟೇ’ ಸಂಸ್ಥೆಗೆ ಬೆಸ್ಟ್‌ ಹೋಂ ಸ್ಟೇ ಬುಕಿಂಗ್‌ ಫ್ಲ್ಯಾಟ್‌ ಫಾರ್ಮ್‌ ಪ್ರಶಸ್ತಿ

ಉಜಿರೆ: ಉಜಿರೆ ಎಸ್ ಡಿ ಎಂ ಕಾಲೇಜಿನ ಎಳೆಯ ವಯಸ್ಸಿನಲ್ಲಿಯೇ ಯುವಕ ಸಾಧನೆ ಮಾಡಿ, ಯುವ ಜನತೆಗೆ ಮಾದರಿಯಾಗಿದ್ದಾನೆ. ಹೌದು, ಅತಿ ಸಣ್ಣ ವಯಸ್ಸಿಗೆ ಯುವಕ ‘ ಘಾಟ್ ಸ್ಟೇ ‘ ಸಂಸ್ಥೆ ಸ್ಥಾಪಿಸಿ ಪ್ರತಿಷ್ಟಿತ ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಅವರು ಆಯೋಜಿಸಿದ ಕರ್ನಾಟಕ ಬ್ಯುಸಿನೆಸ್‌ ಅವಾರ್ಡ್‌ 2023ರಲ್ಲಿ ಬೆಸ್ಟ್‌ ಹೋಂ ಸ್ಟೇ ಬುಕಿಂಗ್‌ ಫ್ಲ್ಯಾಟ್‌ ಫಾರ್ಮ್‌ ಪ್ರಶಸ್ತಿ ಬಾಚಿಕೊಂಡಿದ್ದಾನೆ.

ಹೊರನಾಡಿನ ಹೊಸನೆಲದ ಜಯಲೀಲಾ ಮತ್ತು ಮಂಜಪ್ಪ ದಂಪತಿಯ ಮಗ ಸುಜನ್ ಜೈನ್ (19) (sujan Jain) ಘಾಟ್ ಸ್ಟೇ ಸಂಸ್ಥೆ ಸ್ಥಾಪಿಸಿದ್ದು, ಈ ಸಂಸ್ಥೆ ಹೋಂಸ್ಟೇಗಳ ಬುಕಿಂಗ್ ಪ್ಲಾಟ್‍ಫಾರ್ಮ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿಗೆ ನಾಮಿನೇಷನ್ ಪಡೆದಿತ್ತು. ಸದ್ಯ ಯುವ ಪ್ರಜೆ ಸುಜನ್ ಜೈನ್ ಅವರ ಘಾಟ್ ಸ್ಟೇ ಸಂಸ್ಥೆ ಕರ್ನಾಟಕ ಟ್ರೇಡರ್ ಚೇಂಬರ್ ಆಫ್ ಕಾಮರ್ಸ್ ಸಂಸ್ಥೆಯ ಬುಸಿನೆಸ್ ಪುರಸ್ಕಾರ 2023 ಗಳಿಸಿದೆ.

ಬೆಂಗಳೂರಿನ ಇಬಿಸು ಸ್ಟುಡಿಯೊದಲ್ಲಿ (Bengaluru) ಇತ್ತೀಚೆಗೆ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಸುಜನ್ ಜೈನ್ ಪ್ರತಿಷ್ಟಿತ ಘಾಟ್ ಸ್ಟೇ ಬೆಸ್ಟ್‌ ಹೋಂ ಸ್ಟೇ ಬುಕಿಂಗ್‌ ಫ್ಲ್ಯಾಟ್‌ ಫಾರ್ಮ್‌ ಪ್ರಶಸ್ತಿ ಪಡೆದರು.

ಈ ಸಂದರ್ಭದಲ್ಲಿ ಯುವಕನ ತಾಯಿ ಜಯಲೀಲಾ ಅವರೂ ವೇದಿಕೆಯಲ್ಲಿದ್ದು, ಮಗನ ಯಶಸ್ಸು ಕಂಡು ಆನಂದಿಸಿದರು. ಸುಜನ್ ಪ್ರಸ್ತುತ ಉಜಿರೆ ಎಸ್‍ಡಿಎಂ ಕಾಲೇಜಿನಲ್ಲಿ ಬಿ ವೊಕ್ ಪದವಿಯ ಎರಡನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ಅತಿ ಸಣ್ಣ ವಯಸ್ಸಿಗೆ ಯುವಕನ ಈ ಸಾಧನೆ ಯುವ ಜನತೆಗೆ ಮಾದರಿಯಾಗಿದೆ. ಹೆತ್ತವರಿಗೆ ಹೆಮ್ಮೆಯ ವಿಷಯವೂ ಆಗಿದೆ.

ಘಾಟ್‌ ಸ್ಟೇ ಸೈಟ್‌ ಕರ್ನಾಟಕದ ಹಲವು ಹೋಂಸ್ಟೇಗಳೊಂದಿಗೆ ಸಹಯೋಗ ಹೊಂದಿದ್ದು, ಪ್ರವಾಸಿಗರು, ಹೋಂಸ್ಟೇ ಹುಡುಕುತ್ತಿರುವವರಿಗೆ ವಿಶ್ವಾಸಾರ್ಹ ಸಂಸ್ಥೆಯಾಗಿ ಮೂಡಿಬಂದಿದೆ. ಲೈವ್‌ ಲೊಕೋಶನ್‌ ಆಧರಿಸಿ ಪ್ರವಾಸಿಗರು ಹೋಂ ಸ್ಟೇ ತಲುಪುವವರೆಗೂ ಟ್ರಾಕ್‌ ಮಾಡಿ ಸುರಕ್ಷಿತವಾಗಿ ನಿಗದಿತ ತಾಣವನ್ನು ತಲುಪಿರುವುದನ್ನು ಖಾತ್ರಿಪಡಿಸಿಕೊಳ್ಳುತ್ತಾರೆ. ಸಕಲೇಶಪುರ, ದಾಂಡೇಲಿ ಸಹಿತ ಕರ್ನಾಟಕದ ಹಲವು ಪ್ರದೇಶಗಳಲ್ಲಿ ಉತ್ತಮ ಸೇವೆ ಒದಗಿಸುತ್ತಿದೆ. ನನ್ನ ಎಲ್ಲ ಸಾಧನೆಗೆ ನನ್ನ ಕಾಲೇಜಿನ ಉಪನ್ಯಾಸಕರು, ಆಡಳಿತ ಮಂಡಳಿ ಬೆನ್ನೆಲುಬಾಗಿರುವುದು ಹೆಮ್ಮೆಯ ವಿಷಯ.
– ಸುಜನ್ ಜೈನ್ ಬೆಸ್ಟ್‌ ಹೋಂ ಸ್ಟೇ ಬುಕಿಂಗ್‌ ಫ್ಲ್ಯಾಟ್‌ ಫಾರ್ಮ್‌ ಪ್ರಶಸ್ತಿ ವಿಜೇತ

Gayathri SG

Recent Posts

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

13 mins ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

21 mins ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

22 mins ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

36 mins ago

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್; ಪ್ರಮುಖ ಆರೋಪಿ ಬಂಧನಕ್ಕೆ ಪತ್ನಿ ನೂತನ ಸಂತಸ

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಮುಸ್ತಫಾ ಪೈಚಾರನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದು, ಮುಸ್ತಫಾ…

42 mins ago

ಮೊದಲ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನ ಇದೀಗ ಗಡಿಗಳನ್ನು ದಾಟಿ ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ…

55 mins ago