Categories: ಮಂಗಳೂರು

ನ್ಯೂಸ್‌ ಕರ್ನಾಟಕ ಸಂಸ್ಥೆಯ “ಕ್ರಿಸ್‌ಮಸ್‌ ಕರೋಲ್‌” 3ನೇ ದಿನದ ಸ್ಪರ್ಧೆಗೆ ಕ್ಷಣಗಣನೆ

ಮಂಗಳೂರು: ನ್ಯೂಸ್‌ ಕರ್ನಾಟಕ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ “ಕ್ರಿಸ್‌ಮಸ್ ಕರೋಲ್ 2023” ಈವೆಂಟ್‌ನ ಮೊದಲೇರಡು ದಿನ ಸ್ಪರ್ಧೆಯಲ್ಲಿ ತಂಡಗಳು ಅಸಾಧಾರಣ ಪ್ರದರ್ಶನ ತೋರಿವೆ.

ಇನ್ನು ಸ್ಪರ್ಧೆಯ ಮೂರನೇ ದಿನವಾದ ಇಂದು ಸ್ಪರ್ಧೆಯಲ್ಲಿ ದಿ 3 ಕಿಂಗ್ಸ್‌ ತಂಡ., ವಿದ್ಯಾನಿಕೇತನ್‌ ತಂಡ., ಹಾಗೂ ನವತಾರಾ ಗಾನವರುಂಡ ತಂಡ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯಲ್ಲಿ ಅಳಿಸಲಾಗದ ಗುರುತು ಹಾಕಲು ಸಿದ್ಧರಾಗಿದ್ದಾರೆ. ಪ್ರತಿ ತಂಡದ ಪ್ರದರ್ಶನವು ಸೃಜನಶೀಲತೆ ತೀರ್ಪುಗಾರರ ಮನಗೆಲ್ಲುವ ವಿಶ್ವಾಸವಿದೆ.

ಮೊದಲೆರಡಯ ದಿನದ ಸ್ಪರ್ಧೆಯಲ್ಲಿ ಸಂಗೀತದ ಆನಂದಂತೆ 3ನೇ ದಿನವಾದ ಇಂದು ಸಹ ಅದೇ ಪ್ರವೃತ್ತಿಯನ್ನು ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯು ವೈವಿಧ್ಯತೆಯ ಮೂಲಕ ಏಕತೆಯ ಆಚರಣೆಗೆ ಸಾಕ್ಷಿಯಾಗಿದ್ದು ವಿವಿಧ ಪ್ರದೇಶಗಳ ತಂಡಗ ಸಂತೋಷ ಹಂಚಿಕೊಳ್ಳುವ ವೇದಿಕೆಯಾಗಿ ಪರಿಣಮಿಸಿದೆ.

ಕ್ರಿಸ್‌ಮಸ್ ಕರೋಲ್ ಸ್ಪರ್ಧೆಯು ಕೇವಲ ಸ್ಪರ್ಧೆಯಾಗಿರದೆ ನಮ್ಮ ಕಲೆ ಅಭಿವ್ಯಕ್ತಿಯ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಇಂದು ದಿ 3 ಕಿಂಗ್ಸ್‌ ತಂಡ., ವಿದ್ಯಾನಿಕೇತನ್‌ ತಂಡ., ಹಾಗೂ ನವತಾರಾ ಗಾನವರೂಂಡ ತಂಡ ನಂತಹ ತಂಡಗಳು ಮೋಡಿ ಮಾಡುವ ಪ್ರದರ್ಶನಕ್ಕೆ ಸಜ್ಜಾಗಿವೆ.

ಸ್ಪರ್ಧೆ ಸಂಜೆ 7:00ಕ್ಕೆ NewsKarnataka ಯ್ಯೂಟೂಬ್‌ ಚಾನಲ್ ನಲ್ಲಿ ಆರಂಭಗೊಳ್ಳಲಿದೆ.

ಸ್ಪರ್ಧೆಯಲ್ಲಿನ ವಿಜೇತರಿಗೆ ಅತ್ಯಾಕರ್ಷಕ ಬಹುಮಾನ ಒದಗಿಸಲಿದೆ. ಚಾಂಪಿಯನ್ ತಂಡಕ್ಕೆ 15,000 ರೂ. ನಗದು ಬಹುಮಾನ ನೀಡಲಾಗುವುದು, ರನ್ನರ್ ಅಪ್ ಮತ್ತು ಎರಡನೇ ರನ್ನರ್ ಅಪ್ ಕ್ರಮವಾಗಿ 10,000 ರೂ. ಮತ್ತು 5,000 ರೂ. ಪಡೆಯಲಿವೆ. ಹೆಚ್ಚುವರಿಯಾಗಿ, ಐದು ತಂಡಗಳಿಗೆ ತಲಾ 1,000 ರೂ. ಸಮಾಧಾನಕರ ಬಹುಮಾನದೊಂದಿಗೆ ಗೌರವಿಸಲಾಗುತ್ತದೆ.

 

 

Ashitha S

Recent Posts

ಆಟವಾಡುತ್ತಿದ್ದ ಮಗುವಿಗೆ ಕಚ್ಚಿದ ಬೀದಿ ನಾಯಿ : ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ

ಆಟವಾಡುತ್ತಿದ್ದ ಮಕ್ಕಳ ಮೇಲೆ ಎರಗಿ ಬೀದಿ ನಾಯಿಗಳು ಕಚ್ಚಿದ ಘಟನೆ ಬೆಳಗಾವಿ ನ್ಯೂ ಗಾಂಧಿನಗರದಲ್ಲಿ ನಡೆದಿದೆ.

3 mins ago

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ನಾಲ್ಕನೇ ಆರೋಪಿ ಸುಳ್ಯದ ಮುಸ್ತಾಫ ಸೆರೆ

ದೇಶವನ್ನೇ ಬೆಚ್ಚಿಬೀಳಿಸಿದ ಬಿಜೆಪಿ ಕಾರ್ಯಕರ್ತನ ಕೊಲೆ ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಹತ್ಯೆ…

5 mins ago

ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಸುಳ್ಯದಲ್ಲಿ ಪತ್ತೆ

ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಎಲಿಜಬೆತ್ ದೀಪಿಕಾ ಪೊನ್ನುರಾಜು ಅವರನ್ನು ಪೊಲೀಸರು ಸುಳ್ಯದ ಅರಂತೋಡಿನಲ್ಲಿ ಪತ್ತೆ ಹಚ್ಚಿದ್ದಾರೆ

9 mins ago

ಪ್ಲೇ-ಆಫ್​ ರೇಸ್​ನಿಂದ ಹೊರ ಬಿದ್ದ ಪಂಜಾಬ್ ​: ಆರ್‌ಸಿಬಿ ಪಾಯಿಂಟ್ಸ್ ಎಷ್ಟು ?

ಐಪಿಎಲ್​ ಟೂರ್ನಿಯಲ್ಲಿ ಆರ್​ಸಿಬಿ ತಂಡ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ನಿನ್ನೆ ಪಂಜಾಬ್ ಕಿಂಗ್ಸ್ ತಂಡವನ್ನು 60 ರನ್​ಗಳಿಂದ ಸೋಲಿಸುವ ಮೂಲಕ,…

19 mins ago

ಉಡುಪಿ: ಇಂದಿನಿಂದ ಮೂರು ದಿನಗಳ ಕರಾವಳಿ ಕಲಾವಿದೆರ್ ತುಳು ನಾಟಕೋತ್ಸವ

ಮಲ್ಪೆಯ ಕರಾವಳಿ ಕಲಾವಿದೆರ್ ತಂಡದಿಂದ ಮೂರು ದಿನಗಳ ತುಳು ನಾಟಕೋತ್ಸವ ಇದೇ ಇಂದಿನಿಂದ (ಮೇ 10) ತೊಟ್ಟಂ ಸಾರ್ವಜನಿಕ ಗಣೇಶೋತ್ಸವ…

24 mins ago

ಇರಾನ್‌ ವಶಪಡಿಸಿಕೊಂಡ ಹಡಗಿನಲ್ಲಿದ್ದ 5 ಭಾರತೀಯ ನಾವಿಕರ ಬಿಡುಗಡೆ

ಟೆಹ್ರಾನ್ ವಶಪಡಿಸಿಕೊಂಡ ಇಸ್ರೇಲಿ-ಸಂಬಂಧಿತ ಹಡಗಿನಲ್ಲಿದ್ದ ಐವರು ಭಾರತೀಯ ನಾವಿಕರನ್ನು ಬಿಡುಗಡೆ ಮಾಡಲಾಗಿದೆ.

40 mins ago