ಮಂಗಳೂರು: ದ. ಕ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಬಗ್ಗೆ ಮಾತನಾಡಿದ ಸೌಜನ್ಯ ಪರ ಹೋರಾಟಗಾರ್ತಿ ಪ್ರಸನ್ನ ರವಿ ಆಡಿಯೋ ವೈರಲ್ ಆಗಿದೆ.
ನೋಟಾ ಹೋರಾಟದ ನಡುವೆಯೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರನ್ನು ಪ್ರಸನ್ನ ರವಿ ಹಾಡಿ ಹೊಗಳಿದ್ದಾರೆ.
ವೈರಲ್ ಆದ ಆಡಿಯೋದಲ್ಲಿ ಮಾಜಿ ಸೇನಾಧಿಕಾರಿಯಾಗಿರುವ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನ ಚುನಾವಣೆಗೆ ನಿಂತ ಬಳಿಕ ಕ್ಯಾಪ್ಟನ್ ಎನ್ನಲು ಸಾಧ್ಯವಿಲ್ಲ, ಯಾಕೆಂದರೆ, ಯೋಧ ಎಂದ ಮೇಲೆ ಯೋಧನ ರೀತಿ ಇರಬೇಕು, ದೇಶದ ಬಗ್ಗೆ ಮಾತನಾಡಬೇಕು ಎಲ್ಲರನ್ನ ಸಮನಾಗಿ ಕಾಣಬೇಕು. ಅಲ್ಲಿ ಹಿಂದು ಮುಸ್ಲಿಂ ಕ್ರಿಶ್ಚಿಯನ್ ಬರೋದಿಲ್ಲ, ಹಿಂದುತ್ವವೂ ಬರೋದಿಲ್ಲ ಎಂದು ಹೇಳಿದ್ದಾರೆ.
ಒಬ್ಬ ಕ್ಯಾಂಡಿಡೇಟ್ ಆಗಿ ಹಿಂದುತ್ವದ ಬಗ್ಗೆ ಮಾತನಾಡಲಿ ಆದರೆ ಕ್ಯಾಪ್ಟನ್ ಅನ್ನೋದನ್ನ ಪಕ್ಕಕಿಡಲಿ. ಕ್ಯಾಪ್ಟನ್ ಮಿಲಿಟರಿ, ದೇಶ ಸೇವೆ ಮಾಡಿದ್ದಾನೆ ಎಂದು ಈಗಲೂ ಗೌರವ ಕೊಡಬೇಕು ಎಂದ್ರೆ ಅರ್ಥವಿಲ್ಲ, ಈಗ ಆತ ಕೇವಲ ರಾಜಕಾರಣಿ, ಕ್ಯಾಪ್ಟನ್ ಎಂಬ ಬ್ಯಾನರ್ ಪಕ್ಕಕಿಡಲಿ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಯಾರಿಗೂ ಹೆದರದೆ ಸೌಜನ್ಯ ಹೋರಾಟಕ್ಕೆ ಬೆಂಬಲ ನೀಡಿದ್ದು, ಕದ್ರಿಯಲ್ಲಿ ನಡೆದ ಸೌಜನ್ಯ ಹೋರಾಟಕ್ಕೆ ಬರಲು ವಿಶ್ವ ಹಿಂದೂ ಪರಿಷತ್ ನಾಯಕರು, ಬಿಜೆಪಿ ನಾಯಕರಿಗೆ ಬರಲು ಧೈರ್ಯವಿರಲಿಲ್ಲ, ಆದರೆ ಪದ್ಮರಾಜ್ ಕದ್ರಿಯ ಸೌಜನ್ಯ ಹೋರಾಟ ಸಭೆಯಲ್ಲಿ ಭಾಗಿಯಾಗಿದ್ರು, ಎಂಪಿ ಸೀಟ್ ಸಿಗಲು ತೊಂದರೆಯಾಗುತ್ತೆ ಎಂದು ಯೋಚಿಸಲಿಲ್ಲ.
ಇವನು ಕ್ಯಾಪ್ಟನ್ ಅಲ್ಲಿ ತನಕ ಹೋಗಿ ಹಣ್ಣು ಹಂಪಲು ಕೊಟ್ಟು ಸೌಜನ್ಯ ಮನೆಗೆ ಹೋಗಲಿಲ್ಲ,ನಾನು ಹೇಳಿದ್ರು ಆತ ಸೌಜನ್ಯ ಮನೆಗೆ ಹೋಗಲಿಲ್ಲ ಎಂದು ಕಿಡಿ ಕಾರಿದ್ದಾರೆ.
ಬಿರುಗಾಳಿಗೆ ಇಬ್ಬರು ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು ಪೋಷಕರು ತಮ್ಮ ಮಕ್ಕಳಿಗೆ ಮುಂದಿನ ವಿದ್ಯಾಭ್ಯಸದ ಬಗ್ಗೆ ಈಗಾಗಲೇ ಯೋಚಿಸುತ್ತಿದ್ದಾರೆ
ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಬಾಲಕಿ ರುಂಡ ಪತ್ತೆಯಾಗಿದೆ
ಹಣಕ್ಕೆ ಬೇಡಿಕೆ ಇಟ್ಟು ನಗರದ ಹಾಗರಗಾ ಕ್ರಾಸ್ ಬಳಿಯ ಮನೆಯೊಂದರಲ್ಲಿ ಸೆಕೆಂಡ್ ಹ್ಯಾಂಡ್ ಕಾರು ವ್ಯಾಪಾರಿಯನ್ನು ಬೆತ್ತಲೆ ಮಾಡಿ ಹಲ್ಲೆ…
ಹೈಕೋರ್ಟ್ ಅಡ್ವೋಕೇಟ್ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಘಟ್ಟದ ಕಡೆಗಳಲ್ಲಿ ರಸ್ತೆಗಳಿಗೆ ಎರಡು ಹಂಪ್ ಗಳನ್ನ ಹಾಕಿದ್ರೆ ಅಚೀವ್ ಮೆಂಟ್ ಅಂತೆ' ಘಟ್ಟದ ಮೇಲೆ ಶಾಸಕರ ಅಚೀವ್ ಮೆಂಟ್…