Categories: ಮಂಗಳೂರು

ಕೆ.ಕೆ.ಎಂ.ಪಿ ಭವನದ ಮೊದಲನೇ ಅಂತಸ್ತಿನ ಉದ್ಘಾಟನೆ ಪ್ರಯುಕ್ತ ಜ.13 ಮತ್ತು 14 ರಂದು ಕ್ರೀಡಾಕೂಟ

ಮಂಗಳೂರು: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸುತ್ತಿರುವ ಮಂಗಳೂರಿನ ಬೊಂದೆಲ್ ಮಹಾತ್ಮನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಕೆ.ಎಂ.ಪಿ ಭವನದ ಮೊದಲನೆ ಅಂತಸ್ತಿನ ಉದ್ಘಾಟನೆ ಜನವರಿ 28ರಂದು ನಡೆಯಲಿದ್ದು, ಈ ಪ್ರಯುಕ್ತ ಪುರುಷರ, ಮಹಿಳೆಯರ ಮತ್ತು ಮಕ್ಕಳ ಕ್ರೀಡಾಕೂಟವನ್ನು ಜ.13 ಮತ್ತು 14ರಂದು ಬೆಳಗ್ಗೆ 9ಗೆ ಪಿ ಡಬ್ಲ್ಯೂ ಡಿ ಮೈದಾನ ಮಹಾನಗರ ಬಡಾವಣೆ, ಬೊಂದೆಲ್ ನಲ್ಲಿ ನಡೆಯಲಿದೆ.

ಈ ಕ್ರೀಡಾಕೂಟದ ಉದ್ಘಾಟನೆಯನ್ನು ಮಂಗಳೂರಿನ ಕೆಕೆ ಎಂಪಿ ಮಾಜಿ ಉಪಾಧ್ಯಕ್ಷರು ಹಾಗೂ ಮೈಸೂರು ಕೆಕೆಎಂಪಿ ಸಂಘಟನಾ ಕಾರ್ಯದರ್ಶಿಯಾಗಿರುವ ದಿವಾಕರ್ ಕೋರೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೆಕೆ ಎಂಪಿ ಜಿಲ್ಲಾಧ್ಯಕ್ಷರು ವಿವಿ ಸುರೇಶ್ ರಾವ್ ಕರ್ ಮೋರೆ ವಹಿಸಿಕೊಳ್ಳಲಿದ್ದಾರೆ.

ಈ ಕ್ರೀಡೆಯ ಟ್ರೋಫಿಯನ್ನು ಮಂಗಳೂರು ಕೆಕೆ ಎಂಪಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಚಂದ್ರಮಾನ್ ಅನಾವರಣ ಮಾಡಲಿದ್ದಾರೆ. ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಮಂಗಳೂರಿನ ಸ್ಕಂದ ಬೋಟ್ ,ವಾಣಿಜ್ಯೋದ್ಯಮಿ ಗಿರೀಶ್ ರಾವ್ ಭೋಂಸ್ಲೆ ಹಾಗೂ ಕಾರ್ಕಳ ಕೆಕೆ ಎಂಪಿ ತಾಲೂಕು ಅಧ್ಯಕ್ಷರು ಕೀರ್ತನ್ ಕುಮಾರ್ ಲಾಡ್ ಮಾಡಲಿದ್ದಾರೆ. ಹಗ್ಗ ಜಗ್ಗಾಟ ಪಂದ್ಯಾಟದ ಉದ್ಘಾಟನೆಯನ್ನ ಮಂಗಳೂರು ಶ್ರೀ ದುರ್ಗಾ ಏಜೆನ್ಸಿ ಮಾಲಕರು ಗಿರಿರಾಜ್ ಎಂ. ಧರೇಕರ್ ಹಾಗೂ ಕಾಸರಗೋಡು, ಜೂಮ್ ಸ್ಟುಡಿಯೋ ಮಾಲಕರು ಹರಿಪ್ರಸಾದ್ ಚೌವ್ಹಾಣ್ ಮಾಡಲಿದ್ದಾರೆ. ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನ ಉದ್ಯಮಿ, ಶ್ರುತಿ ಎಂಟರ್ಪ್ರೈಸಸ್, ಸಂತ ಅಂತೋನಿ ಕಾಲೋನಿ ಅಶೋಕನಗರ, ಮಂಗಳೂರು ಹಾಗೂ ಸುರೇಶ್ ಧರ್ಮರಾಜ್ ಮಾಡಲಿದ್ದಾರೆ.

ವಿವಿಧ ಕ್ರೀಡೆಗಳು

ಗಂಡಸರಿಗೆ ಹಗ್ಗ ಜಗ್ಗಾಟ,
ಹೆಂಗಸರಿಗೆ ಹಗ್ಗ ಜಗ್ಗಾಟ ,
ಗಂಡಸರ ಓವರ್ ಆರ್ಮ್ ಕ್ರಿಕೆಟ್ ,
ಹೆಂಗಸರ ಅಂಡರ್ ಆರ್ಮ್ ಕ್ರಿಕೆಟ್
ಹೆಂಗಸರಿಗೆ ತ್ರೋಬಾಲ್.

ಕ್ರೀಡಾಕೂಟ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9845256560, 9448723213, 9901205339, 9483910672, 8050542958 ಸಂಪರ್ಕಿಸಬಹುದು.

Gayathri SG

Recent Posts

ನೂಕುನುಗ್ಗಲಿನಲ್ಲೂ ಪಾದಯಾತ್ರೆ ಹೊರಟ ಭಕ್ತರು : ವಿಡಿಯೋ ವೈರಲ್‌

ಯಮುನೋತ್ರಿ, ಗಂಗೋತ್ರಿ, ಕೇದರ್‌ನಾಥ್‌ ಮತ್ತು ಬದರಿನಾಥ್‌ ಪವಿತ್ರ ಚಾರ್‌ ಧಾಮ್‌ ಯಾತ್ರೆಯ ಹಿನ್ನಲೆಯಲ್ಲಿ ಅಪಾರ ಪ್ರಮಾಣದ ಭಕ್ತರು ಜಮಾಯಿಸಿದ ಪರಿಣಾಮ…

17 mins ago

ಕೆಂಪು ಲಿಪ್​ ಸ್ಟಿಕ್ ಬಳಕೆ ಮೇಲೆ ನಿಷೇಧ ವಿಧಿಸಿದ ಉತ್ತರ ಕೊರಿಯಾ: ಹಚ್ಚಿದರೆ ಕಠಿಣ ಶಿಕ್ಷೆ!

ಮಹಿಳೆಯರು ತುಟಿಗೆ ಹಚ್ಚುವ ಕೆಂಪು ಲಿಪ್​  ಸ್ಟಿಕ್ ಬಳಕೆಯ ಮೇಲೆ ಉತ್ತರ ಕೊರಿಯಾದಲ್ಲಿ ಕಟ್ಟುನಿಟ್ಟಾದ ನಿಷೇಧ ವಿಧಿಸಿದೆ.

17 mins ago

ಬಸವೇಶ್ವರ ಜಾತ್ರೆ: ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ

ಜಿಲ್ಲೆಯ ಸೊನ್ನ ಗ್ರಾಮದ ಶಿವುಕುಮಾರ ಮಾಸ್ತಾರ ದಂಪತಿಗಳ ಸಹಾಯಾರ್ಥದೊಂದಿಗೆ ಗ್ರಾಮದ ಸುಮಾರು 200 ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ವಿಶ್ವರಾಧ್ಯ…

36 mins ago

ಬಿಜೆಪಿ ಮತ್ತೆ ಗೆದ್ದರೆ ವಿಪಕ್ಷಗಳ ನಾಯಕರು ಜೈಲು ಪಾಲಾಗುತ್ತಾರೆ: ಕೇಜ್ರಿವಾಲ್‌

ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯು ಬಿಜೆಪಿ ಗೆದ್ದರೆ, ಮಮತಾ ಬ್ಯಾನರ್ಜಿ, ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ, ಆರ್‌ಜೆಡಿ ನಾಯಕ ತೇಜಸ್ವಿ…

40 mins ago

ದೆಹಲಿಯಲ್ಲಿ ಬಿರುಗಾಳಿ: ಇಬ್ಬರು ಮೃತ್ಯು, 23 ಮಂದಿಗೆ ಗಾಯ

ಬಿರುಗಾಳಿಗೆ ಇಬ್ಬರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

1 hour ago

ಹೆಚ್ಚಿನ ಫೀಸ್ ತೆಗೆದುಕೊಂಡರೆ ಖಾಸಗಿ ಶಾಲೆಗಳ ವಿರುದ್ಧ ಕ್ರಮ : ಬಂಗಾರಪ್ಪ

ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಪೋಷಕರು ತಮ್ಮ ಮಕ್ಕಳಿಗೆ ಮುಂದಿನ ವಿದ್ಯಾಭ್ಯಸದ ಬಗ್ಗೆ ಈಗಾಗಲೇ ಯೋಚಿಸುತ್ತಿದ್ದಾರೆ

1 hour ago