ಮಂಗಳೂರು: ಭಾರತೀಯ ಕಥೊಲಿಕ್ ಯುವ ಸಂಚಲನ (ಐ.ಸಿ.ವೈ.ಎಮ್ )ಕುಪ್ಪೆಪದವು ಘಟಕ ಕ್ರಿಸ್ಮಸ್ ಹಬ್ಬದ ಪ್ರಯುಕ್ತ “ಗ್ಲೋರಿಯ-2023” ಕಾರ್ಯಕ್ರಮ ಡಿ.25ರಂದು ಸಂಜೆ 4:30ಕ್ಕೆ ಆಶಾಕಿರಣ ಚರ್ಚ್ ಸಭಾಭವನದಲ್ಲಿ ಆಯೋಜಿಸಲಾಯಿತು.
ಕುಪ್ಪೆಪದವು ಚರ್ಚ್ ನ ಧರ್ಮಗುರು ಗ್ರೇಶನ್ ಆಲ್ವಾರಿಸ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು. ವಂ.ವಿಲ್ಸನ್ ಸಿಕ್ವೇರಾ, ವಂ.ಮೆಲ್ವಿನ್ ಡಿಸೋಜ, ಚರ್ಚ್ ಪಾಲನಾ ಪರಿಷದ್ ನ ಉಪಾಧ್ಯಕ್ಷರಾದ ಲುವಿಸ್ ಪಿರೇರಾ, ಕಾರ್ಯದರ್ಶಿ ಲೋನಾ ರುಜಾರಿಯೊ, ಬ್ರ. ನೋರ್ಮಾನ್ ಮಥಾಯಸ್ ಸೇರಿ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾರ್ಥನಾ ನೃತ್ಯದಿಂದ ಕಾರ್ಯಕ್ರಮವು ಆರಂಭಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಚರ್ಚಿನ ಧರ್ಮಗುರುಗಳಾದ ವಂ.ಗ್ರೇಶನ್ ಆಲ್ವಾರಿಸ್ ರವರು ಸೇರಿದ ಜನರನ್ನು ಉದ್ದೇಶಿಸಿ ನಾವು ಪ್ರಭು ಕ್ರಿಸ್ತನ ಶಾಂತಿ ಹಾಗೂ ಸೌಹರ್ದತೆಯನ್ನು ಜಗತ್ತಿಗೆ ಸಾರಿ ಎಲ್ಲರೂ ಪ್ರೀತಿಯಿಂದ, ಸಹಬಾಳ್ವೆಯಿಂದ ಇತರಿಗೆ ಸಹಾಯ ಮಾಡುವಂತವರಾಗಬೇಕೆಂದು ತಿಳಿಸಿದರು.
ಅನಂತರದಲ್ಲಿ ಚರ್ಚಿನ ವಿದ್ಯಾರ್ಥಿಗಳಿಂದ, ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಚರ್ಚಿನ ಜನರಿಂದ ನೃತ್ಯ, ಸಂಗೀತ ಹಾಗೂ ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದವರನ್ನು ಐ.ಸಿ.ವೈ.ಎಮ್ ಕುಪ್ಪೆಪದವು ಘಟಕದ ಅಧ್ಯಕ್ಷರಾದ ಜೀತನ್ ಕುಟ್ಹಿನಾ ಸ್ವಾಗತಿಸಿ, ಕಾರ್ಯದರ್ಶಿ ಪ್ರೇಮ್ ರುಜಾರಿಯೋ ಧನ್ಯವಾದ ಸಮರ್ಪನೆಯನ್ನು ಮಾಡಿದರು. ಜೆನಿಶಾ ಪಿಂಟೊ, ಕು.ಜೆನಿಶ್ಯಾ ಸಿಕ್ವೇರಾ ಹಾಗೂ ಪ್ರದೀಪ್ ರುಜಾರಿಯೊ ಕಾರ್ಯಕ್ರಮವನ್ನು ನಿರ್ವಹಿಸಿದರು.
ನಗರದ ಹೊರವಲಯದ ಗುರುಪುರ ಕೈಕಂಬದಲ್ಲಿ ನಿರ್ಮಾಣ ಆಗಲಿರುವ ಮೆಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು .ಕಾಮಗಾರಿ ವಿರುದ್ಧದ ಸ್ಥಳೀಯರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ…
ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಕ್ರೂಸರ್ ವಾಹನ ಪಲ್ಟಿಯಾಗಿ ಮೂವರು ಮಹಿಳೆಯರು ಸಾವನ್ನಪ್ಪಿರುವ ಘಟನೆ ಸಾಂಗೋಲಾ- ಜತ್ತ ಮಾರ್ಗದ ಬಳಿ…
ಪ್ರಜ್ವಲ್ ರೇವಣ್ಣನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೋಸ್ಟರ್ ಅಂಟಿಸಿದ್ದ ಜನತಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ…
ಭಾರತದ ಮುಸ್ಲಿಮರ ಜನಸಂಖ್ಯೆ ತೋರಿಸಲು ಸುವರ್ಣ ನ್ಯೂಸ್ ಪಾಕಿಸ್ತಾನ ಧ್ವಜದ ಗ್ರಾಫಿಕ್ಸ್ ಬಳಸಿದ್ದು, ಭಾರೀ ಜನಾಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ…
ಕಾಂತಾರ ಚಿತ್ರದಲ್ಲಿ ಸಣ್ಣ ಪಾತ್ರ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ನಟ ಸೂಚನ್ ಶೆಟ್ಟಿ ಅವರು ಹೊಸ ಸಾಹಸಕ್ಕೆ…
ತೇರಿನ ಚಕ್ರಕ್ಕೆ ವ್ಯಕ್ತಿಯೋರ್ವ ಸಿಲುಕಿ ಸಾವನ್ನಪ್ಪಿರುವ ಘಟನೆ ಅಣ್ಣಿಗೇರಿ ತಾಲೂಕಿನ ಮಜ್ಜಿಗುಡ್ಡ ಗ್ರಾಮದಲ್ಲಿ ಸಂಭವಿಸಿದೆ.