ಪಡುಬಿದ್ರಿ: ಕಂಬಳದಲ್ಲಿ ಶಿಸ್ತು ಮತ್ತು ಸಮಯಪಾಲನೆಗೆ ಒತ್ತು ನೀಡುವ ಉದ್ದೇಶದಿಂದ ಕಂಬಳದಲ್ಲಿ ಕೋಣಗಳ ಸಾಲು ನಿರ್ಣಯಕ್ಕೆ ಹೊಸ ಆ್ಯಪ್ ಒಂದನ್ನು ಪರಿಚಯಿಸಲಾಗಿದೆ. ಈ ಆ್ಯಪ್ ಬಳಸಿಕೊಂಡು ನ. 11ರಂದು ಬೆಳಗ್ಗೆ 10ರಿಂದ ಮಿಯಾರಿನಲ್ಲಿ ಪ್ರಾಯೋಗಿಕ ಕಂಬಳ ಏರ್ಪಡಿಸಲಾಗಿದೆ ಎಂದು ಉಭಯ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ| ಬೆಳಪು ದೇವಿಪ್ರಸಾದ ಶೆಟ್ಟಿ ತಿಳಿಸಿದ್ದಾರೆ.
ಕಂಬಳದಲ್ಲಿ ಸ್ಪಷ್ಟವಾದ ವೀಡಿಯೋ ಫಿನಿಷ್, ರೋಡ್ ವೇ ಸಿಸ್ಟಂ, ಲೇಸರ್ ತಂತ್ರಜ್ಞಾನವು ಫಲಿತಾಂಶದಲ್ಲಿ ಪಾರದರ್ಶಕತೆ ತರುವಲ್ಲಿ ಯಶಸ್ವಿಯಾಗಿವೆ. ನೂತನ ಆ್ಯಪ್ ಕಂಬಳ ಕೋಣಗಳ ಸರತಿ ಕ್ರಮಬದ್ಧವಾಗಿ ಜೋಡಿಸಲಿದೆ.
ಇನ್ನೊಂದೆಡೆ ಕಂಬಳ ಕರೆಗೆ ಕೋಣಗಳನ್ನು ನಿಗದಿತ ಸಮಯಕ್ಕೆ ಇಳಿಸಲು ಅನುಕೂಲವಾಗುವಂತೆ ಸೈರನ್
ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. ಅನಗತ್ಯ ವಿಳಂಬವಾದರೆ ಸೈರನ್ ಮೂಲಕ ಎಚ್ಚರಿಸ ಲಾಗುತ್ತದೆ. ಕೋಣಕ್ಕೆ ಸಮಯದ ಅವಕಾಶ ನೀಡಿ ಬಾರದಕೋಣಗಳಿಗೆ ವಾಕ್ ಓವರ್ ನೀಡಲಾಗುವುದೆಂದು ತೀರ್ಮಾನಿ ಸಲಾಗಿದೆ ಎಂದಿದ್ದಾರೆ.
ಈ ಪ್ರಾಯೋಗಿಕ ಕಂಬಳ ಮಹತ್ವದ್ದಾಗಿದ್ದು ಕಂಬಳದ ಯಜಮಾನರು, ವ್ಯವಸ್ಥಾಪಕರು, ಕೋಣಗಳ ಯಜ ಮಾನರು, ತೀರ್ಪುಗಾರರು, ಕೋಣ ಓಡಿಸುವವರು, ಕೋಣಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದೆ. ಕಂಬಳ ಸಮಿತಿಯ ಮತ್ತು ಶಿಸ್ತು ಸಮಿತಿ ಹಾಗೂ ತೀರ್ಪುಗಾರರ ನೇತೃತ್ವದಲ್ಲಿ ಇದು ನಡೆಯಲಿದೆಂದು ಜಿಲ್ಲಾ ಕಂಬಳ ಸಮಿತಿಯ ಡಾ| ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಿನಿ, ರಾಜಕೀಯ, ಕ್ರೀಡಾ ಕ್ಷೇತ್ರದ ದಿಗ್ಗಜರ ಬದುಕಿನ ಮೇಲೆ ಸಿನಿಮಾ ಮಾಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗೆ…
ಭಾರತೀಯ ಸಿಮ್ ಬಳಸಿ ವಿದೇಶದಲ್ಲಿ ಕೂತು ಸೈಬರ್ ವಂಚನೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರ…
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಆಮ್ ಆದ್ಮಿ ಪಕ್ಷದ ನಾಯಕ, ದೆಹಲಿ ಮುಖ್ಯಮಂತ್ರಿ…
ಮೂರು ಹೊಸ ಕ್ರಿಮಿನಲ್ ಕಾನೂನುಗಳು ಸರ್ಕಾರದ ಅಧಿಸೂಚನೆಯ ಪ್ರಕಾರ ಜುಲೈ 1ರಿಂದ ಜಾರಿಗೆ ಬರಲಿವೆ. ಇದರಲ್ಲಿ ಭಾರತೀಯ ನ್ಯಾಯ ಸಂಹಿತಾ,…
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆಗಿರುವ ದಿಲ್ಲಿ ಮುಖ್ಯಮಂತ್ರಿ…
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ರಾಯಲ್ಲಾಗಿಯೇ ಪ್ಲೇಆಫ್ಗೆ ಪ್ರವೇಶಿಸಿದೆ. ಇನ್ನು ಆರ್ಸಿಬಿ…